Custom Search

Wednesday, September 26, 2012

ಒಂದು ಸುಂದರ ಕನಸು....


ತುಂಬ ಬ್ಯುಸಿ ಲೈಫ್, ಕೈ ತುಂಬಾ ಕೆಲ್ಸ. ತಲೆ ತುಂಬ ಯೋಚನೆಗಳು, ಅದಕ್ಕೆ ತಕ್ಕಂತೆ ಯೋಜನೆಗಳು. ಇದು ನನ್ನ ಸಾಮಾನ್ಯ ದಿನಚರಿ. ಬಹಳ ದಿನ ಆದ್ಮೇಲೆ ಈ ಜೀವನಕ್ಕೆ ಮತ್ತೆ ವಾಪಾಸ್. ಹಾಗಾಗಿ, ನನ್ನ ಪೂರ್ತಿ ಏಕಾಗ್ರತೆ ಕೆಲಸದ ಕಡೆ, ಹೀಗೆ ಕೆಲ್ಸ ಮಾಡ್ತಿರ್ಬೇಕಿದ್ರೆ ಟೈಮು ರಾತ್ರಿ 12.30 ಆಗಿದ್ದು ಗೊತ್ತೇ ಆಗ್ಲಿಲ್ಲ. ಆ ಟೈಮು ಆಗ್ತಿದ್ದಂಗೆ ಕಣ್ಣು ಯಾಕೋ ಎಳೀತಿತ್ತು ಹಾಸಿಗೆ ಕಡೆಗೆ. ಸುಮಾರು 12.35 - 12.37 ಹೊತ್ತಿಗೆ, ಕಂಪ್ಯೂಟರ್ ಆಫ್ ಮಾಡಿ ಮಲ್ಕೊಂಡೆ.

ಮಲಗಿದ ಕೆಲವೇ ಕ್ಷಣದಲ್ಲಿ ನಿದ್ದೆ ಬಂದ್ಬಿಡ್ತು. ಅದು ಯಾವಾಗಲು ಹಂಗೆ, "ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ", ಅದೇ ರೀತಿ ಹಾಸಿಗೆ ಏರಿ, ಕಣ್ಣು ಮುಚ್ಚಿದ್ರೆ ನಿದ್ದೆ ಎಲ್ಲಿದ್ರೂ ಓಡಿ ಬರುತ್ತೆ. ನಿದ್ದೆಗೆ ಹೋದ್ಮೇಲೆ ಕನಸು ಬರ್ಬೇಕು ಅಲ್ವಾ...!!! ಬಂತು... ಭಯಾನಕ... :) ಕನಸು... ಬಂದೆ ಬಿಡ್ತು.

ಹೆಸರು ತಿಳಿಯದ ಊರು, ಸುತ್ತ-ಮುತ್ತ ಪರಿಚಯವಿಲ್ಲದ ಜನ, ಹಂಗೆ ತಿರುಗಾಡ್ತಿರ್ಬೇಕಿದ್ರೆ ಅಲ್ಲಿ ಎಲ್ಲೋ ದೂರದಲ್ಲಿ ಬೆಂಕಿ ಬಿದ್ದಿದೆ. ಅಲ್ಲಿಗೆ ಹೋಗೋ ಹೊತ್ಗೆ ಬೆಂಕಿ ಆರಿಹೋಗಿ, ಬೆಂಕಿಯಲ್ಲಿ ಅರ್ಧ ಬೆಂದ, ಸುಟ್ಟ ದೇಹಗಳು. ಅದನ್ನ ನೋಡೋಕೆ ಆಗದೆ ಕಣ್ಣು ಬಿಟ್ಟು, ಶಿವ ಶಿವ ಅಂತ ಒಂದೆರಡು ನಮಸ್ಕಾರ ಹೊಡೆದು ಮತ್ತೆ ಮಲ್ಕೊಂಡೆ. ಟೈಮು ಆಗ 2.15 ಆಗಿತ್ತು.

ಸುತ್ತಾ ಗೆಳೆಯರು, ಒಂದು ಸಣ್ಣ ಟ್ರಿಪ್ ಹೋಗಿ, ಮಜಾ-ಮಸ್ತಿ ಮಾಡಿ ಬಂದದ್ದಾಯಿತು. ಈಗ ಮತ್ತೇನು ಕೆಲ್ಸ ಅಂತ ಯೋಚಿಸ್ತಿರ್ಬೇಕಿದ್ರೆ, ಯಾಕೋ ಗೊತ್ತಿಲ್ಲ ಕಣ್ರೀ ಒಂದು ದೇವಸ್ಥಾನ ಬಾ ಅಂತ ಕರೆ ಕೊಡ್ತಾ ಇತ್ತು. ""ನಾನು ಇರೋದು ಬಸವನಗುಡಿ, ಗೌರಿ-ಗಣೇಶ ಹಬ್ಬದ ದಿನ ಗಣೇಶನಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಆಗಿತ್ತು ಅನ್ಸುತ್ತೆ, ಮೂರು ಸಾರಿ ನನ್ನ ದೇವಸ್ಥಾನಕ್ಕೆ ಕರೆಸ್ಕೊಂಡ. ಆ ದಿನ ಮೂರು ಬಾರಿ ದೊಡ್ಡ ಗಣೇಶನ ದರ್ಶನ ಆಯ್ತು..."" ಬಹುಷಃ ಇದೇ ವಿಷ್ಯ ತಲೆಯ ಯಾವ್ದೋ ಮೂಲೇಲಿ ಇತ್ತು ಅನ್ಸುತ್ತೆ, ಒಂದು ದೇವಸ್ಥಾನದಿಂದ ಕರೆ ಬರ್ತಿತ್ತು. ಹೇಗೆ ಹೋದ್ರೆ ಎಲ್ಲಿ ಹೋಗ್ತೀನಿ ಏನು ಗೊತ್ತಿಲ್ಲ, ಯಾವ ದಾರೀಲಿ ಹೋಗ್ತಿದ್ದೀನಿ ಅಂತ ಗೊತ್ತಿಲ್ಲ. ಹೋಗ್ತಾ ಇದ್ರೆ ಎಂಥಾ ಖುಷಿ!!! ಎಡಗಡೆ ನೋಡ್ಬೇಕೋ, ಬಲಗಡೆ ನೋಡ್ಬೇಕೋ ಕನ್ಫ್ಯೂಷನ್. ಒಂದಕ್ಕಿಂತ ಒಂದು ಸುಂದರ. ಪ್ರಕೃತಿ ಅನ್ನೋ ಮಾಯೆ, ಪೂರ್ತಿ ಮೋಡಿ ಮಾಡ್ಬಿಟ್ಟಿದ್ಳು. ಅದೇ ಗುಂಗಲ್ಲಿ ಮುಂದೆ ಹೋಗ್ತಾ ಇದ್ದೆ, ಎದುರು ಒಂದು ಹಳೆಯ ದೇವಸ್ಥಾನ. ಹೊರಗಿಂದ ನೋಡಿದ್ರೆ ತುಂಬ ಹಳೆಯ ದೇವಸ್ಥಾನ ಅನಿಸ್ತಿತ್ತು. ಒಳಗೆ ಹೋದ್ರೆ, ನೆಲ ಎಲ್ಲ ಕಿತ್ತು ಕಾಂಕ್ರೀಟ್ ಹಾಕ್ತಿದ್ದಾರೆ. ಒಳಗೆ ಹೋಗಿ ಅಲ್ಲಿದ್ದ ಶಿವಲಿಂಗದ ದರ್ಶನ ಮಾಡಿ, ಕಣ್ಣು ಬಿಟ್ಟೆ. ಎದುರು ನನ್ನ ಗೆಳತಿ!!!! ಒಬ್ಬರನ್ನೋಬ್ರು ನೋಡಿದ್ಮೇಲೆ ಮುಖದ ಮೇಲೆ ಕಿರುನಗೆ. ಇಬ್ಬರು ದೇವರ ದರ್ಶನ ಮಾಡಿ ಆಯ್ತು. ಆಮೇಲೆ ಸಾಮಾನ್ಯವಾಗಿ ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕೂರ್ತೀವಿ ಅಲ್ವಾ... ಅದೇ ರೀತಿ ಕೂತ್ಕೊಂಡು ಮಾತಾಡೋಕೆ ಶುರು ಮಾಡಿದ್ವಿ....

ಏನು ಇವತ್ತು ನೀನು ದೇವಸ್ಥಾನಕ್ಕೆ ಬಂದಿದ್ದೀಯ???

ಇವತ್ತು ಏನು ಸ್ಪೆಷಲ್ ಅಂತ ಗೊತ್ತಿಲ್ವಾ ನಿಂಗೆ...???

ಇಲ್ಲ ಕಣೆ!!! ಈ ದಿನ ಯಾವ ಹಬ್ಬನು ಇಲ್ಲಾ, ಏನು ವಿಶೇಷ ಅಂತ ಗೊತಾಗ್ತಾ ಇಲ್ಲಾ ನೀನೆ ಹೇಳೆ... :)

ಸ್ವಲ್ಪ ಹೊತ್ತು ಕಾದು ನೋಡು ಗೊತ್ತಾಗುತ್ತೆ (ಒಂದು ತುಂಟ ನಗೆ)...

ತುಂಬ ಚೆನ್ನಾಗಿ ಕಾಣಿಸ್ತಿದ್ದೀಯಾ ಕಣೆ... ಆದ್ರೆ ಏನು ಸ್ಪೆಷಲ್ ಅಂತ ಇನ್ನು ನನ್ನ ತಲೆಗೆ ಹೊಳೀತಿಲ್ಲ...
(ಮತ್ತೆ ಅದೇ ತುಂಟ ನಗೆ)

ನೋಡ್ತಾ ಇರು ಹೀಗೆ ನನ್ನ .... ಇನ್ನು ಸ್ವಲ್ಪ ಹೊತ್ತಲ್ಲೇ ಗೊತ್ತಾಗುತ್ತೆ... :)

ಈಗ ಬೇರೆ ಇನ್ನೇನು ಕೆಲ್ಸ ಇದೆ ಹೇಳು, ಅದೇ ಮಾಡ್ತೀನಿ ಚಿನ್ನು....

ಸರಿ ಬಾ ಹೋಗೋಣ, ದೇವಸ್ಥಾನ ಪ್ರದಕ್ಷಿಣೆ ಹಾಕ್ಬೇಕು... ನಾ ಮುಂದೆ ಹೋಗ್ತೀನಿ, ನೀ ಹಿಂದೆ ಬಾ...

ಸರಿ ಕಣೆ.. ನಡೆ ಮುಂದೆ.. ನಾ ನಿನ್ನ ಹಿಂದೆ... :) 

ಅವಳು ಮುಂದೆ ಹೋಗ್ತಿದ್ದಾಳೆ, ನಾನು ಅವಳ ಹಿಂದೆ ಹೋಗ್ತಿದ್ದೇನೆ... ಏನೋ ಸ್ಪೆಷಲ್ ಅನಿಸ್ತಿದೆ.!!! ಏನು ಏನು ಏನು... :) ಒಹ್...!!! ನನ್ನ ಇಷ್ಟದ ಲಂಗದಾವಣಿ ಹಾಕಿದ್ದಾಳೆ.... :) ಓಡಿ ಹೋಗಿ.. ಎದುರು ನಿಂತು...

ಹೇಳು...

ಏನ್ ಹೇಳ್ಬೇಕು???

ಏನು ಹೇಳ್ಬೇಕು ಅಂತ ನಿನ್ನ ಮನಸಲ್ಲಿದೆಯೋ ಅದು...

ಏನು ಇಲ್ಲಾ... :) (ಮತ್ತದೇ ತುಂಟ ನಗೆ)

ಏನು ಹೇಳೋದಿಲ್ವಾ??? ಸರಿ.. ಹಾಗಿದ್ರೆ ಈ ಬಟ್ಟೆ ಯಾಕೆ???
(ಅಲ್ಲೇ ಒಂದೆರಡು ಪುಟ್ಟ ಹೆಣ್ಣು ಮಕ್ಕಳು ಆಟ ಆಡ್ತಿದ್ವು, ಆ ಮಕ್ಕಳು ಕೂಡ ಲಂಗ-ದಾವಣಿ ಹಾಕಿದ್ರು)

ಅಲ್ಲಿ ನೋಡು... ಆ ಮಕ್ಳು ಕೂಡ ಇದೆ ರೀತಿ ಬಟ್ಟೆ ಹಾಕಿದ್ದಾರೆ.. ಅದರಲ್ಲಿ ಏನು ಸ್ಪೆಷಲ್???

ಹೇಳೆ....

ಮೊದ್ಲು ಪ್ರದಕ್ಷಿಣೆ ಹಾಕು.... ನನ್ನ ಹಿಂದೆ ಬಾ.... :)

ಮೂರು ಪ್ರದಕ್ಷಿಣೆ ಹಾಕಿದ್ದು ಆಯ್ತು. ಮತ್ತೆ ಅವ್ಳು ಮುಂದೆ ಹೋಗಿದ್ದಾಳೆ ನಾನು ಅವಳ ಹಿಂದೆ ಹೋಗ್ತಿದ್ದೇನೆ. ಯಾಕೋ ಗೊತ್ತಿಲ್ಲ ಕಣ್ರೀ, ಮತ್ತೆ ಅವಳು ಏನೋ ಹೇಳಬೇಕಿದೆ ಅಂತ ಅನಿಸ್ತು... ಮತ್ತೆ ಓಡಿ ಹೋಗಿ.. ಅವಳ ಎದುರು ನಿಂತು...

ಹೇಳ್ತೀಯಾ? ಇಲ್ವಾ??? :)

ಏನು ಇಲ್ಲಾ ಕಣೋ.. ಹೇಳ್ದೆ ಅಲ್ವಾ.... ಸುಮ್ನೆ ನನ್ ಹಿಂದೆ ಬಾ... :) 

ಆಗೋದಿಲ್ಲ.. ನಾ ಮುಂದೆ ಹೋಗ್ತೀನಿ... ನೀನೆ ಹಿಂದೆ ಬಾ... 

ಸರಿ... :) (ಮೆಲುದನಿಯಲ್ಲಿ : ಇನ್ಮುಂದೆ ಅದು ಇದ್ದಿದ್ದೆ ಅಲ್ವಾ... :) )

ಇನ್ನೊಂದ್ಸಲ ಹೇಳು....

ಏನು ಇಲ್ಲಾ... :)
(ನೋಡೋಕೆ ಕಡ್ಡಿ ರೀತಿ ಇದ್ರೂ, ತಿಂಡಿಪೋತಿ :) )

ಸೌತೆಕಾಯಿ ಕೊಡ್ಸೋ ನಂಗೆ....

ಸರಿ ಬಾ... 
(ಕೊಡ್ಸಿದ್ದು ಆಯ್ತು, ಇದೆ ತರ ಸೌತೆಕಾಯಿ ಮತ್ತೆ ಹಣ್ಣು ತಿಂತಿದ್ರೆ ದಪ್ಪ ಯಾವ ಕಡೆಯಿಂದ ಆಗೋದು... )
ಮುಂದೆ ಹೋಗ್ತಾ ಇದ್ದೇನೆ... ಹಿಂದೆ ಬರ್ತಾ ಇದ್ದಾಳೆ.. ಪಾಪಿ.. ತಿನ್ನು ಅಂತ ಆಫರ್ ಕೂಡ ಮಾಡ್ಲಿಲ್ಲ. ಹಾಗೆ ಅವ್ಳು, ಅವ್ಳು ತಿಂದಿದ್ದು ನಂಗೆ ಕೊಡ್ತಿರ್ಲಿಲ್ಲ, ನಾ ತಿಂದದ್ದು ತಗೊತಿರ್ಲಿಲ್ಲ.

ಉಪ್ಪು ಬೇಕಾ ಉಪ್ಪು....???? 

ಬೇಡ ಹೋಗೆ.... ಉಪ್ಪು ಬೇಡ, ಸೌತೆಕಾಯಿ ಕೂಡ ಬೇಡ.. ಎಲ್ಲ ನೀನೆ ತಿನ್ನು...

ನಾವು ಮಕ್ಕಳಿದ್ದಾಗ ಉಪ್ಪುಮೂಟೆ ಆಟ ಆಡಿದ ಜ್ಞಾಪಕ ಇರುತ್ತೆ ಅನ್ಸುತ್ತೆ ನಿಮ್ಗೆ, ಸ್ವಲ್ಪ ಆ ಟೈಮ್ ಗೆ ಹೋಗಿಬನ್ನಿ...
ಹಿಂದೆಯಿಂದ ಓಡಿ ಬಂದವಳೇ ಬೆನ್ನಮೇಲೆ ಏರಿ ನನ್ನ ಹಿಡ್ಕೊಂಡ್ಳು.. ಹಿಂದೆಯಿಂದ ಬಂದು ಕುತ್ತಿಗೆಗೆ ಕೈ ಹಾಕಿ ಬೆನ್ನ ಮೇಲೆ ಹತ್ತಿದ್ರೆ, ನಾನು ಕೂಡ ಕೈ ಹಿಂದೆ ಹಾಕಿ ಹಿಡ್ಕೋಳ್ಳಲೇ ಬೇಕು... ಹಿಡ್ಕೊಂದ್ಬಿಟ್ಟೆ... ಉಪ್ಪಿನಮೂಟೆ ಬೆನ್ನಮೇಲೆ ಏರಿಯೇ ಬಿಡ್ತು... :)

ಈಗ್ಲಾದ್ರೂ ಹೇಳು ಬಂಗಾರ....

ನಾ ಹೇಳೋ ದಾರೀಲಿ ನನ್ನ ಹೊತ್ಕೊಂಡು ಹೋಗು... :)

ಈಗಾಗ್ಲೇ ಹೊತ್ಕೊಂಡಿದ್ದೀನಿ ಕಣೆ.. ನೀ ಹೇಳೋ ದಾರೀಲಿ ಹೋಗೋದು ಅಷ್ಟೇ... :)

ಸೀದಾ ಹೋಗು, ರೈಟ್ ಹೋಗು, ರೈಟ್ ಹೋಗು, ಲೆಫ್ಟ್ ಹೋಗು.. ಲೆಫ್ಟ್ ಹೋಗು.. ರೈಟ್ ಹೋಗು... ಹೋಗ್ತಾ ಹೋಗ್ತಾ... ಅವ್ಳು ತಿಂತಿದ್ದ ಸೌತೆಕಾಯಿ ನನಗು ತಿನ್ಸಿದ್ಳು.. ಮತ್ತೆ ಅವ್ಳು ತಿಂದ್ಳು....ಹೀಗೆ ಅದು ಬದಲಾವಣೆ ಆಗ್ತಿತ್ತು... ಪ್ರತಿಸಲ ಕೇಳ್ದಾಗ್ಲು... ಏನಿಲ್ಲಾ ಅಂತ ಹೇಳ್ತಿದ್ಳು....

ನಿಂತ್ಕೋ.... 

ಹಾ ನಿಂತೇ... ಮುಂದೆ???? 

ಏನಿಲ್ಲಾ.... :) ಇಳಿಸು ನನ್ನ ಕೆಳಗೆ....

ಕೆಳಗೆ ಇಳಿಸಿದ ಮೇಲೆ ಮುಂದೆ ಬಂದು ನಿಂತ್ಳು.....ನಗ್ತಿದ್ದಾಳೆ,,, ನನ್ನೇ ನೋಡ್ತಿದ್ದಾಳೆ...

ಹಂಗೆ ನೋಡ್ಬೇಡ ಕಣೆ... ನಂಗೆ ಕಷ್ಟ ಆಗುತ್ತೆ.... ಹೇಳು... ಬೇಗ... 

ಏನಿಲ್ಲಾ.... ಸುತ್ತಾ ನೋಡು.. ಒಂದ್ಸಲ....

ಅರೆ..!!! ಅದೇ ದೇವಸ್ಥಾನ... (ದೇವಸ್ಥಾನದ ಮುಂಬಾಗಿಲಲ್ಲಿ ನಿಂತಿದ್ವಿ ಇಬ್ರು. ಅವ್ಳನ್ನ ಹೊತ್ಕೊಂಡು ಆ ದೇವಸ್ಥಾನ ಸುತ್ತು ಹಾಕಿದ್ದೀನಿ... ನಿಜವಾಗಿ ಹೇಳ್ಬೇಕು ಅಂದ್ರೆ ಸುತ್ತು ಹಾಕ್ಸಿದ್ದಾಳೆ....) ಹ.... ಮುಂದೆ...????

ಒಬ್ರನ್ನೊಬ್ರು ನೋಡ್ತಾನೆ ಇದ್ವಿ...
ಬಂದು ಗಟ್ಟಿಯಾಗಿ ಅಪ್ಕೊಂಡು, ತಲೆ ಮೇಲೆತ್ತಿ... ಕಣ್ಣನ್ನೇ ನೋಡ್ತಾ....

ನೀನಂದ್ರೆ ನಂಗೆ ಇಷ್ಟ ಕಣೋ.... I Love You.... :) (ಎರಡು ಹನಿ ಕಣ್ಣಿಂದ ಕೆಳಗೆ ಇಳೀತಾ ಇತ್ತು...)

ಅವಳ ಕಣ್ಣನ್ನೇ ನೋಡ್ತಾ... ಕೆಳಗೆ ಇಳೀತಿದ್ದ ಹನಿಗಳನ್ನ ಒರೆಸ್ತಾ...

ನೀನಂದ್ರೆ ನಂಗು ಇಷ್ಟ ಕಣೆ... I Love You tooo ಚಿನ್ನು.... 

ಹಣೆಗೆ ಮುತ್ತಿಟ್ಟೆ... ಕಣ್ಣುಬಿಟ್ಟೆ.... ಟೈಮು ನೋಡಿದ್ರೆ ಬೆಳಗಿನ ಜಾವ  4.37.

ಒಂದು ಸುಂದರ ಕನಸು.... :) ಆದ್ರೂ ತುಂಬ ಅದ್ಭುತ ಅನುಭವ.... ಮರ್ಯೋದಕ್ಕೆ ತುಂಬ ಕಷ್ಟ ಕಣ್ರೀ... ಏನೇ ಆಗ್ಲಿ ಅದು ಕನಸು ಮಾತ್ರ... ಅಷ್ಟಕ್ಕೇ ಖುಷಿ ಪಡಬೇಕು.... ಜಾಸ್ತಿ ಆಸೆ ಇಟ್ಕೊಬಾರ್ದು... ಬಿಸಿಲುಕುದುರೆ ಹಿಡಿತೀವಿ ಅಂತ ಅದರ ಹಿಂದೆ ಓಡಿದ್ರೆ ಅದು ಕೈಗೆ ಸಿಗುತ್ತಾ????

Monday, September 24, 2012

8.15AM to 9.24PM ....

ಏನಪ್ಪಾ ಇದು ಟೈಟಲ್ ಹಿಂಗಿದೆ ಅಂತ ತಲೆ ಕೆಡಿಸ್ಕೋಬೇಡಿ, ಅದರ ಅರ್ಥ ಇಷ್ಟೇ. ಬೆಳ್ಗೆ 8.15 ರಿಂದ ರಾತ್ರಿ 9.24 ವರೆಗೆ, ಅಂದ್ರೆ ಬೆಳಿಗ್ಗೆಯಿಂದ ರಾತ್ರಿವರೆಗೂ ಬೀದಿ ಸುತ್ತಿದರ ಬಗ್ಗೆ ಈ ಆರ್ಟಿಕಲ್ ಅಂತ....

ಬೆಂಗಳೂರಿಂದ ಕೇವಲ 130-140 ಕಿ.ಮೀ. ಅಷ್ಟೇ, ನಾನು ಬೈಕ್ ಅಲ್ಲಿ ಹೋಗೋಣ ಅಂತ ಅಂದ್ಕೊಂಡಿದ್ದೆ. ಆದ್ರೆ ಮನೇಲಿ ಬಿಡ್ಬೇಕಲ್ವ, ನನ್ನ ಕೆಲವು ಗೆಳಯರು ಕೂಡ ಬೇಡ ಅಂತ ಹೇಳಿದ್ರು. ಹಾಗಾಗಿ ಬೈಕ್ ಪ್ಲಾನ್ ಬಿಟ್ಟು ಬಸ್ಸಲ್ಲಿ ಹೋಗೋದು ಅಂತ ರೆಡಿ ಆಗಿದ್ದೆ. ಮನೆಯಲ್ಲಿ ಅಮ್ಮ ಅರೆಮನಸ್ಸಿನಿಂದ ಹೋಗು ಅಂತಿದ್ರು. ನಾನು ಒಬ್ನೇ ಹೋಗೋದು ಅವ್ರಿಗೆ ಇಷ್ಟ ಇರ್ಲಿಲ್ಲ, ಗೆಳೆಯರ ಜೊತೆ ಹೋದ್ರೆ ಚೆನ್ನಾಗಿರುತ್ತೆ ಅಂತ ಹೇಳ್ತಿದ್ರು (ಮಂಡ್ಯದ ಕಡೆ ಕಾವೇರಿ ಗಲಾಟೆ ಅನ್ನೋದು ಬೇರೆ ಅವರ ತಲೇಲಿ ಇತ್ತು...) ... ಆದ್ರೆ ಏನ್ ಮಾಡೋಣ ಗೆಳಯ/ಗೆಳತಿಯರೆಲ್ಲ ಬ್ಯುಸಿ.... ಅದ್ಕೆ ನನ್ನ ಪಾಡಿಗೆ ನಾನು ಹೋಗಿ ಬರೋದು ಅಂತ ನಿರ್ಧಾರ ಮಾಡ್ಕೊಂಡು ಹೋಗಿ ಬರ್ತೀನಿ ಅಂತ ಹೇಳಿ ಹೊರಟೆ.

ಶನಿವಾರ 22-sept-2012 ಬೆಳಿಗ್ಗೆ 8.15 ರ ಸುಮಾರಿಗೆ ಮನೆ ಇಂದ ಹೊರಟ ನಾನು, ಐದು-ಹತ್ತು ನಿಮಿಷದಲ್ಲಿ ಶ್ರೀನಗರ ಬಸ್ಸ್ಟ್ಯಾಂಡ್ ಸೇರ್ಬಿಟ್ಟೆ. ಅಲ್ಲಿ ನೋಡಿದ್ರೆ, ಮೇಲುಕೋಟೆ ಗೆ ಹೋಗುವ ಬಸ್... ಆಹಾ.. ಖುಷಿ.. ಮಂಡ್ಯ ಗೆ ಹೋಗಿ ಹೋಗ್ಬೇಕು ಅಂದ್ಕೊಂಡಿದ್ದೆ, ನಾಗಮಂಗಲಗೆ ಹೋಗಿ ಹೋಗ್ಬೇಕು ಅಂದ್ಕೊಂಡಿದ್ದೆ, ಆದ್ರೆ ಅಲ್ಲಿ ನೋಡಿದ್ರೆ ಡೈರೆಕ್ಟ್ ಬಸ್... ಹತ್ಕೊಂಡು ಕೂತ್ಕೊಂದ್ಬಿಟ್ಟೆ. ಐದು ನಿಮಿಷ ಅದ್ಮೇಲೆ.. ಮತ್ತೊಂದು ಬಸ್ ಬಂತು, ನಾನು ಕೂತಿದ್ದ ಬಸ್ ನ ಕ್ಲೀನರ್ ಬಂದು, ಈ ಬಸ್ ಇನ್ನೂ ಲೇಟ್... ಆ ಬಸ್ ಅಲ್ಲಿ ಹೋಗಿ ಅಂತ ಹೇಳ್ದ. ಅದು ಕೂಡ ಪ್ರೈವೇಟ್ ಬಸ್, KSRTC ಕಡೆಯಿಂದ ಜಾಸ್ತಿ ಬಸ್ ಇಲ್ಲ, ಇದರ ಉಪಯೋಗ ಪಡೆದುಕೊಳ್ಳುವ ಪ್ರೈವೇಟ್ ಟ್ರಾನ್ಸ್ಪೋರ್ಟ್ ನವರು, ಒಂದಷ್ಟು ಬಸ್ ಹಾಕಿದ್ದಾರೆ. ಸರಿ ಇಷ್ಟೆಲ್ಲಾ ಆಯ್ತು, ಆ ಬಸ್ ಹತ್ತಿ ಕೂತ್ಕೊಂಡೆ, ಎರಡು ಸೀಟ್ ಇರೋ ಕಡೆ ಸಿಂಗಲ್ ಆಗಿ ಕಿಟಕಿ ಸೀಟ್ ಅಲ್ಲಿ ಕೂತ್ಕೊಂಡೆ. ಸುಮಾರು 8.45 ಹೊತ್ಗೆ ಬಸ್ ಹೊರಡೋಕೆ ಶುರು ಆಯ್ತು. ಒಬ್ನೇ ಕೂತ್ಕೊಂಡು ಏನ್ ಮಾಡ್ಲಿ, ಸ್ವಲ್ಪ ದೂರ ಹೋಗೋ ಹೊತ್ಗೆ ನಿದ್ದೆಗೆ ಶರಣಾದೆ. ನಿದ್ದೇಲಿ ನನ್ ಪಕ್ಕ ಯಾವ್ದೋ ಸೂಪರ್ ಫಿಗುರ್ ಬಂದ ಹಾಗೆ ಕನಸು ಕಾಣ್ತಾ, ಯಾವ್ದೋ ಲೋಕಕ್ಕೆ ಹೋಗ್ಬಿಟ್ಟೆ.

ಕಣ್ಣು ಬಿಟ್ರೇ, ಆಹಾ, ಎಂಥ ಖುಷಿ. ಏನೋ ಸಂಭ್ರಮ. ಐದು ನಿಮ್ಷ ಆಯ್ತು, ಹತ್ತು ನಿಮ್ಷ ಆಯ್ತು.. ಎಷ್ಟು ಹೊತ್ತು ಕಿಟಕಿ ಕಡೆ ನೋಡಲಿ. ಈಗ ಬೇರೆ ಸಹವಾಸ ದೋಷ, ಸುಮ್ನೆ ಕೂರೋಕೆ ಕಷ್ಟ, ಏನಾದ್ರು ಮಾತಾಡ್ಬೇಕು. ಸರಿ ಮಾತು ಶುರು ಮಾಡೋಣ ಅಂತ ನಿರ್ಧಾರ ಮಾಡಿ, ಕೇಳೆ ಬಿಟ್ಟೆ

ಅಜ್ಜಿ, ಯಾವೂರು ನಿಮ್ದು?

ಅಯ್ಯೋ!!! ನನ್ನದಾ ಮಗ, ನಾಗಮಂಗಲ. ಅದೇ ನಾಗಮಂಗಲದಲ್ಲಿ TB ಐತೆ ಅಲ್ವಾ? ಅಲ್ಲೇ ನಮ್ಮನೆ. ನಾಲ್ಕೆಜ್ಜೆ ಅಲ್ಲಿಂದ. ಅಲ್ಲಿ TB ಹತ್ರ ಇಳ್ಕೊಂಡು ಹಂಗೆ ಸೀದಾ ಟೌನ್ ಕಡೆ ನಡ್ಕೊಂಡು ಹೋದ್ರೆ, ನಾಲ್ಕೆಜ್ಜೆ, ಹತ್ತೋ-ಹನ್ನೊಂದನೇ ಮನೆ, ಎರಡು ಗಲ್ಲಿ ದಾಟಿದ್ಮೇಲೆ.
(ಅಲ್ಲಿಗೆ ನಿಲ್ಲಿಸಿ ನಾನು ಮಾತು ಮುಂದುವರೆಸ್ದೆ)

ಒಹ್!!! ಎರಡೇ ಗಲ್ಲಿ ಅದ್ಮೇಲೆ ಹತ್ತೋ-ಹನ್ನೊಂದನೇ ಮನೆ, ನಾಲ್ಕೆಜ್ಜೆ. ಜಾಸ್ತಿ ಹತ್ರ ಆಯ್ತು ಬಿಡಿ. ಮತ್ತೆ ಇಲ್ಲಿ ಬಂದಿದ್ದು?

ಅಯ್ಯೋ, ಅದಾ ಏನ್ ಹೇಳ್ಲಿ ಮಗ, ನನ್ ಮಗಳನ್ನ ಇಲ್ಲೇ ಬೆಂಗಳೂರಿಗೆ ಕೊಟ್ಟಿದ್ದೀವಿ, ಹಬ್ಬಕ್ಕೆ ಅಂತ ಬಂದಿದ್ದೆ. ಏನ್ ಜೋರು ಮಾಡಿದ್ರು ಅಂತೀಯ ಹಬ್ಬಾನ, ಆ ಮೊಮ್ಮಕ್ಳಂತೂ ಏನ್ ಚೂಟಿ ಗೊತ್ತಾ. ನಿಂತ ಕಡೆ ನಿಲ್ಲೋದಿಲ್ಲ, ಕೂಟ ಕಡೆ ಕೂರೋದಿಲ್ಲ... ಇನ್ನೂ ಐದು ವರ್ಷ ಇಲ್ಲ ಅವಕ್ಕೆ ಎಷ್ಟು ಮಾತಾಡ್ತಾವೆ ಅಂದ್ರೆ ಕೇಳೋಕೆ ಎರಡು ಕಿವಿ ಸಾಲ್ದು.....

ಸರಿ... ಸರಿ.. ಈ ಬಸ್ಸು ನಾಗಮಂಗಲಕ್ಕೆ ಎಷ್ಟು ಹೊತ್ಗೆ ಹೋಗುತ್ತೆ ಅಜ್ಜಿ...

ಅಯ್ಯೋ... ಒಂದು 11.45-12.00 ಟೈಮ್ ಗೆ ಹೋಗುತ್ತೆ ಮಗ. ಈ ___________ ಮಗ, ಅಲ್ಲಲ್ಲಿ ನಿಲ್ಲಿಸ್ಕೊಂಡು, ಹೋಗೋ-ಬರೋರ್ನೆಲ್ಲ ಹತ್ತಿಸ್ಕೊಂಡು ಅಲ್ಲಿಗೆ ಹೋಗೋ ಹೊತ್ಗೆ ನನ್ ಜೀವ ಹೋಗ್ಬಿಡುತ್ತೆ. ಇವ್ನಿಂಗೆ ಏನ್ ಬಂದೈತೆ ದೊಡ್ರೋಗ, ಸೀದಾ ಹೋಗೋಕೆ ಆಗೋಲ್ವಾ???? ಅಲ್ಲಲ್ಲಿ ನಿಲ್ಲಿಸ್ಕೊಂಡು ಹೋದ್ರೆನೆ ಈ ______________ ಮಕ್ಳಿಗೆ ತಿಂದದ್ದು ಜೀರ್ಣ ಆಗೋದು........

ಅಜ್ಜಿ, ಊರಲ್ಲಿ ಒಬ್ರೇನಾ?

ಅಯ್ಯೋ... ಒಬ್ಳೆ ಎಲ್ಲಿ ಇರೋಕೆ ಆಗುತ್ತೆ. ಒಬ್ಳೆ ಇರೋಕೆ ಬಿಟ್ಟಾರ ಊರ ಜನ. ಅವ್ನೆ ನನ್ ಗಂಡ. ಕೈಗೆ ಎರಡು ಕೊಟ್ಟು ಆಮೇಲೆ ಕೈಲಾಗ್ದಂಗೆ ಮನೆಗೆ ಬಿದ್ದವ್ನೆ, ಅವ್ನಿಗೂ ನಾನೇ ತಂದು ಹಾಕ್ಬೇಕು.....


ಹೀಗೆ ಹೋಯ್ತು ನಮ್ಮ ಮಾತುಕತೆ... ನಾಗಮಂಗಲ ಬಂದೇ ಬಿಡ್ತು... ಅಜ್ಜಿಗೆ ಟಾಟಾ ಹೇಳಿ ಕಳಿಸ್ದೆ. ನಾಗಮಂಗಲ ಸೇರೋಹೊಟ್ಗೆ ಟೈಮು 12.00 ಆಗಿತ್ತು. ಅಲ್ಲಿ ಒಂದು ಹದಿನೈದು ನಿಮ್ಷ ಟೀ ಬ್ರೇಕ್ ಬೇರೆ. ಆಯ್ತು.. ಡ್ರೈವರ್, ಕಂಡಕ್ಟರ್, ಕ್ಲೀನರ್ ಎಲ್ಲ ಹೋಗಿ ಟೀ ಕುಡ್ಕೊಂಡು ಬಂದ್ರು. ಬಸ್ ಮತ್ತೆ ಹೊರಟಾಗ 12.20. ಮತ್ತೆ ವಿಶೇಷ ಏನು ಇಲ್ಲ, ಮೇಲುಕೋಟೆ ರೀಚ್ ಅದಾಗ 12.50 ಆಗಿತ್ತು. ಅಮ್ಮಂಗೆ ಒಂದು ಕಾಲ್ ಮಾಡಿ, ಅಲ್ಲೇ ಇದ್ದ ಜನರನ್ನ ಕೇಳ್ತಾ ಯೋಗಾನರಸಿಂಹ ದೇವಸ್ಥಾನದ ಕಡೆ ಹೊರಟೆ.

ಸಾಮಾನ್ಯವಾಗಿ ದೇವರಿಗೆ ಕಾಯಿ-ಹಣ್ಣು ಕೊಟ್ಟು ಪೂಜೆ ಮಾಡ್ಸೋದು, ತಟ್ಟೆಗೆ ಕಾಸು ಹಾಕೋದು ನಂಗೆ ಇಷ್ಟ ಆಗೋಲ್ಲ. ಆದ್ರೆ ಯಾಕೋ ಗೊತ್ತಿಲ್ಲ, ಬಹುಷಃ ಅಮ್ಮ ಬೈತಾರೆ ಅಂತಾ ಅಂದ್ಕೊಂಡು, ಕಾಯಿ-ಹಣ್ಣು ತಗೊಂದ್ಬಿಟ್ಟೆ. ಅದಕ್ಕೆ 30 ರೂಪಾಯಿ (ಒಂದೇ ತೆಂಗಿನ ಕಾಯಿ, ನಾಲ್ಕೈದು ಬಾಳೆಹಣ್ಣು, ನಾಲ್ಕು ಕಡ್ಡಿ, ಎರಡು ಕರ್ಪೂರ ಮತ್ತೆ ಅರಿಶಿನ-ಕುಂಕುಮ). ಚಪ್ಪಲಿ ಅಲ್ಲೇ ಬಿಟ್ಟು, ಯೋಗಾನರಸಿಂಹ ದೇವಸ್ಥಾನದ ಕಡೆಗೆ ನನ್ನ ಹೆಜ್ಜೆ. ಮೆಟ್ಟಿಲುಗಳು ಅಷ್ಟೇನೂ ಜಾಸ್ತಿ ಇಲ್ಲ, ಟ್ರೆಕ್ಕಿಂಗ್, ಟ್ರಿಪ್ ಬೇಜಾನ್ ಹೋಗಿದ್ದ ನಂಗೆ ಅದೇನು ಅಷ್ಟು ಕಷ್ಟ ಅನಿಸ್ಲಿಲ್ಲ. ಟ್ರೆಕ್ಕಿಂಗ್ ಹೋಗಿ ತುಂಬಾ ದಿನ ಆಗಿದ್ರಿಂದ, ಮೇಲೆ ಸುಡು ಬಿಸಿಲು ಬೇರೆ, ಆಗಾಗ ಸ್ವಲ್ಪ ಸುಸ್ತು ಅನಿಸ್ತಿತ್ತು. ವಯಸ್ಸು ನೋಡಿ, ಹೇಳಿದ ಮಾತು ಕೇಳೋದಿಲ್ಲ, ಒಂದೇ ಉಸಿರಲ್ಲಿ ಹತ್ತೇಬಿಟ್ಟೆ. ದೇವಸ್ಥಾನದ  ಒಳಗೆ ಕೂಡ ಹೋಗ್ಬಿಟ್ಟೆ.

ಒಂದೇ ಕ್ಷಣ, ಒಂದೇ ಸೆಕೆಂಡ್ ಏನಾದ್ರು ಅನ್ಕೊಳ್ಳಿ....
ಆಕಾಶ ತಲೆಮೇಲೆ ಬಿದ್ದಂಗೆ ಆಯ್ತು, ಉಸಿರು ಕಂಟ್ರೋಲ್ ಮಾಡೋಕೆ ಆಗ್ತಿಲ್ಲ, ಹೃದಯ ಬಡ್ಕೋತಾ ಇದೆ. ಆ ಒಂದು ಕ್ಷಣ ತಲೇಲಿ ಸಾವಿರ ಯೋಚನೆಗಳು....

ಆಹಾ!! ಎಂಥ ಖುಷಿ, ದೇವಸ್ಥಾನದಲ್ಲಿ ಜೀವ ಹೋದ್ರೆ.. ಅದಕ್ಕಿಂತ ಪುಣ್ಯ ಮತ್ತೇನಿದೆ. ಯಾವುದೇ ತಂಟೆ ಇಲ್ಲ, ಸುತ್ತ ಅಳೋರು ಯಾರು ಇಲ್ಲ. ಯಾರ್ಗೂ ನೋವು ಮಾಡ್ತಿಲ್ಲ. ಕಷ್ಟನೇ ಪಡದೆ ಜೀವ ಹೋಗ್ಬಿಡ್ತಿದೆ........

ಅಯ್ಯೋ ಇಲ್ಲೇ ನಾನು ಸತ್ತು  ಹೋದ್ರೆ, ಮನೆಗೆ ಯಾರು ಹೇಳೋರು, ಅಮ್ಮ ಎಷ್ಟು ನಂಬಿಕೆ ಇಟ್ಕೊಂಡು  ನನ್ನ ಕಳ್ಸಿದ್ದಾರೆ. ಅವ್ರಿಗೆ ಹುಷಾರಾಗಿ ಹೋಗಿ ಬರ್ತೀನಿ ಅಂತಾ ಹೇಳಿದ್ದೀನಿ, ಈಗ ವಾಪಾಸ್ ಬರೋದಿಲ್ಲ ಅಂತಾ ಗೊತ್ತಾದ್ರೆ???? ಅವ್ರಿಗೆ ಈ ವಿಷ್ಯ ತಿಲಿಸೋರು ಯಾರು??? ಈ ವಿಷ್ಯ ಕೇಳಿ ಅವರ ಸ್ಥಿತಿ ಏನಾಗುತ್ತೆ???  .........
(ಊರಿಂದ ಊರಿಗೆ ಹೋಗಬೇಕಿದ್ರೆ ದಯವಿಟ್ಟು ಮತ್ತೊಬ್ರು ಜೊತೆ ಇದ್ರೆ ಒಳ್ಳೇದು ಅನ್ಸುತ್ತೆ)

ಬಿಡಿ, ಹೊರಗೆ ಬಂದು, ಕೂತ್ಕೊಂಡು ನಾನು ಯಾವಾಗ್ಲು ಮಾಡೋ ಹಾಗೆ, ಉಸಿರು ಕಂಟ್ರೋಲ್ (ಪ್ರಾಣಾಯಾಮ) ಮಾಡೋಕೆ ಶುರು ಮಾಡ್ಕೊಂಡೆ. ಎರಡು ಮೂರು ನಿಮಿಷ ಕೂತ್ಕೊಂಡು ಪ್ರಾಣಾಯಾಮ ಮಾಡಿದ್ಮೇಲೆ ನನ್ನ ಪೂರ್ತಿ ದೇಹ ಕಂಟ್ರೋಲ್ ಗೆ ಬಂತು.

ಆಮೇಲೆ ಎದ್ದು, ಮತ್ತೆ ದೇವಸ್ಥಾನದ ಒಳಗೆ ಹೋಗಿ, ಕಾಯಿ-ಹಣ್ಣು ಕೊಟ್ರೆ, ಹೊಡೆದ ಕಾಯಿಂದ ಒಂದೇ ಚಿಪ್ಪು ಮಾತ್ರ ವಾಪಾಸ್ ಬಂತು. ಒಂದು ಅಲ್ಲೇ ಮಾಯಾ.... ತಟ್ಟೆಗೆ ಕಾಸು ಹಾಕೋಣ ಅಂದ್ಕೊಂಡಿದ್ದೆ, ವಾಪಾಸ್ ಒಳಗೆ ಹಾಕ್ಕೊಂಡೆ, ತಟ್ಟೆಗೆ ಹಾಕಲಿಲ್ಲ. ಪೂಜೆ ಆಯ್ತು, ದೇವಸ್ಥಾನದ ಹೊರಗೆ ನಿಂತ್ಕೊಂಡು ಹಂಗೆ ಒಂದು ವ್ಯೂ ನೋಡಿ, ಒಂದಷ್ಟು ಫೋಟೋಸ್ ಕ್ಲಿಕ್ ಮಾಡ್ಕೊಂಡು, ವಾಪಸ್ ಕೆಳಗೆ ಇಳ್ಯೋಕೆ ಶುರು. ಇಳಿಬೇಕಿದ್ರೆ, ಒಬ್ಬ ಹುಡುಗ ಬಂದ, ಅಣ್ಣ, ನನ್ನ ನಿನ್ನ ತಮ್ಮ ಅನ್ಕೋ, ಒಂದು ರುಪಾಯಿ ಕೊಡು, ಬುಕ್ ತಗೋಬೇಕು ಅಂದ. ಕೊಡೋದಿಲ್ಲ ಅಂತಾ ಹೇಳಿ ಕಳಿಸ್ದೆ. ಸ್ವಲ್ಪ ಕೆಳಗೆ ಹೋಗ್ತಿದ್ದಂಗೆ ಹೊಟ್ಟೆ ಜ್ಞಾಪಕ ಬಂತು. ಅಮ್ಮ ಕೊಟ್ಟಿದ್ದ ಉಪ್ಪಿಟ್ಟು ಬಾಕ್ಸ್ ತೆಗೆದು ತಿನ್ನೋಕೆ ಶುರು ಮಾಡ್ಕೊಂಡೆ, ಮುಗಿದ್ಮೇಲೆ ಇನ್ನೂ ಹಸಿವು ಅನಿಸ್ತು. ಅಲ್ಲೇ ಒಬ್ಬ ಪುಳಿಯೋಗರೆ ಮಾರ್ಕೊಂಡು ಕೂತಿದ್ದ. ಹತ್ತು ರೂಪಾಯಿ ಕೊಟ್ಟು ಪುಳಿಯೋಗರೆ ತಗೊಂಡು ತಿಂದಮೇಲೆ ಸ್ವಲ್ಪ ಸಮಾಧಾನ. ಆಮೇಲೆ ಒಂದು ಎಳೆನೀರು ಕುಡಿದು, ಇನ್ನೊಂದಷ್ಟು ಫೋಟೋಸ್ ಕ್ಲಿಕ್ ಮಾಡಿ ಮುಂದೆ ಹೋದೆ. ಕೆಳಗೆ ಹೋಗ್ತಿದ್ದಂಗೆ ಮತ್ತೆ ಅದೇ ರೀತಿ, ಒಬ್ಬ ಬಂದ,

ಅಣ್ಣ ಕಾಯಿ ಕೊಡು.

ಯಾಕೋ ಕಾಸು ಬೇಡ್ವ??

ಇಲ್ಲ ಅಣ್ಣ ಸಾಂಬಾರ್ ಮಾಡೋಕೆ ಕಾಯಿ ಬೇಕು, ಕಾಸು ಬೇಡ...

ಸರಿ ತಗೋ ಅಂತಾ ಇದ್ದ ಒಂದೇ ಚಿಪ್ಪು ತೆಂಗಿನಕಾಯಿ ಕೊಟ್ಬಿಟ್ಟೆ. ಸುತ್ತ ಎರಡು-ಮೂರು ಮಕ್ಳು ಬಂದು ನಂಗೆ-ನಂಗೆ ಅಂತಿದ್ರು. ಬಾಳೆಹಣ್ಣು ಅಷ್ಟೇ ಇರೋದು ಅಂತಾ ಹೇಳಿ, ಅದನ್ನು ಕೊಟ್ಟು, ನಾನು ತಿಂದು ಮುಂದೆ ಹೋದೆ. ಹೋಗ್ತಾ ದಾರೀಲಿ ಕೂತಿದ್ದ ವಯಸ್ಸಾದವರನ್ನ ನೋಡಿ ಯಾಕೋ ಒಂಥರಾ ಅನಿಸ್ತು, ಇದ್ದ ಐದಾರು ಮಂದಿಗೆ ಒಂದೊಂದು ರೂಪಾಯಿ ಕೊಟ್ಟು ಹೊರಗೆ ಬಂದೇ. ಆಮೇಲೆ ಅನಿಸ್ತು, ಬಹುಷಃ ಅದೇ ಕಾರಣಕ್ಕೆ ಅನ್ಸುತ್ತೆ ದೇವ್ರು ನನ್ನ ಕೈಲಿ ಕಾಯಿ-ಹಣ್ಣು ತಗೊಳ್ಳೋ ಹಾಗೆ ಮಾಡಿದ್ದು ಮತ್ತೆ ತಟ್ಟೆಗೆ ಕಾಸು ಹಾಕೋದು ಬೇಡ ಅಂತಾ ಅನ್ಸೋ ಹಾಗೆ ಮಾಡಿದ್ದು. ಒಟ್ನಲ್ಲಿ ಒಂದೆರಡು ಒಳ್ಳೆ ಕೆಲ್ಸ ಆಯ್ತು ಅಂತಾ ಮನಸ್ಸಿಗೆ ಖುಷಿ.

ಯೋಗಾನರಸಿಂಹ ದೇವರ ದರ್ಶನ ಅದ್ಮೇಲೆ, ಕಲ್ಯಾಣಿ ಕಡೆ ಹೊರಟೆ. ಅಲ್ಲಿ ಹೋಗ್ತಿದ್ದಂಗೆ ಯಾಕೋ ಅಲ್ಲಿ ಆದದ್ದೆಲ್ಲ ಯಾರ್ಗಾದ್ರು ಹೇಳ್ಬೇಕು ಅನಿಸ್ತು, ಫೋಟೋ ಕ್ಲಿಕ್ ಮಾಡ್ತಾ ಮಾಡ್ತಾ ಗೆಳತಿಗೆ ಫೋನ್ ಮಾಡ್ದೆ. ಮಾತಾಡ್ತಿದ್ದಂಗೆ ಒಂದು ಆಘಾತದ ವಿಷ್ಯ... ನಮ್ಮ ಕಂಪನಿ ಅಲ್ಲಿ ಕೆಲ್ಸ ಮಾಡ್ತಿದ್ದ ಸಹೋದ್ಯೋಗಿ ಒಬ್ರು ಸತ್ತು ಹೋದ್ರು!!!!!!!! ಅವ್ರಿಗೆ ಅಷ್ಟು ವಯಸ್ಸು ಏನು ಆಗಿರ್ಲಿಲ್ಲ. ಕಾರಣ ಕೇಳಿದ್ರೆ, ವೈದ್ಯರ ನಿರ್ಲಕ್ಷ್ಯ (be careful with doctors and hospitals). ಅದನ್ನು ಕೇಳಿ ನಂಗೆ ಏನು ಹೇಳ್ಬೇಕು ಅನಿಸ್ಲಿಲ್ಲ. ಸುಮ್ನೆ ಹಂಗೆ ಮಾತಾಡಿ ಫೋನ್ ಕಟ್ ಮಾಡಿದ್ದು ಆಯ್ತು.

ಕಲ್ಯಾಣಿಯ ಹತ್ರ ಫೋಟೋಸ್ ಅದ್ಮೇಲೆ, ಚೆಲುವ ನಾರಾಯಣನ ದರ್ಶನಕ್ಕೆ ನನ್ನ ಹೆಜ್ಜೆಗಳು. ಸುಮಾರು 3.30-4.00 ಗೆ ಬಾಗಿಲು ತೆಗ್ಯೋದು  ಅಂತಾ ಹೇಳ್ತಿದ್ರು, ಆಗ ಸಮಯ 2 - 2.30 ಆಗಿತ್ತು. ಹಾಗೆ ಸಿಕ್ಕಿದ ಜನರನ್ನ ಕೇಳ್ತಾ ಕೇಳ್ತಾ ಹೊರಟೆ. ಕವಿ ಪು. ತಿ. ನರಸಿಂಹಾಚಾರ್ ಅವರ ಮನೆ, ಅಕ್ಕ-ತಂಗಿ ಕೊಳ, ರಾಜಗೋಪುರ ಇವೆಲ್ಲ ನೋಡ್ಕೊಂಡು ಬಾರೋ ಹೊತ್ಗೆ 3.45 ಆಯ್ತು. ಬಾಗಿಲು ತೆಗೆದಿತ್ತು, ಚೆಲುವ ನಾರಾಯಣನ ಚೆಲುವನ್ನು ಕಣ್ತುಂಬ ನೋಡಿ ಬಸ್-ಸ್ಟ್ಯಾಂಡ್ ಗೆ ಹೊರಟೆ.

ನಾಲ್ಕು ಘಂಟೆಗೆ ಅಂತಾ ಇದ್ದ ಬಸ್, ನಾಲ್ಕು ಐದಕ್ಕೆ ಬಂತು. ಮಂಡ್ಯಕ್ಕೆ ಹೋಗೋ ಬಸ್ ಅದು, ಹತ್ಕೊಂಡು ಕೂತ್ಕೊಂಡೆ. ಕಾಲು ಘಂಟೆ ಅದ್ಮೇಲೆ 4.25 ಕ್ಕೆ ಬಸ್ ಅಲ್ಲಿಂದ ಹೊರಡ್ತು. ಒಬ್ಬ ಅಂಕಲ್ ಬಂದು ಕೂತ್ಕೊಂಡ್ರು...

ಅಣ್ಣ, ಯಾವೂರು?

ರಾಮನಗರ, ಮಂಡ್ಯಕ್ಕೆ ಹೋಗಿ ಹೋಗ್ತೀನಿ. (ಬಸ್ ಕೊನೆ ಸ್ಟಾಪ್ ಇರೋದೇ ಮಂಡ್ಯ, ರಾಮನಗರಕ್ಕೆ ಹೋಗು ಅಂದ್ರೆ ಹೋಗುತ್ತಾ?... )

ನಾನು ಬೆಂಗಳೂರಿಗೆ ಹೋಗ್ಬೇಕು, ಮಂಡ್ಯನೆ ಕೊನೆ ಸ್ಟಾಪ್... ;)

ಅಂತಾ ಹೇಳಿ ಸುಮ್ನಾದೆ.. ಅಣ್ಣ ಗರಂ ಆಗಿದ್ರು..ಹಾಗಾಗಿ ಏನು ಮಾತಿಲ್ಲ... ನಿದ್ದೆ ಕಡೆ ಮನಸ್ಸು ಜಾರಿತು... ದೇಹ ನಿದ್ದೆಗೆ ಜಾರಿತು...

ಐದು ಮೂವತ್ತೈದಕ್ಕೆ ಮಂಡ್ಯದಲ್ಲಿ ಇಲ್ಕೊಂಡು ನೋಡಿದ್ರೆ, ಬೆಂಗಳೂರಿಗೆ ಬಸ್ ನಿಂತಿತ್ತು. ಓಡಿಹೋಗಿ ಹತ್ಕೊಂಡು ಕೂತೆ. ಅಲ್ಲಿ ಕೂಡ ಏನು ವಿಶೇಷ ಇಲ್ಲ, ನಿದ್ದೆ ಅಷ್ಟೇ. ಮತ್ತೆ ಕಣ್ಣು ಬಿಟ್ಟಾಗ ಕೆಂಗೇರಿ. ಸುಮಾರು 8 ಘಂಟೆಗೆ ನಾಯಂಡಹಳ್ಳಿ ಸಿಗ್ನಲ್ ಕ್ರಾಸ್ ಮಾಡಿದ್ದು ಆಯ್ತು, ಆಮೇಲೆ ತಗ್ಲಾಕ್ಕೊಂಡೆ ಕಣ್ರೀ, ಒಬ್ಬ ಗೆಳೆಯನ ಕರೆ... ಆಯ್ತು ಒಂದು 20 ನಿಮಿಷ... ಅದೇ ಸಮಯದಲ್ಲಿ ಇನ್ನೊಬ್ಬ ಗೆಳಯನಿಗೆ ಫೋನ್ ಮಾಡಬೇಕಿದ್ದು ಜ್ಞಾಪಕ ಬಂತು. ಮಾತು ನಿಂತಮೇಲೆ, ಇನ್ನೊಬ್ಬ ಗೆಳೆಯನಿಗೆ ಫೋನ್ ಮಾಡ್ದೆ. ಹತ್ತು ನಿಮಿಷ ಆಗ್ತಿದ್ದಂಗೆ, ಗೆಳತಿಯ ಕರೆ. ಮತ್ತೆ ಮಾಡ್ತೀನಿ ಅಂತಾ ಹೇಳಿ ಫೋನ್ ಕಟ್ ಮಾಡಿ, ಗೆಳತಿಗೆ ಫೋನ್ ಮಾಡ್ದೆ. ಮಾತು ಮುಗ್ಯೋ ಹೊತ್ಗೆ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಬಂತು. ಟೈಮು 9 ಆಗಿತ್ತು. ಮತ್ತೆ ಮಾಡ್ತೀನಿ ಅಂತಾ ಹೇಳಿದ್ದ ಗೆಳಯನಿಗೆ ಫೋನ್ ಮಾಡಿ, ವಾಕಿಂಗ್ ಶುರು... ಮನೆ ಕಡೆಗೆ. ಆಟೋ ಹತ್ತಿದ್ರೆ 30 ರೂಪಾಯಿ ಜೊತೆಗೆ 9 ಘಂಟೆ ಆಗಿದ್ರಿಂದ ಇನ್ನೂ ಹೆಚ್ಚಿಗೆ ಕೊಡಬೇಕಿತ್ತು, ಮನೆ ಸೇರೋಕೆ ಟೈಮು 10-15 ನಿಮಿಷ. ಬಸ್ ಅಲ್ಲಿ ಹೋದ್ರೆ, ಆಶ್ರಮಕ್ಕೆ ಹೋಗಿ, ಅಲ್ಲಿಂದ ಬಸ್, ಆಟೋ ಅಥವಾ ನಡ್ಕೊಂಡು ಹೋಗ್ಬೇಕಿತ್ತು, ಇದಕ್ಕೆ ಕಡಿಮೆ ಅಂದ್ರು 30-40 ನಿಮಿಷ. ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಇಂದ ಮನೆ ಎರಡುವರೆ ಕಿ.ಮೀ., 9.05 ಕ್ಕೆ ಶುರು ಮಾಡ್ಕೊಂಡ ವಾಕಿಂಗ್ 9.24 ಮನೆ ಸೇರ್ಕೊಂಡೆ (ಟೈಮು 19 ನಿಮಿಷ).

ಬೆಳಿಗ್ಗೆ 8.15 ಕ್ಕೆ ಶುರು ಆದ ನನ್ನ ಪ್ರಯಾಣ ರಾತ್ರಿ 9.24 ಕ್ಕೆ ಮುಕ್ತಾಯ ಆಯ್ತು.... :)

ಹೆಚ್ಚಿನ ಮಾಹಿತಿ (Trip information)...

Bengaluru to Melkote
Direct bus Srinagar to MelKote - National Travels  (via Nelamangala, Kunigal, Yadiyur, Bellur cross, Nagamangala, Melukote)
start time morning     8.30 - 8.40
end time afternoon  12.45 - 1.00

Melkote to Bengaluru (Melkote to Mandya and Mandya to Bengaluru)
Melkote to Mandya - Mandya city bus
start time 4.10 - 4.20 PM
end time   5.30 - 5.40 PM

Mandya to Bengaluru - KSRTC
start time 5.40 - 5.45 PM
end time  8.00 - 9.00 - 10.00 PM (depending on traffic after reaching Bengaluru).

Saturday, September 1, 2012

ಐದು ವರ್ಷಗಳ ಹಿಂದೆ....


ಆ ದಿನ 10 ಘಂಟೆಗೆ ನಾನು ಇಂಟರ್ವ್ಯೂ ಇದ್ದ ಜಾಗಕ್ಕೆ ಹೋಗಬೇಕಿತ್ತು, ಸರಿಯಾದ ಟೈಮ್ ಗೆ ಮನಯಿಂದ ಹೊರಟ್ರು ಕೂಡ ಆಗ್ಲಿಲ್ಲ. ಹಿಂದಿನ ದಿನ, careernet ಇಂದ ಕಾಲ್ ಬಂದಿತ್ತು, ಇಂಟರ್ವ್ಯೂ ಕೂಡ ಫಿಕ್ಸ್ ಆಗಿತ್ತು, ಕಾಲ್ ಮಾಡಿದ ಹುಡುಗ ತುಂಬ ಚೆನ್ನಾಗಿ ಮಾತಾಡ್ತಾ ಇದ್ದ, ಅದನ್ನು ಕೇಳಿ ಖುಷಿ ಆಗ್ತಿತ್ತು. ಆ ಮಾತುಗಳನ್ನ ಕೇಳ್ತಿದ್ರೆ ಎಲ್ಲೋ ಅಂದು ಕಡೆ ಆಶಾವಾದ, ಕೊನೆಗೆ ಈ ಕಂಪನಿ ಅಲ್ಲಿ ಆದರು ನಾನು ಸೆಲೆಕ್ಟ್ ಆಗ್ತೀನಿ ಅಂತ. ನನ್ನ ಕೆಲವು ರೂಲ್ಸ್/ಅದು ಇದು... ನಂಗೆ ಸರಿ ಅನ್ಸಿದ್ರೂ ಬೇರೆ ಅವ್ರಿಗೆ ಸರಿ ಅನ್ನಿಸದ ನಿಯಮಗಳು... ಇದ್ರಿಂದ ನನ್ನ ಕ್ಲಾಸ್ ಅಲ್ಲಿ ಇದ್ದ ಎಂತ-ಎಂತ ಪುಣ್ಯಾತ್ಮರು ಕೂಡ ಯಾವ್ದೋ ಒಂದು ಕಂಪನಿ ಅಲ್ಲಿ ಕೆಲ್ಸ ಗಿಟ್ಟಿಸಿಕೊಂಡಿದ್ರು. ನಂಗೆ ಆ talent ಇರ್ಲಿಲ್ವೋ, ಇದ್ರೂ ಕೂಡ ಅದನ್ನ ಕಂಡು ಹಿಡಿಯೋ ಯೋಗ್ಯತೆ ಯಾರ್ಗೂ ಇರ್ಲಿಲ್ವೋ ಆ ದೇವರಿಗೆ ಗೊತ್ತು.

ಕಾಲೇಜ್ ಅಲ್ಲಿ ಕೆಲಸದ ವಿಷ್ಯ ಬಂದಾಗ, ಕಾಪಿ ಮಾಡಬಾರದು ಅನ್ಕೊಂಡಿದ್ದೆ, ಆದ್ರೆ ಕಾಪಿ ಮಾಡಿದ್ಮೇಲೆ ಒಂದು written test ಕ್ಲಿಯರ್ ಆಯ್ತು. ಫ್ರೆಂಡ್ಸ್ ಎಲ್ಲ ಹೇಳ್ತಿದ್ರು, ನೆಟ್ಟಗೆ ಡ್ರೆಸ್ ಮಾಡ್ಕೊಂಡು ಹೋಗು, first impression is best impression ಏನೇನೋ ಹೇಳ್ತಿದ್ರು. ಇದ್ದ ಕ್ಷಣದಲ್ಲೇ ಎಲ್ಲ ರೆಡಿ ಆಗಬೇಕು ಅಂದ್ರೆ ಹೇಗೆ ಸಾಧ್ಯ, ಆಗ್ಲಿಲ್ಲ. ಹೇಗಿದ್ನೋ ಹಾಗೆ ಹೋದೆ. ಅಲ್ಲಿಯವರೆಗೂ ಒಂದು written test ಆಗಿರ್ಲಿಲ್ಲ, ಹಾಗಾಗಿ ಒಂದು ಕಡೆ ಭಯ, ಮತ್ತೊಂದು ಕಡೆ ಖುಷಿ. ಒಳಗೆ ಹೋದೆ. ನನ್ನ ಇಂಟರ್ವ್ಯೂ ಮಾಡೋಕೆ ಇಬ್ರು ಕೂತಿದ್ರು, ಒಳ್ಳೇ personality, well dressed, ನಾನು ಇಲಿ ಮರಿ ತರ ಇದ್ದೆ. ಕಂಪನಿ ಯಾವ್ದು ಅಂತ ಕೇಳ್ತೀರಾ??? ಬೇಡ ಬಿಡಿ. ಒಂದು ದೊಡ್ಡ ಫೈನಾನ್ಸ್ ಮ್ಯಾನೇಜ್ಮೆಂಟ್ ಕಂಪನಿ ಅಂತ ಮಾತ್ರ ಹೇಳಬಲ್ಲೆ. ಅವ್ರು ಏನ್ ಕೇಳಿದ್ರು, ನಾ ಏನ್ ಹೇಳ್ದೆ ಯಾವುದು ಜ್ಞಾಪಕ ಇಲ್ಲಾ. ಆದ್ರೆ ಇಂಟರ್ವ್ಯೂ ಮುಗಿದ್ಮೇಲೆ ಇಬ್ರಲ್ಲಿ ಒಬ್ಬರು ಬಂದು, ನನ್ನ ಭುಜದ ಮೇಲೆ ಕೈ ಹಾಕಿ "you are a funny guy, i liked you, you are selected for next round, wait outside" ಅಂತ ಹೇಳಿದಾಗ. ಆಹ್!!!! ಎಂತ ಖುಷಿ. ಕಾಯ್ತಾ ಕೂತಿದ್ದೆ, ನನ್ನದು first round ಮಾತ್ರ ಆಗಿತ್ತು, ನನ್ನ ಬೇರೆ ಕೆಲವು ಫ್ರೆಂಡ್ಸ್ ದು 2nd and 3rd round ಕೂಡ ಆಗಿತ್ತು. ಎಲ್ಲ ಕಾಯ್ತಾ ಇದ್ವಿ, ಯಾರೊಬ್ರು ಕೂಡ ಸೆಲೆಕ್ಟ್ ಆಗ್ಲಿಲ್ಲ. ಕೊನೆಗೆ ನನ್ನ ಭುಜದ ಮೇಲೆ ಕೈ ಹಾಕಿ, ಆ ಮಾತು ಹೇಳಿದ ಆ ವ್ಯಕ್ತಿ ನನ್ನ ಹತ್ರ ಬಂದು, "sorry buddy, due to some resons interviews stopped, i can't help" ಅಂತ ಹೇಳಿ ಹೋಗ್ಬಿಟ್ರು. ಆಕಾಶ ತಲೆಮೇಲೆ ಬಿದ್ದಂಗೆ ಆಯ್ತು, ಆದ್ರೆ ಬೇರೆ ದಾರಿ ಇಲ್ಲಾ, ಥ್ಯಾಂಕ್ಸ್ ಹೇಳ್ದೆ ಅಷ್ಟೇ. ನಂಗೆ "all the best" ಹೇಳಿ ಅವ್ರು ಹೊರ್ತ್ಬಿಟ್ರು. ಇದು ಆದ್ಮೇಲೆ ಇನ್ನು ಒಂದೆರಡು ಮೂರು ನಾಲ್ಕು ಇಂಟರ್ವ್ಯೂ ಆಯ್ತು, ಯಾವ್ದರಲ್ಲಿ ಕೂಡ ಸೆಲೆಕ್ಟ್ ಆಗ್ಲಿಲ್ಲ. ಒಂದಂತೂ ತುಂಬ ಕೆಟ್ಟ ಅನುಭವ, ಇದ್ದ ಇಬ್ಬರಲ್ಲಿ ಒಬ್ಬನಿಗೆ ಹೊಡೆದು ಬರ್ಬೇಕಿತ್ತು, ಕಂಟ್ರೋಲ್ ಮಾಡ್ಕೊಂಡು ಎದ್ದು ಬಂದೆ.

ಇದೆಲ್ಲ ಹಳೆ ಕಥೆ, ಇಷ್ಟೆಲ್ಲಾ ಕಥೆ ಇದ್ದಿದ್ದರಿಂದ ಆ ಒಂದು ಕರೆ ನಂಗೆ ತುಂಬ ಖುಷಿ ಕೊಡ್ತು, ಇನ್ನು ಎಲ್ಲೋ ಒಂದು ಕಡೆ ಚಾನ್ಸ್ ಇದೇ ಅಂತ ಹೇಳಿದಂಗೆ ಅನ್ನಿಸ್ತು. ಐದು ವರ್ಷಗಳ ಹಿಂದೆ ಇದೇ ದಿನ, ಸೆಪ್ಟೆಂಬರ್ ೦೧ ೨೦೦೭, ಶನಿವಾರ ಬೆಳ್ಗೆ ಎದ್ದು, ರೆಡಿ ಆಗಿ ಹೊರಟೇಬಿಟ್ಟೆ. ಮನೆ ಇಂದ ಮಜೆಸ್ಟಿಕ್, ಮಜೆಸ್ಟಿಕ್ ಇಂದ ನಾಗನಾಥಪುರ ಹೋಗೋದು ಅಂತ ಪ್ಲಾನ್ ಮಾಡಿ, ನಮ್ಮ  BMTC ಯ dialy pass  ತಗೊಂಡು ಹೊರಟೆ. ಮೊದ್ಲೇ ಹೇಳಿದಂತೆ, 10 ಘಂಟೆಗೆ reach ಆಗೋಕೆ ಆಗ್ಲಿಲ್ಲ. ಹೊಸರೋಡ್ ಅಲ್ಲಿ ಇಳ್ಕೊಂಡಾಗ ೧೦.೧೫ ಆಗಿತ್ತು, ಆಟೋ ಹತ್ತೋಕೆ ಹಿಂದು-ಮುಂದು ನೋಡೋ ನಾನು, ಇಲ್ಲದ ಮನಸ್ಸಿನಿಂದ ಅಲ್ಲೇ ಹೋಗ್ತಿದ್ದ ಒಂದು ಆಟೋಗೆ ಕೈ ತೋರಿಸ್ದೆ, minimum ಅಂತ ಹೇಳಿದ ಆಟೋ ಡ್ರೈವರ್ ಜೊತೆ ಚೌಕಾಸಿ ಮಾಡಿ ೧೦ ರೂಪಾಯಿಗೆ ಒಪ್ಪಿಸಿದ್ದು ಆಯ್ತು. ಅದೇನೋ ಗೊತ್ತಿಲ್ಲ್ಲ ಅವನ ಮುಖದಲ್ಲಿ ಒಂದು ವಿಶೇಷ ನಗು ಕಾಣಿಸ್ತು.

ಏನ್ ಸಾರ್, ಇಂಟರ್ವ್ಯೂ?

ಹೌದು...

ಬೆಳ್ಗೆ ಇಂದ ಬೇಜಾನ್ ಹೋಗ್ತಿದಾರೆ ಸಾರ್...

ಒಹ್ ಹೌದ.. ತುಂಬ ಇದಾರ????

ಏನಿದ್ರೆ ಏನು ವಿಶೇಷ ಇಲ್ಲ ಸರ್, ಆಗೋದಿದ್ರೆ ಎಲ್ಲ ಒಳ್ಳೆದಾಗುತ್ತೆ ಹೋಗಿ ಸಾರ್....

ಹ. ಅದು ನಿಜ ಅನ್ನಿ...

ಒಳ್ಳೇದಾಗ್ಲಿ ಸಾರ್, ಇಂಟರ್ವ್ಯೂ ಚೆನ್ನಾಗಿ ಮಾಡಿ....

ಥ್ಯಾಂಕ್ಸ್ ಸರ್....

ಆಟೋ ಇಳ್ಕೊಂಡು ಸ್ವಲ್ಪ ಮುಂದೆ ಹೋಗಿ ನೋಡಿದ್ರೆ, ಇದೇನಾ ಆಫೀಸ್ ಅಂತ ಅನಿಸ್ತು. ಅಲ್ಲೇ ಗೇಟ್ ಹತ್ರ ನಿಂತಿದ್ದ ಸೆಕ್ಯೂರಿಟಿ, ಕಾಲ್ ಲೆಟರ್ ಚೆಕ್ ಮಾಡಿದ್ರು, ಮತ್ತೆ ಅಲ್ಲಿ ಕೂಡ ಒಂದು ನಗೆ. ಇವರನ್ನೆಲ್ಲ ಮರೆಯೋ ಹಾಗಿಲ್ಲ. ಅದ್ಕೆ ಎಲ್ಲರ ಬಗ್ಗೆ ಸ್ವಲ್ಪ ಸ್ವಲ್ಪ ಹೇಳ್ತಾ ಇದ್ದೇನಿ. ಈ ಎಲ್ಲರಿಗೂ ಧನ್ಯವಾದಗಳು.

ಒಳಗೆ ಹೋಗ್ತಿದ್ದಂಗೆ, ಕೈ-ಕಾಲು ನಡುಕ ಶುರು ಆಯ್ತು, ಎಷ್ಟೊಂದು ಜನ, ಇಷ್ಟು ಜನರಲ್ಲಿ ನಾನು ಒಬ್ಬ. ನಂಗೆ ಇಲ್ಲಿ ಖಂಡಿತ ಕೆಲ್ಸ ಸಿಗುತ್ತಾ? ಅಲ್ಲಿ ಬಂದಿದ್ದ ಎಲ್ಲರ ಜೊತೆಗೂ ಮತ್ತೊಬ್ರು ಇದ್ರು. ಅಲ್ಲಿಗೆ ಬರೋವಾಗ್ಲೆ ಒಟ್ಟಿಗೆ ಬಂದಿದ್ರಾ, ಅಲ್ಲಿ ಬಂದು ಮೀಟ್ ಆಗಿದ್ದ ನಂಗೆ ಗೊತ್ತಿಲ್ಲ. ನಾನು ಒಬ್ನೇ, ಮಾತು ಕಡಿಮೆ, ಹಾಗಾಗಿ ಒಂದು ಕಡೆ ಸುಮ್ನೆ ಕೂತಿದ್ದೆ. ಒಳಗೆ ಹೋಗಿ, entry ಮಾಡ್ಸಿ, ಹೀಗಿ ಕೂತಿರ್ಬೇಕಿದ್ರೆ, ನನ್ನ ಕ್ಲಾಸ್ ನ ಮತ್ತೊಬ್ಬ ಅಲ್ಲಿ ಕಾಣಿಸ್ದ. ಅವನ ಲೆವೆಲ್ ಬೇರೆ, ನನ್ನ ಲೆವೆಲ್ ಬೇರೆ. ಹಾಗಾಗಿ hi-bye ಅಲ್ಲಿ ನಮ್ಮ ಭೇಟಿ ಮುಗಿತು, ಮತ್ತೆ ಒಬ್ಬನೇ. ಅಲ್ಲಿ ಬಂದಿದ್ದ ಸುಮಾರು ಹುಡುಗರೆಲ್ಲ ನೀಟಾಗಿ ಡ್ರೆಸ್ ಮಾಡ್ಕೊಂಡು, ಟೈ ಹಾಕ್ಕೊಂಡು ಬಂದಿದ್ರು. ಆದ್ರೆ ನಾನು, ಸುಮಾರಾಗಿದ್ದ ಒಂದು ಶರ್ಟ್, ಪ್ಯಾಂಟ್ ಮ್ಯಾಚ್ ಅಗ್ತಿತ್ತೋ ಇಲ್ವೋ ಗೊತ್ತಿಲ್ಲ, ಶರ್ಟ್ ಮೇಲೆ ಸ್ವೆಟರ್, ಹಳೆಯ ಸ್ಪೋರ್ಟ್ ಶೂ, ತಲೆ ಬಾಚೋಕೆ ಕೂದಲು ಇರ್ಲಿಲ್ಲ, ಆಗ ಸ್ವಲ್ಪ ದಿನದ ಹಿಂದೆ ಯಾವ್ದೋ ದೇವರಿಗೆ ಹೋಗಿ ತಲೆ (ಮುಡಿ) ಕೊಟ್ಟು ಬಂದಿದ್ದೆ. ಇಷ್ಟೆಲ್ಲಾ ಸುಂದರ ಲಕ್ಷಣಗಳು ನನ್ನಲ್ಲಿ ಇರ್ಬೇಕಿದ್ರೆ, "first impression is the best impression" ಆಗೋಕೆ ಚಾನ್ಸ್ ಇರಲೇ ಇಲ್ಲ. ಅಷ್ಟೆಲ್ಲ ಜನರನ್ನ ನೋಡಿದ್ಮೇಲೆ ನಂಗೆ ನಂಬಿಕೆ ಹೋಯ್ತು, ಹೆಂಗಿದ್ರು ಬಂದಿದ್ದೀನಿ ಅಲ್ವಾ, ಇಂಟರ್ವ್ಯೂ attend ಮಾಡಿ ಹೋಗೋಣ ಅಂತ ಯೋಚನೆ ಮಾಡಿ, ಅಲ್ಲೇ ಉಳ್ಕೊಂಡೆ. ಸುಮಾರು ೨ ಘಂಟೆ ಹೊತ್ಗೆ, ನನ್ನ ಇಂಟರ್ವ್ಯೂ ಗೆ ಕಾಲ್ ಮಾಡಿದ್ರು. ಹೋಗಿ ಒಳಗೆ ಕೂತ್ಕೊಂಡ್ರೆ, ಮನಸಿನ ಎಲ್ಲೋ ಒಂದು ಮೂಲೇಲಿ ಇವತ್ತು ಎಲ್ಲ ಒಳ್ಳೆದಾಗುತ್ತೆ ಅಂತ ಹೇಳಿದಂತೆ ಆಗ್ತಿತ್ತು. ಮೊದಲೇ ಹೇಳಿದ ಒಂದು ಸುಂದರ ಇಂಟರ್ವ್ಯೂ ಅನುಭವದಂತೆ, ನನ್ನ ಎದುರಿನ ವ್ಯಕ್ತಿ ನೋಡಿದಾಗ ಏನೋ ಒಂತರ ಖುಷಿ. ಇಂಟರ್ವ್ಯೂ ಮುಗಿತು ಮತ್ತದೇ ಗೊಂದಲ. ಇಷ್ಟೊಂದು ಜನ, ಅದರಲ್ಲಿ ನಾನು ಒಬ್ಬ... ಸರಿ ರಿಸಲ್ಟ್ ಗೆ ಕಾಯ್ತಾ ಇದ್ದೆ. ಅಲ್ಲಿ ಇಂಟರ್ವ್ಯೂ ನೋಡ್ಕೊತಿದ್ದ, careernet ನ ಒಬ್ಬ ವ್ಯಕ್ತಿ ಬಂದು ಸ್ವಲ್ಪ ಧೈರ್ಯ ಹೇಳ್ದ, "ಯೋಚನೆ ಮಾಡಬೇಡ ಒಳ್ಳೆದಾಗುತ್ತೆ". ಅದೇ ಸಮಯಕ್ಕೆ ಇನ್ನೊಬ್ಳು ಹುಡುಗಿ, ಅವ್ಳು ಯಾರು ಏನು ಗೊತ್ತಿರ್ಲಿಲ್ಲ. ಸ್ವಲ್ಪ ಮಾತು ಕಥೆ ಆಯ್ತು, ಯಾವ ಕಾಲೇಜ್ ಏನು ಎತ್ತ ಎಲ್ಲ ವಿಚಾರ ವಿನಿಮಯ ಅದ್ಮೇಲೆ ಹೇಳ್ದೆ,

ನಂಗೆ ಇಲ್ಲಿ ಯಾಕೋ ನಂಬಿಕೆ ಇಲ್ಲ, ಎಷ್ಟೊಂದು ಜನ ಇದ್ದಾರೆ. BEL  ಅಲ್ಲಿ ಇನ್ನೊಂದು ಇಂಟರ್ವ್ಯೂ ಇದೆ ಹೋಗ್ಬಿಡ್ತೀನಿ.
(ನಾಗನಾಥಪುರ - BEL , ಸುಮಾರು ೫೦ ಕಿ.ಮೀ.)

ಇಲ್ಲಿಂದ ಅಲ್ಲಿಗೆ ಹೋಗೋದು ಕಷ್ಟ. ಇಲ್ಲೇ ಏನಾಗುತ್ತೋ ನೋಡು. ಆಮೇಲೆ ಇಲ್ಲಿ  ಇಲ್ಲ, ಅಲ್ಲಿ ಇಲ್ಲ ಅನ್ನೋ ಹಾಗೆ ಆಗುತ್ತೆ. ಇಲ್ಲಿ ಹೇಗೂ ಬಂದಿದ್ದು ಆಗಿದೆ, ಇಂಟರ್ವ್ಯೂ ಕೂಡ ಆಯ್ತು. ಸ್ವಲ್ಪ ಕಾದು ನೋಡು. ಎಲ್ಲ ಒಳ್ಳೆದಾಗುತ್ತೆ.

ಕಾದೆ, ಸ್ವಲ್ಪ ಹೊತ್ತು ಕಾದೆ. careernet ನ ಅದೇ ವ್ಯಕ್ತಿ ಮತ್ತೆ ಬಂದು, ಅಲ್ಲಿ ಇನ್ನೊಂದು ರೂಂ ಇದೆ, ಅಲ್ಲಿ ಹೋಗಿ ಮತ್ತೊಂದು ರೌಂಡ್ ಇಂಟರ್ವ್ಯೂ. ಖುಷಿ. ಹೋದೆ, ಅದು HR ಇಂಟರ್ವ್ಯೂ ಆಗಿತ್ತು, ಮತ್ತೆ ಭಯ. ಮೊದಲ್ನೇ ಸಲ HR ಇಂಟರ್ವ್ಯೂ ಗೆ ಹೋಗಿದ್ದು, ಅವ್ರು ಏನೋ ಪ್ರಶ್ನೆಗಳು ಕೇಳಿದ್ರು. ಹೇಳ್ದೆ ಬಂದೆ. ಮತ್ತೆ careernetನ ಅದೇ ವ್ಯಕ್ತಿ,

ನೀವು ಮನೆಗೆ ಹೋಗಬಹುದು, ರಿಸಲ್ಟ್ ಕಾಲ್ ಮಾಡಿ ಹೇಳ್ತೀವಿ.

ಅಂತ ಹೇಳಿದ್ರು. ಹೊರಟೆ ಅಲ್ಲಿಂದ. ಮತ್ತದೇ ಒಂಟಿ ಪಯಣ. ಈ ಸಲ ಆಟೋ ಹತ್ಲಿಲ್ಲ. ಸುಮಾರು ೧-೧.೫ ಕಿ.ಮೀ. ನಡೆದು ಬಂದು, ಬಸ್ ಹತ್ತಿ ಮನೆಗೆ ಹೊರಟೆ. ಅಮ್ಮನ  ಮುಖದಲ್ಲಿ ಏನೋ ಒಂದು ಖುಷಿ, ಏನೋ ಒಂದು ಅಸಮಾಧಾನ ("ಅಯ್ಯೋ!!! ಪಾಪ ಇವತ್ತು ಆಗ್ಲಿಲ್ವಾ, ಯಾಕೆ ಇವನಿಗೆ ಹಿಂಗೆ ಆಗ್ತಿದೆ"). ಅಂದಿನ ಈ ದಿನ ಮುಗಿತು.

ಸೆಪ್ಟೆಂಬರ್ ೨ ೨೦೦೭, ಅಷ್ಟು ಏನು ವಿಶೇಷ ಇರ್ಲಿಲ್ಲ. ಎಲ್ಲಾ ಭಾನುವಾರಗಳ ತರಹ ಅದು ಒಂದು ಸಾಧಾರಣ ಭಾನುವಾರ.

ಸೆಪ್ಟೆಂಬರ್ ೩ ೨೦೦೭, ಪ್ರತಿದಿನ ಹೇಗೆ ಸಾಗ್ತಿತ್ತೋ ಅದೇ ರೀತಿ. ಏನು ವಿಶೇಷ ಇಲ್ಲ. ಸಂಜೆ ಗಾಂಧೀಬಜಾರ್ ಗೆ ಹೋಗಿದ್ದೆ, ಏನೋ ಕೆಲಸದ ಮೇಲೆ. ಒಂದು ಕರೆ ಬಂತು,

"you have been selected. I will send you the offer letter and details.
Please follow the details/instruction. Your joining date is september 5th."

ಇದು ಆ ಕರೆಯ ಸಾರಾಂಶ. ಕಣ್ಣಲ್ಲಿ ನೀರು ತಾನಾಗಿ ಬರ್ತಿತ್ತು. ಏನು ಮಾಡಬೇಕು ಗೊತಾಗ್ತಿಲ್ಲ. ಖುಷಿ ಹೇಳೋಕೆ ಜೊತೆಗೆ ಯಾರಿಲ್ಲ. ಮನೆಗೆ ಹೋಗೋಕೆ ಇನ್ನು ೫-೧೦ ನಿಮಿಷ ಆಗುತ್ತೆ. ಅಮ್ಮನಿಗೆ ಆ ವಿಷ್ಯ ಹೇಳೋಕೆ ನನ್ನಿಂದ ಆಗೋಲ್ಲ. ನನ್ನ ಫ್ರೆಂಡ್ ಒಬ್ಳಿಗೆ ಕಾಲ್ ಮಾಡಿ, ಮಾತಾಡ್ತಾ ಮಾತಾಡ್ತಾ ಮನೆಗೆ ಹೋದೆ, ಅಮ್ಮ ಗೆ ಫೋನ್ ಕೊಟ್ಟು ಸುಮ್ನಾದೆ. ಅವಳು ಅಮ್ಮನಿಗೆ ಆ ವಿಷ್ಯ ಹೇಳ್ತಿದ್ದಂಗೆ ಅಮ್ಮನ ಮುಖದಲ್ಲಿ...................................................................................................

ಎಲ್ಲ ಮರೆಯಲಾಗದ ನೆನಪುಗಳು.....

ಬಸ್ conductor
ಆಟೋ ಡ್ರೈವರ್
ಸೆಕ್ಯೂರಿಟಿ gaurd
careernetನ ಆ ವ್ಯಕ್ತಿ
ನನ್ನ ಇಂಟರ್ವ್ಯೂ ಮಾಡಿದವರು
ಅಲ್ಲಿ ಪರಿಚಯವಾದ ಹೊಸ ಗೆಳತಿ

ಎಲ್ಲರಿಗೂ ಧನ್ಯವಾದಗಳು.....

ಕಾಲೇಜ್ ಅಲ್ಲಿ ಸೆಲೆಕ್ಟ್ ಆಗಿದ್ದ ಜಾಸ್ತಿ ಜನರು, ಕಂಪನಿ ಸೇರೋಕೆ ಮೊದಲೇ ನಾನು ಸೇರ್ಕೊಂಡೆ. ಹೆಚ್ಚು ಕಾಯಲಿಲ್ಲ, ಎಲ್ಲ procedures ೪-೫ ದಿನಗಳಲ್ಲಿ ಆಗೋಯ್ತು. ಸೆಪ್ಟೆಂಬರ್ ೫ ೨೦೦೭, ವಿಶೇಷ ಏನಂದ್ರೆ ಹೊಸ ಪರಿಚಯದ ಗೆಳತಿ ಕೂಡ ಅಲ್ಲೇ ಇದ್ಲು. ಅಲ್ಲಿಂದ ಶುರು ಆದ ಪಯಣ ಇನ್ನು ನಡಿತಾ ಇದೆ....