Custom Search

Saturday, October 20, 2012

ಕನ್ಯಾಕುಮಾರಿಯಲ್ಲಿನ ಸೂರ್ಯಾಸ್ತ...


ಕನ್ಯಾಕುಮಾರಿಯಲ್ಲಿನ ಸೂರ್ಯಾಸ್ತ ನೋಡೋದಕ್ಕೆ ಒಂದು ರೀತಿಯ ಖುಷಿ... ಆದ್ರೆ ಟೈಮ್ ಸರಿ ಇಲ್ಲ ಅಂದ್ರೆ ಯಾರು ತಾನೇ ಏನು ಮಾಡೋಕೆ ಆಗುತ್ತೆ ಹೇಳಿ???  ನಾವು ಕನ್ಯಾಕುಮಾರಿಗೆ ಹೋದದ್ದು ಅಕ್ಟೋಬರ್ ಕೊನೆ ಆಗಿದ್ರು ಮೋಡ ಕವಿದ ವಾತಾವರಣ, ಮಳೆಯ ಮುನ್ಸೂಚನೆ....  ಬಿಡಿ ಅದೆಲ್ಲ.. ಆದದ್ದು ಆಯ್ತು...
 ಎಷ್ಟೋ ಆಸೆ ಇಟ್ಕೊಂಡು, ಲಗೇಜ್ ಜೊತೆ ಲ್ಯಾಪ್ಟಾಪ್ ಹೊತ್ಕೊಂಡು ಹೋಗಿದ್ದೆ ಕನ್ಯಾಕುಮಾರಿಗೆ, ಆದ್ರೆ ಅಂದುಕೊಂಡಿದ್ದಷ್ಟು ಅಪರೂಪವಾದ ಸೂರ್ಯಾಸ್ತ ಏನು ಸಿಗ್ಲಿಲ್ಲ ನಂಗೆ, ಸಿಕ್ಕ ಸೂರ್ಯಾಸ್ತದ ಫೋಟೋಗಳನ್ನ ಸ್ವಲ್ಪ ಬಣ್ಣ ಹಚ್ಚಿ ಒಂದು ಹದಕ್ಕೆ( ನನ್ನ ಕಲ್ಪನೆಯಂತೆ) ತಂದಿದ್ದೇನೆ.. ಅದರ "ಟೈಮ್-ಲ್ಯಾಪ್ಸ್ (time-lapse)" ವೀಡಿಯೊ ನಿಮ್ಮ ಮುಂದೆ... :)
 ಉಪಯೋಗಿಸಿದ ಸಾಧನ/ಸಲಕರಣೆಗಳು/ಲೆಕ್ಕಾಚಾರಗಳು....
ನನ್ನ ಕ್ಯಾಮೆರಾ - Canon EOS 1000D with 18-55mm lens at 18mm (low/medium resolution should be fine)
EOS Tools/Utilities (you will get these tools and utilities with EOS camera CD - To capture sequence shots)
Lightroom 3.5 (to colorize all the images in one click)
Windows Live Movie Maker (To put all images together and create video)
Tripod
 ಐದು ಸೆಕೆಂಡುಗಳ ಅಂತರದಲ್ಲಿ ಸುಮಾರು 636 ಫೋಟೋಸ್ ಕ್ಲಿಕ್ ಮಾಡಿದ್ದು (Camera mounted on tripod, time 5 seconds interval set in EOS Tools), ಇದಕ್ಕೆ ಸರಿಸುಮಾರು ಒಂದು ಘಂಟೆ ಸಮಯ ಆಯ್ತು.
 5 seconds X 636 photos = 3180 seconds
3180 second / 60 seconds = 53 minutes
Video created to play 24 frames per second (i.e. 24 photos per second)
1 / 24 = 0.0417 second (one frame duration)
0.0417 second X 636 = 26.5 seconds
 53 ನಿಮಿಷಗಳ ಪರಿಶ್ರಮ ಕೇವಲ 26.5 ಸೆಕೆಂಡ್ಗಳಿಗೆ ಸೀಮಿತ ಆಯ್ತು. ಈ ವೀಡಿಯೊ ಸಂಪೂರ್ಣ ಪ್ಲೇ ಟೈಮ್ ಅಂದ್ರೆ 26.5 ಸೆಕೆಂಡ್ಗಳು ಮಾತ್ರ, ಅದರ ಜೊತೆ ಮೊದಲ ಮತ್ತು ಕೊನೆಯ Info slides ಸೇರ್ಸಿ ಸುಮಾರು ಒಂದು ನಿಮಿಷ ಆಗಿದೆ..

Wednesday, September 26, 2012

ಒಂದು ಸುಂದರ ಕನಸು....


ತುಂಬ ಬ್ಯುಸಿ ಲೈಫ್, ಕೈ ತುಂಬಾ ಕೆಲ್ಸ. ತಲೆ ತುಂಬ ಯೋಚನೆಗಳು, ಅದಕ್ಕೆ ತಕ್ಕಂತೆ ಯೋಜನೆಗಳು. ಇದು ನನ್ನ ಸಾಮಾನ್ಯ ದಿನಚರಿ. ಬಹಳ ದಿನ ಆದ್ಮೇಲೆ ಈ ಜೀವನಕ್ಕೆ ಮತ್ತೆ ವಾಪಾಸ್. ಹಾಗಾಗಿ, ನನ್ನ ಪೂರ್ತಿ ಏಕಾಗ್ರತೆ ಕೆಲಸದ ಕಡೆ, ಹೀಗೆ ಕೆಲ್ಸ ಮಾಡ್ತಿರ್ಬೇಕಿದ್ರೆ ಟೈಮು ರಾತ್ರಿ 12.30 ಆಗಿದ್ದು ಗೊತ್ತೇ ಆಗ್ಲಿಲ್ಲ. ಆ ಟೈಮು ಆಗ್ತಿದ್ದಂಗೆ ಕಣ್ಣು ಯಾಕೋ ಎಳೀತಿತ್ತು ಹಾಸಿಗೆ ಕಡೆಗೆ. ಸುಮಾರು 12.35 - 12.37 ಹೊತ್ತಿಗೆ, ಕಂಪ್ಯೂಟರ್ ಆಫ್ ಮಾಡಿ ಮಲ್ಕೊಂಡೆ.

ಮಲಗಿದ ಕೆಲವೇ ಕ್ಷಣದಲ್ಲಿ ನಿದ್ದೆ ಬಂದ್ಬಿಡ್ತು. ಅದು ಯಾವಾಗಲು ಹಂಗೆ, "ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ", ಅದೇ ರೀತಿ ಹಾಸಿಗೆ ಏರಿ, ಕಣ್ಣು ಮುಚ್ಚಿದ್ರೆ ನಿದ್ದೆ ಎಲ್ಲಿದ್ರೂ ಓಡಿ ಬರುತ್ತೆ. ನಿದ್ದೆಗೆ ಹೋದ್ಮೇಲೆ ಕನಸು ಬರ್ಬೇಕು ಅಲ್ವಾ...!!! ಬಂತು... ಭಯಾನಕ... :) ಕನಸು... ಬಂದೆ ಬಿಡ್ತು.

ಹೆಸರು ತಿಳಿಯದ ಊರು, ಸುತ್ತ-ಮುತ್ತ ಪರಿಚಯವಿಲ್ಲದ ಜನ, ಹಂಗೆ ತಿರುಗಾಡ್ತಿರ್ಬೇಕಿದ್ರೆ ಅಲ್ಲಿ ಎಲ್ಲೋ ದೂರದಲ್ಲಿ ಬೆಂಕಿ ಬಿದ್ದಿದೆ. ಅಲ್ಲಿಗೆ ಹೋಗೋ ಹೊತ್ಗೆ ಬೆಂಕಿ ಆರಿಹೋಗಿ, ಬೆಂಕಿಯಲ್ಲಿ ಅರ್ಧ ಬೆಂದ, ಸುಟ್ಟ ದೇಹಗಳು. ಅದನ್ನ ನೋಡೋಕೆ ಆಗದೆ ಕಣ್ಣು ಬಿಟ್ಟು, ಶಿವ ಶಿವ ಅಂತ ಒಂದೆರಡು ನಮಸ್ಕಾರ ಹೊಡೆದು ಮತ್ತೆ ಮಲ್ಕೊಂಡೆ. ಟೈಮು ಆಗ 2.15 ಆಗಿತ್ತು.

ಸುತ್ತಾ ಗೆಳೆಯರು, ಒಂದು ಸಣ್ಣ ಟ್ರಿಪ್ ಹೋಗಿ, ಮಜಾ-ಮಸ್ತಿ ಮಾಡಿ ಬಂದದ್ದಾಯಿತು. ಈಗ ಮತ್ತೇನು ಕೆಲ್ಸ ಅಂತ ಯೋಚಿಸ್ತಿರ್ಬೇಕಿದ್ರೆ, ಯಾಕೋ ಗೊತ್ತಿಲ್ಲ ಕಣ್ರೀ ಒಂದು ದೇವಸ್ಥಾನ ಬಾ ಅಂತ ಕರೆ ಕೊಡ್ತಾ ಇತ್ತು. ""ನಾನು ಇರೋದು ಬಸವನಗುಡಿ, ಗೌರಿ-ಗಣೇಶ ಹಬ್ಬದ ದಿನ ಗಣೇಶನಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಆಗಿತ್ತು ಅನ್ಸುತ್ತೆ, ಮೂರು ಸಾರಿ ನನ್ನ ದೇವಸ್ಥಾನಕ್ಕೆ ಕರೆಸ್ಕೊಂಡ. ಆ ದಿನ ಮೂರು ಬಾರಿ ದೊಡ್ಡ ಗಣೇಶನ ದರ್ಶನ ಆಯ್ತು..."" ಬಹುಷಃ ಇದೇ ವಿಷ್ಯ ತಲೆಯ ಯಾವ್ದೋ ಮೂಲೇಲಿ ಇತ್ತು ಅನ್ಸುತ್ತೆ, ಒಂದು ದೇವಸ್ಥಾನದಿಂದ ಕರೆ ಬರ್ತಿತ್ತು. ಹೇಗೆ ಹೋದ್ರೆ ಎಲ್ಲಿ ಹೋಗ್ತೀನಿ ಏನು ಗೊತ್ತಿಲ್ಲ, ಯಾವ ದಾರೀಲಿ ಹೋಗ್ತಿದ್ದೀನಿ ಅಂತ ಗೊತ್ತಿಲ್ಲ. ಹೋಗ್ತಾ ಇದ್ರೆ ಎಂಥಾ ಖುಷಿ!!! ಎಡಗಡೆ ನೋಡ್ಬೇಕೋ, ಬಲಗಡೆ ನೋಡ್ಬೇಕೋ ಕನ್ಫ್ಯೂಷನ್. ಒಂದಕ್ಕಿಂತ ಒಂದು ಸುಂದರ. ಪ್ರಕೃತಿ ಅನ್ನೋ ಮಾಯೆ, ಪೂರ್ತಿ ಮೋಡಿ ಮಾಡ್ಬಿಟ್ಟಿದ್ಳು. ಅದೇ ಗುಂಗಲ್ಲಿ ಮುಂದೆ ಹೋಗ್ತಾ ಇದ್ದೆ, ಎದುರು ಒಂದು ಹಳೆಯ ದೇವಸ್ಥಾನ. ಹೊರಗಿಂದ ನೋಡಿದ್ರೆ ತುಂಬ ಹಳೆಯ ದೇವಸ್ಥಾನ ಅನಿಸ್ತಿತ್ತು. ಒಳಗೆ ಹೋದ್ರೆ, ನೆಲ ಎಲ್ಲ ಕಿತ್ತು ಕಾಂಕ್ರೀಟ್ ಹಾಕ್ತಿದ್ದಾರೆ. ಒಳಗೆ ಹೋಗಿ ಅಲ್ಲಿದ್ದ ಶಿವಲಿಂಗದ ದರ್ಶನ ಮಾಡಿ, ಕಣ್ಣು ಬಿಟ್ಟೆ. ಎದುರು ನನ್ನ ಗೆಳತಿ!!!! ಒಬ್ಬರನ್ನೋಬ್ರು ನೋಡಿದ್ಮೇಲೆ ಮುಖದ ಮೇಲೆ ಕಿರುನಗೆ. ಇಬ್ಬರು ದೇವರ ದರ್ಶನ ಮಾಡಿ ಆಯ್ತು. ಆಮೇಲೆ ಸಾಮಾನ್ಯವಾಗಿ ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕೂರ್ತೀವಿ ಅಲ್ವಾ... ಅದೇ ರೀತಿ ಕೂತ್ಕೊಂಡು ಮಾತಾಡೋಕೆ ಶುರು ಮಾಡಿದ್ವಿ....

ಏನು ಇವತ್ತು ನೀನು ದೇವಸ್ಥಾನಕ್ಕೆ ಬಂದಿದ್ದೀಯ???

ಇವತ್ತು ಏನು ಸ್ಪೆಷಲ್ ಅಂತ ಗೊತ್ತಿಲ್ವಾ ನಿಂಗೆ...???

ಇಲ್ಲ ಕಣೆ!!! ಈ ದಿನ ಯಾವ ಹಬ್ಬನು ಇಲ್ಲಾ, ಏನು ವಿಶೇಷ ಅಂತ ಗೊತಾಗ್ತಾ ಇಲ್ಲಾ ನೀನೆ ಹೇಳೆ... :)

ಸ್ವಲ್ಪ ಹೊತ್ತು ಕಾದು ನೋಡು ಗೊತ್ತಾಗುತ್ತೆ (ಒಂದು ತುಂಟ ನಗೆ)...

ತುಂಬ ಚೆನ್ನಾಗಿ ಕಾಣಿಸ್ತಿದ್ದೀಯಾ ಕಣೆ... ಆದ್ರೆ ಏನು ಸ್ಪೆಷಲ್ ಅಂತ ಇನ್ನು ನನ್ನ ತಲೆಗೆ ಹೊಳೀತಿಲ್ಲ...
(ಮತ್ತೆ ಅದೇ ತುಂಟ ನಗೆ)

ನೋಡ್ತಾ ಇರು ಹೀಗೆ ನನ್ನ .... ಇನ್ನು ಸ್ವಲ್ಪ ಹೊತ್ತಲ್ಲೇ ಗೊತ್ತಾಗುತ್ತೆ... :)

ಈಗ ಬೇರೆ ಇನ್ನೇನು ಕೆಲ್ಸ ಇದೆ ಹೇಳು, ಅದೇ ಮಾಡ್ತೀನಿ ಚಿನ್ನು....

ಸರಿ ಬಾ ಹೋಗೋಣ, ದೇವಸ್ಥಾನ ಪ್ರದಕ್ಷಿಣೆ ಹಾಕ್ಬೇಕು... ನಾ ಮುಂದೆ ಹೋಗ್ತೀನಿ, ನೀ ಹಿಂದೆ ಬಾ...

ಸರಿ ಕಣೆ.. ನಡೆ ಮುಂದೆ.. ನಾ ನಿನ್ನ ಹಿಂದೆ... :) 

ಅವಳು ಮುಂದೆ ಹೋಗ್ತಿದ್ದಾಳೆ, ನಾನು ಅವಳ ಹಿಂದೆ ಹೋಗ್ತಿದ್ದೇನೆ... ಏನೋ ಸ್ಪೆಷಲ್ ಅನಿಸ್ತಿದೆ.!!! ಏನು ಏನು ಏನು... :) ಒಹ್...!!! ನನ್ನ ಇಷ್ಟದ ಲಂಗದಾವಣಿ ಹಾಕಿದ್ದಾಳೆ.... :) ಓಡಿ ಹೋಗಿ.. ಎದುರು ನಿಂತು...

ಹೇಳು...

ಏನ್ ಹೇಳ್ಬೇಕು???

ಏನು ಹೇಳ್ಬೇಕು ಅಂತ ನಿನ್ನ ಮನಸಲ್ಲಿದೆಯೋ ಅದು...

ಏನು ಇಲ್ಲಾ... :) (ಮತ್ತದೇ ತುಂಟ ನಗೆ)

ಏನು ಹೇಳೋದಿಲ್ವಾ??? ಸರಿ.. ಹಾಗಿದ್ರೆ ಈ ಬಟ್ಟೆ ಯಾಕೆ???
(ಅಲ್ಲೇ ಒಂದೆರಡು ಪುಟ್ಟ ಹೆಣ್ಣು ಮಕ್ಕಳು ಆಟ ಆಡ್ತಿದ್ವು, ಆ ಮಕ್ಕಳು ಕೂಡ ಲಂಗ-ದಾವಣಿ ಹಾಕಿದ್ರು)

ಅಲ್ಲಿ ನೋಡು... ಆ ಮಕ್ಳು ಕೂಡ ಇದೆ ರೀತಿ ಬಟ್ಟೆ ಹಾಕಿದ್ದಾರೆ.. ಅದರಲ್ಲಿ ಏನು ಸ್ಪೆಷಲ್???

ಹೇಳೆ....

ಮೊದ್ಲು ಪ್ರದಕ್ಷಿಣೆ ಹಾಕು.... ನನ್ನ ಹಿಂದೆ ಬಾ.... :)

ಮೂರು ಪ್ರದಕ್ಷಿಣೆ ಹಾಕಿದ್ದು ಆಯ್ತು. ಮತ್ತೆ ಅವ್ಳು ಮುಂದೆ ಹೋಗಿದ್ದಾಳೆ ನಾನು ಅವಳ ಹಿಂದೆ ಹೋಗ್ತಿದ್ದೇನೆ. ಯಾಕೋ ಗೊತ್ತಿಲ್ಲ ಕಣ್ರೀ, ಮತ್ತೆ ಅವಳು ಏನೋ ಹೇಳಬೇಕಿದೆ ಅಂತ ಅನಿಸ್ತು... ಮತ್ತೆ ಓಡಿ ಹೋಗಿ.. ಅವಳ ಎದುರು ನಿಂತು...

ಹೇಳ್ತೀಯಾ? ಇಲ್ವಾ??? :)

ಏನು ಇಲ್ಲಾ ಕಣೋ.. ಹೇಳ್ದೆ ಅಲ್ವಾ.... ಸುಮ್ನೆ ನನ್ ಹಿಂದೆ ಬಾ... :) 

ಆಗೋದಿಲ್ಲ.. ನಾ ಮುಂದೆ ಹೋಗ್ತೀನಿ... ನೀನೆ ಹಿಂದೆ ಬಾ... 

ಸರಿ... :) (ಮೆಲುದನಿಯಲ್ಲಿ : ಇನ್ಮುಂದೆ ಅದು ಇದ್ದಿದ್ದೆ ಅಲ್ವಾ... :) )

ಇನ್ನೊಂದ್ಸಲ ಹೇಳು....

ಏನು ಇಲ್ಲಾ... :)
(ನೋಡೋಕೆ ಕಡ್ಡಿ ರೀತಿ ಇದ್ರೂ, ತಿಂಡಿಪೋತಿ :) )

ಸೌತೆಕಾಯಿ ಕೊಡ್ಸೋ ನಂಗೆ....

ಸರಿ ಬಾ... 
(ಕೊಡ್ಸಿದ್ದು ಆಯ್ತು, ಇದೆ ತರ ಸೌತೆಕಾಯಿ ಮತ್ತೆ ಹಣ್ಣು ತಿಂತಿದ್ರೆ ದಪ್ಪ ಯಾವ ಕಡೆಯಿಂದ ಆಗೋದು... )
ಮುಂದೆ ಹೋಗ್ತಾ ಇದ್ದೇನೆ... ಹಿಂದೆ ಬರ್ತಾ ಇದ್ದಾಳೆ.. ಪಾಪಿ.. ತಿನ್ನು ಅಂತ ಆಫರ್ ಕೂಡ ಮಾಡ್ಲಿಲ್ಲ. ಹಾಗೆ ಅವ್ಳು, ಅವ್ಳು ತಿಂದಿದ್ದು ನಂಗೆ ಕೊಡ್ತಿರ್ಲಿಲ್ಲ, ನಾ ತಿಂದದ್ದು ತಗೊತಿರ್ಲಿಲ್ಲ.

ಉಪ್ಪು ಬೇಕಾ ಉಪ್ಪು....???? 

ಬೇಡ ಹೋಗೆ.... ಉಪ್ಪು ಬೇಡ, ಸೌತೆಕಾಯಿ ಕೂಡ ಬೇಡ.. ಎಲ್ಲ ನೀನೆ ತಿನ್ನು...

ನಾವು ಮಕ್ಕಳಿದ್ದಾಗ ಉಪ್ಪುಮೂಟೆ ಆಟ ಆಡಿದ ಜ್ಞಾಪಕ ಇರುತ್ತೆ ಅನ್ಸುತ್ತೆ ನಿಮ್ಗೆ, ಸ್ವಲ್ಪ ಆ ಟೈಮ್ ಗೆ ಹೋಗಿಬನ್ನಿ...
ಹಿಂದೆಯಿಂದ ಓಡಿ ಬಂದವಳೇ ಬೆನ್ನಮೇಲೆ ಏರಿ ನನ್ನ ಹಿಡ್ಕೊಂಡ್ಳು.. ಹಿಂದೆಯಿಂದ ಬಂದು ಕುತ್ತಿಗೆಗೆ ಕೈ ಹಾಕಿ ಬೆನ್ನ ಮೇಲೆ ಹತ್ತಿದ್ರೆ, ನಾನು ಕೂಡ ಕೈ ಹಿಂದೆ ಹಾಕಿ ಹಿಡ್ಕೋಳ್ಳಲೇ ಬೇಕು... ಹಿಡ್ಕೊಂದ್ಬಿಟ್ಟೆ... ಉಪ್ಪಿನಮೂಟೆ ಬೆನ್ನಮೇಲೆ ಏರಿಯೇ ಬಿಡ್ತು... :)

ಈಗ್ಲಾದ್ರೂ ಹೇಳು ಬಂಗಾರ....

ನಾ ಹೇಳೋ ದಾರೀಲಿ ನನ್ನ ಹೊತ್ಕೊಂಡು ಹೋಗು... :)

ಈಗಾಗ್ಲೇ ಹೊತ್ಕೊಂಡಿದ್ದೀನಿ ಕಣೆ.. ನೀ ಹೇಳೋ ದಾರೀಲಿ ಹೋಗೋದು ಅಷ್ಟೇ... :)

ಸೀದಾ ಹೋಗು, ರೈಟ್ ಹೋಗು, ರೈಟ್ ಹೋಗು, ಲೆಫ್ಟ್ ಹೋಗು.. ಲೆಫ್ಟ್ ಹೋಗು.. ರೈಟ್ ಹೋಗು... ಹೋಗ್ತಾ ಹೋಗ್ತಾ... ಅವ್ಳು ತಿಂತಿದ್ದ ಸೌತೆಕಾಯಿ ನನಗು ತಿನ್ಸಿದ್ಳು.. ಮತ್ತೆ ಅವ್ಳು ತಿಂದ್ಳು....ಹೀಗೆ ಅದು ಬದಲಾವಣೆ ಆಗ್ತಿತ್ತು... ಪ್ರತಿಸಲ ಕೇಳ್ದಾಗ್ಲು... ಏನಿಲ್ಲಾ ಅಂತ ಹೇಳ್ತಿದ್ಳು....

ನಿಂತ್ಕೋ.... 

ಹಾ ನಿಂತೇ... ಮುಂದೆ???? 

ಏನಿಲ್ಲಾ.... :) ಇಳಿಸು ನನ್ನ ಕೆಳಗೆ....

ಕೆಳಗೆ ಇಳಿಸಿದ ಮೇಲೆ ಮುಂದೆ ಬಂದು ನಿಂತ್ಳು.....ನಗ್ತಿದ್ದಾಳೆ,,, ನನ್ನೇ ನೋಡ್ತಿದ್ದಾಳೆ...

ಹಂಗೆ ನೋಡ್ಬೇಡ ಕಣೆ... ನಂಗೆ ಕಷ್ಟ ಆಗುತ್ತೆ.... ಹೇಳು... ಬೇಗ... 

ಏನಿಲ್ಲಾ.... ಸುತ್ತಾ ನೋಡು.. ಒಂದ್ಸಲ....

ಅರೆ..!!! ಅದೇ ದೇವಸ್ಥಾನ... (ದೇವಸ್ಥಾನದ ಮುಂಬಾಗಿಲಲ್ಲಿ ನಿಂತಿದ್ವಿ ಇಬ್ರು. ಅವ್ಳನ್ನ ಹೊತ್ಕೊಂಡು ಆ ದೇವಸ್ಥಾನ ಸುತ್ತು ಹಾಕಿದ್ದೀನಿ... ನಿಜವಾಗಿ ಹೇಳ್ಬೇಕು ಅಂದ್ರೆ ಸುತ್ತು ಹಾಕ್ಸಿದ್ದಾಳೆ....) ಹ.... ಮುಂದೆ...????

ಒಬ್ರನ್ನೊಬ್ರು ನೋಡ್ತಾನೆ ಇದ್ವಿ...
ಬಂದು ಗಟ್ಟಿಯಾಗಿ ಅಪ್ಕೊಂಡು, ತಲೆ ಮೇಲೆತ್ತಿ... ಕಣ್ಣನ್ನೇ ನೋಡ್ತಾ....

ನೀನಂದ್ರೆ ನಂಗೆ ಇಷ್ಟ ಕಣೋ.... I Love You.... :) (ಎರಡು ಹನಿ ಕಣ್ಣಿಂದ ಕೆಳಗೆ ಇಳೀತಾ ಇತ್ತು...)

ಅವಳ ಕಣ್ಣನ್ನೇ ನೋಡ್ತಾ... ಕೆಳಗೆ ಇಳೀತಿದ್ದ ಹನಿಗಳನ್ನ ಒರೆಸ್ತಾ...

ನೀನಂದ್ರೆ ನಂಗು ಇಷ್ಟ ಕಣೆ... I Love You tooo ಚಿನ್ನು.... 

ಹಣೆಗೆ ಮುತ್ತಿಟ್ಟೆ... ಕಣ್ಣುಬಿಟ್ಟೆ.... ಟೈಮು ನೋಡಿದ್ರೆ ಬೆಳಗಿನ ಜಾವ  4.37.

ಒಂದು ಸುಂದರ ಕನಸು.... :) ಆದ್ರೂ ತುಂಬ ಅದ್ಭುತ ಅನುಭವ.... ಮರ್ಯೋದಕ್ಕೆ ತುಂಬ ಕಷ್ಟ ಕಣ್ರೀ... ಏನೇ ಆಗ್ಲಿ ಅದು ಕನಸು ಮಾತ್ರ... ಅಷ್ಟಕ್ಕೇ ಖುಷಿ ಪಡಬೇಕು.... ಜಾಸ್ತಿ ಆಸೆ ಇಟ್ಕೊಬಾರ್ದು... ಬಿಸಿಲುಕುದುರೆ ಹಿಡಿತೀವಿ ಅಂತ ಅದರ ಹಿಂದೆ ಓಡಿದ್ರೆ ಅದು ಕೈಗೆ ಸಿಗುತ್ತಾ????

Monday, September 24, 2012

8.15AM to 9.24PM ....

ಏನಪ್ಪಾ ಇದು ಟೈಟಲ್ ಹಿಂಗಿದೆ ಅಂತ ತಲೆ ಕೆಡಿಸ್ಕೋಬೇಡಿ, ಅದರ ಅರ್ಥ ಇಷ್ಟೇ. ಬೆಳ್ಗೆ 8.15 ರಿಂದ ರಾತ್ರಿ 9.24 ವರೆಗೆ, ಅಂದ್ರೆ ಬೆಳಿಗ್ಗೆಯಿಂದ ರಾತ್ರಿವರೆಗೂ ಬೀದಿ ಸುತ್ತಿದರ ಬಗ್ಗೆ ಈ ಆರ್ಟಿಕಲ್ ಅಂತ....

ಬೆಂಗಳೂರಿಂದ ಕೇವಲ 130-140 ಕಿ.ಮೀ. ಅಷ್ಟೇ, ನಾನು ಬೈಕ್ ಅಲ್ಲಿ ಹೋಗೋಣ ಅಂತ ಅಂದ್ಕೊಂಡಿದ್ದೆ. ಆದ್ರೆ ಮನೇಲಿ ಬಿಡ್ಬೇಕಲ್ವ, ನನ್ನ ಕೆಲವು ಗೆಳಯರು ಕೂಡ ಬೇಡ ಅಂತ ಹೇಳಿದ್ರು. ಹಾಗಾಗಿ ಬೈಕ್ ಪ್ಲಾನ್ ಬಿಟ್ಟು ಬಸ್ಸಲ್ಲಿ ಹೋಗೋದು ಅಂತ ರೆಡಿ ಆಗಿದ್ದೆ. ಮನೆಯಲ್ಲಿ ಅಮ್ಮ ಅರೆಮನಸ್ಸಿನಿಂದ ಹೋಗು ಅಂತಿದ್ರು. ನಾನು ಒಬ್ನೇ ಹೋಗೋದು ಅವ್ರಿಗೆ ಇಷ್ಟ ಇರ್ಲಿಲ್ಲ, ಗೆಳೆಯರ ಜೊತೆ ಹೋದ್ರೆ ಚೆನ್ನಾಗಿರುತ್ತೆ ಅಂತ ಹೇಳ್ತಿದ್ರು (ಮಂಡ್ಯದ ಕಡೆ ಕಾವೇರಿ ಗಲಾಟೆ ಅನ್ನೋದು ಬೇರೆ ಅವರ ತಲೇಲಿ ಇತ್ತು...) ... ಆದ್ರೆ ಏನ್ ಮಾಡೋಣ ಗೆಳಯ/ಗೆಳತಿಯರೆಲ್ಲ ಬ್ಯುಸಿ.... ಅದ್ಕೆ ನನ್ನ ಪಾಡಿಗೆ ನಾನು ಹೋಗಿ ಬರೋದು ಅಂತ ನಿರ್ಧಾರ ಮಾಡ್ಕೊಂಡು ಹೋಗಿ ಬರ್ತೀನಿ ಅಂತ ಹೇಳಿ ಹೊರಟೆ.

ಶನಿವಾರ 22-sept-2012 ಬೆಳಿಗ್ಗೆ 8.15 ರ ಸುಮಾರಿಗೆ ಮನೆ ಇಂದ ಹೊರಟ ನಾನು, ಐದು-ಹತ್ತು ನಿಮಿಷದಲ್ಲಿ ಶ್ರೀನಗರ ಬಸ್ಸ್ಟ್ಯಾಂಡ್ ಸೇರ್ಬಿಟ್ಟೆ. ಅಲ್ಲಿ ನೋಡಿದ್ರೆ, ಮೇಲುಕೋಟೆ ಗೆ ಹೋಗುವ ಬಸ್... ಆಹಾ.. ಖುಷಿ.. ಮಂಡ್ಯ ಗೆ ಹೋಗಿ ಹೋಗ್ಬೇಕು ಅಂದ್ಕೊಂಡಿದ್ದೆ, ನಾಗಮಂಗಲಗೆ ಹೋಗಿ ಹೋಗ್ಬೇಕು ಅಂದ್ಕೊಂಡಿದ್ದೆ, ಆದ್ರೆ ಅಲ್ಲಿ ನೋಡಿದ್ರೆ ಡೈರೆಕ್ಟ್ ಬಸ್... ಹತ್ಕೊಂಡು ಕೂತ್ಕೊಂದ್ಬಿಟ್ಟೆ. ಐದು ನಿಮಿಷ ಅದ್ಮೇಲೆ.. ಮತ್ತೊಂದು ಬಸ್ ಬಂತು, ನಾನು ಕೂತಿದ್ದ ಬಸ್ ನ ಕ್ಲೀನರ್ ಬಂದು, ಈ ಬಸ್ ಇನ್ನೂ ಲೇಟ್... ಆ ಬಸ್ ಅಲ್ಲಿ ಹೋಗಿ ಅಂತ ಹೇಳ್ದ. ಅದು ಕೂಡ ಪ್ರೈವೇಟ್ ಬಸ್, KSRTC ಕಡೆಯಿಂದ ಜಾಸ್ತಿ ಬಸ್ ಇಲ್ಲ, ಇದರ ಉಪಯೋಗ ಪಡೆದುಕೊಳ್ಳುವ ಪ್ರೈವೇಟ್ ಟ್ರಾನ್ಸ್ಪೋರ್ಟ್ ನವರು, ಒಂದಷ್ಟು ಬಸ್ ಹಾಕಿದ್ದಾರೆ. ಸರಿ ಇಷ್ಟೆಲ್ಲಾ ಆಯ್ತು, ಆ ಬಸ್ ಹತ್ತಿ ಕೂತ್ಕೊಂಡೆ, ಎರಡು ಸೀಟ್ ಇರೋ ಕಡೆ ಸಿಂಗಲ್ ಆಗಿ ಕಿಟಕಿ ಸೀಟ್ ಅಲ್ಲಿ ಕೂತ್ಕೊಂಡೆ. ಸುಮಾರು 8.45 ಹೊತ್ಗೆ ಬಸ್ ಹೊರಡೋಕೆ ಶುರು ಆಯ್ತು. ಒಬ್ನೇ ಕೂತ್ಕೊಂಡು ಏನ್ ಮಾಡ್ಲಿ, ಸ್ವಲ್ಪ ದೂರ ಹೋಗೋ ಹೊತ್ಗೆ ನಿದ್ದೆಗೆ ಶರಣಾದೆ. ನಿದ್ದೇಲಿ ನನ್ ಪಕ್ಕ ಯಾವ್ದೋ ಸೂಪರ್ ಫಿಗುರ್ ಬಂದ ಹಾಗೆ ಕನಸು ಕಾಣ್ತಾ, ಯಾವ್ದೋ ಲೋಕಕ್ಕೆ ಹೋಗ್ಬಿಟ್ಟೆ.

ಕಣ್ಣು ಬಿಟ್ರೇ, ಆಹಾ, ಎಂಥ ಖುಷಿ. ಏನೋ ಸಂಭ್ರಮ. ಐದು ನಿಮ್ಷ ಆಯ್ತು, ಹತ್ತು ನಿಮ್ಷ ಆಯ್ತು.. ಎಷ್ಟು ಹೊತ್ತು ಕಿಟಕಿ ಕಡೆ ನೋಡಲಿ. ಈಗ ಬೇರೆ ಸಹವಾಸ ದೋಷ, ಸುಮ್ನೆ ಕೂರೋಕೆ ಕಷ್ಟ, ಏನಾದ್ರು ಮಾತಾಡ್ಬೇಕು. ಸರಿ ಮಾತು ಶುರು ಮಾಡೋಣ ಅಂತ ನಿರ್ಧಾರ ಮಾಡಿ, ಕೇಳೆ ಬಿಟ್ಟೆ

ಅಜ್ಜಿ, ಯಾವೂರು ನಿಮ್ದು?

ಅಯ್ಯೋ!!! ನನ್ನದಾ ಮಗ, ನಾಗಮಂಗಲ. ಅದೇ ನಾಗಮಂಗಲದಲ್ಲಿ TB ಐತೆ ಅಲ್ವಾ? ಅಲ್ಲೇ ನಮ್ಮನೆ. ನಾಲ್ಕೆಜ್ಜೆ ಅಲ್ಲಿಂದ. ಅಲ್ಲಿ TB ಹತ್ರ ಇಳ್ಕೊಂಡು ಹಂಗೆ ಸೀದಾ ಟೌನ್ ಕಡೆ ನಡ್ಕೊಂಡು ಹೋದ್ರೆ, ನಾಲ್ಕೆಜ್ಜೆ, ಹತ್ತೋ-ಹನ್ನೊಂದನೇ ಮನೆ, ಎರಡು ಗಲ್ಲಿ ದಾಟಿದ್ಮೇಲೆ.
(ಅಲ್ಲಿಗೆ ನಿಲ್ಲಿಸಿ ನಾನು ಮಾತು ಮುಂದುವರೆಸ್ದೆ)

ಒಹ್!!! ಎರಡೇ ಗಲ್ಲಿ ಅದ್ಮೇಲೆ ಹತ್ತೋ-ಹನ್ನೊಂದನೇ ಮನೆ, ನಾಲ್ಕೆಜ್ಜೆ. ಜಾಸ್ತಿ ಹತ್ರ ಆಯ್ತು ಬಿಡಿ. ಮತ್ತೆ ಇಲ್ಲಿ ಬಂದಿದ್ದು?

ಅಯ್ಯೋ, ಅದಾ ಏನ್ ಹೇಳ್ಲಿ ಮಗ, ನನ್ ಮಗಳನ್ನ ಇಲ್ಲೇ ಬೆಂಗಳೂರಿಗೆ ಕೊಟ್ಟಿದ್ದೀವಿ, ಹಬ್ಬಕ್ಕೆ ಅಂತ ಬಂದಿದ್ದೆ. ಏನ್ ಜೋರು ಮಾಡಿದ್ರು ಅಂತೀಯ ಹಬ್ಬಾನ, ಆ ಮೊಮ್ಮಕ್ಳಂತೂ ಏನ್ ಚೂಟಿ ಗೊತ್ತಾ. ನಿಂತ ಕಡೆ ನಿಲ್ಲೋದಿಲ್ಲ, ಕೂಟ ಕಡೆ ಕೂರೋದಿಲ್ಲ... ಇನ್ನೂ ಐದು ವರ್ಷ ಇಲ್ಲ ಅವಕ್ಕೆ ಎಷ್ಟು ಮಾತಾಡ್ತಾವೆ ಅಂದ್ರೆ ಕೇಳೋಕೆ ಎರಡು ಕಿವಿ ಸಾಲ್ದು.....

ಸರಿ... ಸರಿ.. ಈ ಬಸ್ಸು ನಾಗಮಂಗಲಕ್ಕೆ ಎಷ್ಟು ಹೊತ್ಗೆ ಹೋಗುತ್ತೆ ಅಜ್ಜಿ...

ಅಯ್ಯೋ... ಒಂದು 11.45-12.00 ಟೈಮ್ ಗೆ ಹೋಗುತ್ತೆ ಮಗ. ಈ ___________ ಮಗ, ಅಲ್ಲಲ್ಲಿ ನಿಲ್ಲಿಸ್ಕೊಂಡು, ಹೋಗೋ-ಬರೋರ್ನೆಲ್ಲ ಹತ್ತಿಸ್ಕೊಂಡು ಅಲ್ಲಿಗೆ ಹೋಗೋ ಹೊತ್ಗೆ ನನ್ ಜೀವ ಹೋಗ್ಬಿಡುತ್ತೆ. ಇವ್ನಿಂಗೆ ಏನ್ ಬಂದೈತೆ ದೊಡ್ರೋಗ, ಸೀದಾ ಹೋಗೋಕೆ ಆಗೋಲ್ವಾ???? ಅಲ್ಲಲ್ಲಿ ನಿಲ್ಲಿಸ್ಕೊಂಡು ಹೋದ್ರೆನೆ ಈ ______________ ಮಕ್ಳಿಗೆ ತಿಂದದ್ದು ಜೀರ್ಣ ಆಗೋದು........

ಅಜ್ಜಿ, ಊರಲ್ಲಿ ಒಬ್ರೇನಾ?

ಅಯ್ಯೋ... ಒಬ್ಳೆ ಎಲ್ಲಿ ಇರೋಕೆ ಆಗುತ್ತೆ. ಒಬ್ಳೆ ಇರೋಕೆ ಬಿಟ್ಟಾರ ಊರ ಜನ. ಅವ್ನೆ ನನ್ ಗಂಡ. ಕೈಗೆ ಎರಡು ಕೊಟ್ಟು ಆಮೇಲೆ ಕೈಲಾಗ್ದಂಗೆ ಮನೆಗೆ ಬಿದ್ದವ್ನೆ, ಅವ್ನಿಗೂ ನಾನೇ ತಂದು ಹಾಕ್ಬೇಕು.....


ಹೀಗೆ ಹೋಯ್ತು ನಮ್ಮ ಮಾತುಕತೆ... ನಾಗಮಂಗಲ ಬಂದೇ ಬಿಡ್ತು... ಅಜ್ಜಿಗೆ ಟಾಟಾ ಹೇಳಿ ಕಳಿಸ್ದೆ. ನಾಗಮಂಗಲ ಸೇರೋಹೊಟ್ಗೆ ಟೈಮು 12.00 ಆಗಿತ್ತು. ಅಲ್ಲಿ ಒಂದು ಹದಿನೈದು ನಿಮ್ಷ ಟೀ ಬ್ರೇಕ್ ಬೇರೆ. ಆಯ್ತು.. ಡ್ರೈವರ್, ಕಂಡಕ್ಟರ್, ಕ್ಲೀನರ್ ಎಲ್ಲ ಹೋಗಿ ಟೀ ಕುಡ್ಕೊಂಡು ಬಂದ್ರು. ಬಸ್ ಮತ್ತೆ ಹೊರಟಾಗ 12.20. ಮತ್ತೆ ವಿಶೇಷ ಏನು ಇಲ್ಲ, ಮೇಲುಕೋಟೆ ರೀಚ್ ಅದಾಗ 12.50 ಆಗಿತ್ತು. ಅಮ್ಮಂಗೆ ಒಂದು ಕಾಲ್ ಮಾಡಿ, ಅಲ್ಲೇ ಇದ್ದ ಜನರನ್ನ ಕೇಳ್ತಾ ಯೋಗಾನರಸಿಂಹ ದೇವಸ್ಥಾನದ ಕಡೆ ಹೊರಟೆ.

ಸಾಮಾನ್ಯವಾಗಿ ದೇವರಿಗೆ ಕಾಯಿ-ಹಣ್ಣು ಕೊಟ್ಟು ಪೂಜೆ ಮಾಡ್ಸೋದು, ತಟ್ಟೆಗೆ ಕಾಸು ಹಾಕೋದು ನಂಗೆ ಇಷ್ಟ ಆಗೋಲ್ಲ. ಆದ್ರೆ ಯಾಕೋ ಗೊತ್ತಿಲ್ಲ, ಬಹುಷಃ ಅಮ್ಮ ಬೈತಾರೆ ಅಂತಾ ಅಂದ್ಕೊಂಡು, ಕಾಯಿ-ಹಣ್ಣು ತಗೊಂದ್ಬಿಟ್ಟೆ. ಅದಕ್ಕೆ 30 ರೂಪಾಯಿ (ಒಂದೇ ತೆಂಗಿನ ಕಾಯಿ, ನಾಲ್ಕೈದು ಬಾಳೆಹಣ್ಣು, ನಾಲ್ಕು ಕಡ್ಡಿ, ಎರಡು ಕರ್ಪೂರ ಮತ್ತೆ ಅರಿಶಿನ-ಕುಂಕುಮ). ಚಪ್ಪಲಿ ಅಲ್ಲೇ ಬಿಟ್ಟು, ಯೋಗಾನರಸಿಂಹ ದೇವಸ್ಥಾನದ ಕಡೆಗೆ ನನ್ನ ಹೆಜ್ಜೆ. ಮೆಟ್ಟಿಲುಗಳು ಅಷ್ಟೇನೂ ಜಾಸ್ತಿ ಇಲ್ಲ, ಟ್ರೆಕ್ಕಿಂಗ್, ಟ್ರಿಪ್ ಬೇಜಾನ್ ಹೋಗಿದ್ದ ನಂಗೆ ಅದೇನು ಅಷ್ಟು ಕಷ್ಟ ಅನಿಸ್ಲಿಲ್ಲ. ಟ್ರೆಕ್ಕಿಂಗ್ ಹೋಗಿ ತುಂಬಾ ದಿನ ಆಗಿದ್ರಿಂದ, ಮೇಲೆ ಸುಡು ಬಿಸಿಲು ಬೇರೆ, ಆಗಾಗ ಸ್ವಲ್ಪ ಸುಸ್ತು ಅನಿಸ್ತಿತ್ತು. ವಯಸ್ಸು ನೋಡಿ, ಹೇಳಿದ ಮಾತು ಕೇಳೋದಿಲ್ಲ, ಒಂದೇ ಉಸಿರಲ್ಲಿ ಹತ್ತೇಬಿಟ್ಟೆ. ದೇವಸ್ಥಾನದ  ಒಳಗೆ ಕೂಡ ಹೋಗ್ಬಿಟ್ಟೆ.

ಒಂದೇ ಕ್ಷಣ, ಒಂದೇ ಸೆಕೆಂಡ್ ಏನಾದ್ರು ಅನ್ಕೊಳ್ಳಿ....
ಆಕಾಶ ತಲೆಮೇಲೆ ಬಿದ್ದಂಗೆ ಆಯ್ತು, ಉಸಿರು ಕಂಟ್ರೋಲ್ ಮಾಡೋಕೆ ಆಗ್ತಿಲ್ಲ, ಹೃದಯ ಬಡ್ಕೋತಾ ಇದೆ. ಆ ಒಂದು ಕ್ಷಣ ತಲೇಲಿ ಸಾವಿರ ಯೋಚನೆಗಳು....

ಆಹಾ!! ಎಂಥ ಖುಷಿ, ದೇವಸ್ಥಾನದಲ್ಲಿ ಜೀವ ಹೋದ್ರೆ.. ಅದಕ್ಕಿಂತ ಪುಣ್ಯ ಮತ್ತೇನಿದೆ. ಯಾವುದೇ ತಂಟೆ ಇಲ್ಲ, ಸುತ್ತ ಅಳೋರು ಯಾರು ಇಲ್ಲ. ಯಾರ್ಗೂ ನೋವು ಮಾಡ್ತಿಲ್ಲ. ಕಷ್ಟನೇ ಪಡದೆ ಜೀವ ಹೋಗ್ಬಿಡ್ತಿದೆ........

ಅಯ್ಯೋ ಇಲ್ಲೇ ನಾನು ಸತ್ತು  ಹೋದ್ರೆ, ಮನೆಗೆ ಯಾರು ಹೇಳೋರು, ಅಮ್ಮ ಎಷ್ಟು ನಂಬಿಕೆ ಇಟ್ಕೊಂಡು  ನನ್ನ ಕಳ್ಸಿದ್ದಾರೆ. ಅವ್ರಿಗೆ ಹುಷಾರಾಗಿ ಹೋಗಿ ಬರ್ತೀನಿ ಅಂತಾ ಹೇಳಿದ್ದೀನಿ, ಈಗ ವಾಪಾಸ್ ಬರೋದಿಲ್ಲ ಅಂತಾ ಗೊತ್ತಾದ್ರೆ???? ಅವ್ರಿಗೆ ಈ ವಿಷ್ಯ ತಿಲಿಸೋರು ಯಾರು??? ಈ ವಿಷ್ಯ ಕೇಳಿ ಅವರ ಸ್ಥಿತಿ ಏನಾಗುತ್ತೆ???  .........
(ಊರಿಂದ ಊರಿಗೆ ಹೋಗಬೇಕಿದ್ರೆ ದಯವಿಟ್ಟು ಮತ್ತೊಬ್ರು ಜೊತೆ ಇದ್ರೆ ಒಳ್ಳೇದು ಅನ್ಸುತ್ತೆ)

ಬಿಡಿ, ಹೊರಗೆ ಬಂದು, ಕೂತ್ಕೊಂಡು ನಾನು ಯಾವಾಗ್ಲು ಮಾಡೋ ಹಾಗೆ, ಉಸಿರು ಕಂಟ್ರೋಲ್ (ಪ್ರಾಣಾಯಾಮ) ಮಾಡೋಕೆ ಶುರು ಮಾಡ್ಕೊಂಡೆ. ಎರಡು ಮೂರು ನಿಮಿಷ ಕೂತ್ಕೊಂಡು ಪ್ರಾಣಾಯಾಮ ಮಾಡಿದ್ಮೇಲೆ ನನ್ನ ಪೂರ್ತಿ ದೇಹ ಕಂಟ್ರೋಲ್ ಗೆ ಬಂತು.

ಆಮೇಲೆ ಎದ್ದು, ಮತ್ತೆ ದೇವಸ್ಥಾನದ ಒಳಗೆ ಹೋಗಿ, ಕಾಯಿ-ಹಣ್ಣು ಕೊಟ್ರೆ, ಹೊಡೆದ ಕಾಯಿಂದ ಒಂದೇ ಚಿಪ್ಪು ಮಾತ್ರ ವಾಪಾಸ್ ಬಂತು. ಒಂದು ಅಲ್ಲೇ ಮಾಯಾ.... ತಟ್ಟೆಗೆ ಕಾಸು ಹಾಕೋಣ ಅಂದ್ಕೊಂಡಿದ್ದೆ, ವಾಪಾಸ್ ಒಳಗೆ ಹಾಕ್ಕೊಂಡೆ, ತಟ್ಟೆಗೆ ಹಾಕಲಿಲ್ಲ. ಪೂಜೆ ಆಯ್ತು, ದೇವಸ್ಥಾನದ ಹೊರಗೆ ನಿಂತ್ಕೊಂಡು ಹಂಗೆ ಒಂದು ವ್ಯೂ ನೋಡಿ, ಒಂದಷ್ಟು ಫೋಟೋಸ್ ಕ್ಲಿಕ್ ಮಾಡ್ಕೊಂಡು, ವಾಪಸ್ ಕೆಳಗೆ ಇಳ್ಯೋಕೆ ಶುರು. ಇಳಿಬೇಕಿದ್ರೆ, ಒಬ್ಬ ಹುಡುಗ ಬಂದ, ಅಣ್ಣ, ನನ್ನ ನಿನ್ನ ತಮ್ಮ ಅನ್ಕೋ, ಒಂದು ರುಪಾಯಿ ಕೊಡು, ಬುಕ್ ತಗೋಬೇಕು ಅಂದ. ಕೊಡೋದಿಲ್ಲ ಅಂತಾ ಹೇಳಿ ಕಳಿಸ್ದೆ. ಸ್ವಲ್ಪ ಕೆಳಗೆ ಹೋಗ್ತಿದ್ದಂಗೆ ಹೊಟ್ಟೆ ಜ್ಞಾಪಕ ಬಂತು. ಅಮ್ಮ ಕೊಟ್ಟಿದ್ದ ಉಪ್ಪಿಟ್ಟು ಬಾಕ್ಸ್ ತೆಗೆದು ತಿನ್ನೋಕೆ ಶುರು ಮಾಡ್ಕೊಂಡೆ, ಮುಗಿದ್ಮೇಲೆ ಇನ್ನೂ ಹಸಿವು ಅನಿಸ್ತು. ಅಲ್ಲೇ ಒಬ್ಬ ಪುಳಿಯೋಗರೆ ಮಾರ್ಕೊಂಡು ಕೂತಿದ್ದ. ಹತ್ತು ರೂಪಾಯಿ ಕೊಟ್ಟು ಪುಳಿಯೋಗರೆ ತಗೊಂಡು ತಿಂದಮೇಲೆ ಸ್ವಲ್ಪ ಸಮಾಧಾನ. ಆಮೇಲೆ ಒಂದು ಎಳೆನೀರು ಕುಡಿದು, ಇನ್ನೊಂದಷ್ಟು ಫೋಟೋಸ್ ಕ್ಲಿಕ್ ಮಾಡಿ ಮುಂದೆ ಹೋದೆ. ಕೆಳಗೆ ಹೋಗ್ತಿದ್ದಂಗೆ ಮತ್ತೆ ಅದೇ ರೀತಿ, ಒಬ್ಬ ಬಂದ,

ಅಣ್ಣ ಕಾಯಿ ಕೊಡು.

ಯಾಕೋ ಕಾಸು ಬೇಡ್ವ??

ಇಲ್ಲ ಅಣ್ಣ ಸಾಂಬಾರ್ ಮಾಡೋಕೆ ಕಾಯಿ ಬೇಕು, ಕಾಸು ಬೇಡ...

ಸರಿ ತಗೋ ಅಂತಾ ಇದ್ದ ಒಂದೇ ಚಿಪ್ಪು ತೆಂಗಿನಕಾಯಿ ಕೊಟ್ಬಿಟ್ಟೆ. ಸುತ್ತ ಎರಡು-ಮೂರು ಮಕ್ಳು ಬಂದು ನಂಗೆ-ನಂಗೆ ಅಂತಿದ್ರು. ಬಾಳೆಹಣ್ಣು ಅಷ್ಟೇ ಇರೋದು ಅಂತಾ ಹೇಳಿ, ಅದನ್ನು ಕೊಟ್ಟು, ನಾನು ತಿಂದು ಮುಂದೆ ಹೋದೆ. ಹೋಗ್ತಾ ದಾರೀಲಿ ಕೂತಿದ್ದ ವಯಸ್ಸಾದವರನ್ನ ನೋಡಿ ಯಾಕೋ ಒಂಥರಾ ಅನಿಸ್ತು, ಇದ್ದ ಐದಾರು ಮಂದಿಗೆ ಒಂದೊಂದು ರೂಪಾಯಿ ಕೊಟ್ಟು ಹೊರಗೆ ಬಂದೇ. ಆಮೇಲೆ ಅನಿಸ್ತು, ಬಹುಷಃ ಅದೇ ಕಾರಣಕ್ಕೆ ಅನ್ಸುತ್ತೆ ದೇವ್ರು ನನ್ನ ಕೈಲಿ ಕಾಯಿ-ಹಣ್ಣು ತಗೊಳ್ಳೋ ಹಾಗೆ ಮಾಡಿದ್ದು ಮತ್ತೆ ತಟ್ಟೆಗೆ ಕಾಸು ಹಾಕೋದು ಬೇಡ ಅಂತಾ ಅನ್ಸೋ ಹಾಗೆ ಮಾಡಿದ್ದು. ಒಟ್ನಲ್ಲಿ ಒಂದೆರಡು ಒಳ್ಳೆ ಕೆಲ್ಸ ಆಯ್ತು ಅಂತಾ ಮನಸ್ಸಿಗೆ ಖುಷಿ.

ಯೋಗಾನರಸಿಂಹ ದೇವರ ದರ್ಶನ ಅದ್ಮೇಲೆ, ಕಲ್ಯಾಣಿ ಕಡೆ ಹೊರಟೆ. ಅಲ್ಲಿ ಹೋಗ್ತಿದ್ದಂಗೆ ಯಾಕೋ ಅಲ್ಲಿ ಆದದ್ದೆಲ್ಲ ಯಾರ್ಗಾದ್ರು ಹೇಳ್ಬೇಕು ಅನಿಸ್ತು, ಫೋಟೋ ಕ್ಲಿಕ್ ಮಾಡ್ತಾ ಮಾಡ್ತಾ ಗೆಳತಿಗೆ ಫೋನ್ ಮಾಡ್ದೆ. ಮಾತಾಡ್ತಿದ್ದಂಗೆ ಒಂದು ಆಘಾತದ ವಿಷ್ಯ... ನಮ್ಮ ಕಂಪನಿ ಅಲ್ಲಿ ಕೆಲ್ಸ ಮಾಡ್ತಿದ್ದ ಸಹೋದ್ಯೋಗಿ ಒಬ್ರು ಸತ್ತು ಹೋದ್ರು!!!!!!!! ಅವ್ರಿಗೆ ಅಷ್ಟು ವಯಸ್ಸು ಏನು ಆಗಿರ್ಲಿಲ್ಲ. ಕಾರಣ ಕೇಳಿದ್ರೆ, ವೈದ್ಯರ ನಿರ್ಲಕ್ಷ್ಯ (be careful with doctors and hospitals). ಅದನ್ನು ಕೇಳಿ ನಂಗೆ ಏನು ಹೇಳ್ಬೇಕು ಅನಿಸ್ಲಿಲ್ಲ. ಸುಮ್ನೆ ಹಂಗೆ ಮಾತಾಡಿ ಫೋನ್ ಕಟ್ ಮಾಡಿದ್ದು ಆಯ್ತು.

ಕಲ್ಯಾಣಿಯ ಹತ್ರ ಫೋಟೋಸ್ ಅದ್ಮೇಲೆ, ಚೆಲುವ ನಾರಾಯಣನ ದರ್ಶನಕ್ಕೆ ನನ್ನ ಹೆಜ್ಜೆಗಳು. ಸುಮಾರು 3.30-4.00 ಗೆ ಬಾಗಿಲು ತೆಗ್ಯೋದು  ಅಂತಾ ಹೇಳ್ತಿದ್ರು, ಆಗ ಸಮಯ 2 - 2.30 ಆಗಿತ್ತು. ಹಾಗೆ ಸಿಕ್ಕಿದ ಜನರನ್ನ ಕೇಳ್ತಾ ಕೇಳ್ತಾ ಹೊರಟೆ. ಕವಿ ಪು. ತಿ. ನರಸಿಂಹಾಚಾರ್ ಅವರ ಮನೆ, ಅಕ್ಕ-ತಂಗಿ ಕೊಳ, ರಾಜಗೋಪುರ ಇವೆಲ್ಲ ನೋಡ್ಕೊಂಡು ಬಾರೋ ಹೊತ್ಗೆ 3.45 ಆಯ್ತು. ಬಾಗಿಲು ತೆಗೆದಿತ್ತು, ಚೆಲುವ ನಾರಾಯಣನ ಚೆಲುವನ್ನು ಕಣ್ತುಂಬ ನೋಡಿ ಬಸ್-ಸ್ಟ್ಯಾಂಡ್ ಗೆ ಹೊರಟೆ.

ನಾಲ್ಕು ಘಂಟೆಗೆ ಅಂತಾ ಇದ್ದ ಬಸ್, ನಾಲ್ಕು ಐದಕ್ಕೆ ಬಂತು. ಮಂಡ್ಯಕ್ಕೆ ಹೋಗೋ ಬಸ್ ಅದು, ಹತ್ಕೊಂಡು ಕೂತ್ಕೊಂಡೆ. ಕಾಲು ಘಂಟೆ ಅದ್ಮೇಲೆ 4.25 ಕ್ಕೆ ಬಸ್ ಅಲ್ಲಿಂದ ಹೊರಡ್ತು. ಒಬ್ಬ ಅಂಕಲ್ ಬಂದು ಕೂತ್ಕೊಂಡ್ರು...

ಅಣ್ಣ, ಯಾವೂರು?

ರಾಮನಗರ, ಮಂಡ್ಯಕ್ಕೆ ಹೋಗಿ ಹೋಗ್ತೀನಿ. (ಬಸ್ ಕೊನೆ ಸ್ಟಾಪ್ ಇರೋದೇ ಮಂಡ್ಯ, ರಾಮನಗರಕ್ಕೆ ಹೋಗು ಅಂದ್ರೆ ಹೋಗುತ್ತಾ?... )

ನಾನು ಬೆಂಗಳೂರಿಗೆ ಹೋಗ್ಬೇಕು, ಮಂಡ್ಯನೆ ಕೊನೆ ಸ್ಟಾಪ್... ;)

ಅಂತಾ ಹೇಳಿ ಸುಮ್ನಾದೆ.. ಅಣ್ಣ ಗರಂ ಆಗಿದ್ರು..ಹಾಗಾಗಿ ಏನು ಮಾತಿಲ್ಲ... ನಿದ್ದೆ ಕಡೆ ಮನಸ್ಸು ಜಾರಿತು... ದೇಹ ನಿದ್ದೆಗೆ ಜಾರಿತು...

ಐದು ಮೂವತ್ತೈದಕ್ಕೆ ಮಂಡ್ಯದಲ್ಲಿ ಇಲ್ಕೊಂಡು ನೋಡಿದ್ರೆ, ಬೆಂಗಳೂರಿಗೆ ಬಸ್ ನಿಂತಿತ್ತು. ಓಡಿಹೋಗಿ ಹತ್ಕೊಂಡು ಕೂತೆ. ಅಲ್ಲಿ ಕೂಡ ಏನು ವಿಶೇಷ ಇಲ್ಲ, ನಿದ್ದೆ ಅಷ್ಟೇ. ಮತ್ತೆ ಕಣ್ಣು ಬಿಟ್ಟಾಗ ಕೆಂಗೇರಿ. ಸುಮಾರು 8 ಘಂಟೆಗೆ ನಾಯಂಡಹಳ್ಳಿ ಸಿಗ್ನಲ್ ಕ್ರಾಸ್ ಮಾಡಿದ್ದು ಆಯ್ತು, ಆಮೇಲೆ ತಗ್ಲಾಕ್ಕೊಂಡೆ ಕಣ್ರೀ, ಒಬ್ಬ ಗೆಳೆಯನ ಕರೆ... ಆಯ್ತು ಒಂದು 20 ನಿಮಿಷ... ಅದೇ ಸಮಯದಲ್ಲಿ ಇನ್ನೊಬ್ಬ ಗೆಳಯನಿಗೆ ಫೋನ್ ಮಾಡಬೇಕಿದ್ದು ಜ್ಞಾಪಕ ಬಂತು. ಮಾತು ನಿಂತಮೇಲೆ, ಇನ್ನೊಬ್ಬ ಗೆಳೆಯನಿಗೆ ಫೋನ್ ಮಾಡ್ದೆ. ಹತ್ತು ನಿಮಿಷ ಆಗ್ತಿದ್ದಂಗೆ, ಗೆಳತಿಯ ಕರೆ. ಮತ್ತೆ ಮಾಡ್ತೀನಿ ಅಂತಾ ಹೇಳಿ ಫೋನ್ ಕಟ್ ಮಾಡಿ, ಗೆಳತಿಗೆ ಫೋನ್ ಮಾಡ್ದೆ. ಮಾತು ಮುಗ್ಯೋ ಹೊತ್ಗೆ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಬಂತು. ಟೈಮು 9 ಆಗಿತ್ತು. ಮತ್ತೆ ಮಾಡ್ತೀನಿ ಅಂತಾ ಹೇಳಿದ್ದ ಗೆಳಯನಿಗೆ ಫೋನ್ ಮಾಡಿ, ವಾಕಿಂಗ್ ಶುರು... ಮನೆ ಕಡೆಗೆ. ಆಟೋ ಹತ್ತಿದ್ರೆ 30 ರೂಪಾಯಿ ಜೊತೆಗೆ 9 ಘಂಟೆ ಆಗಿದ್ರಿಂದ ಇನ್ನೂ ಹೆಚ್ಚಿಗೆ ಕೊಡಬೇಕಿತ್ತು, ಮನೆ ಸೇರೋಕೆ ಟೈಮು 10-15 ನಿಮಿಷ. ಬಸ್ ಅಲ್ಲಿ ಹೋದ್ರೆ, ಆಶ್ರಮಕ್ಕೆ ಹೋಗಿ, ಅಲ್ಲಿಂದ ಬಸ್, ಆಟೋ ಅಥವಾ ನಡ್ಕೊಂಡು ಹೋಗ್ಬೇಕಿತ್ತು, ಇದಕ್ಕೆ ಕಡಿಮೆ ಅಂದ್ರು 30-40 ನಿಮಿಷ. ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಇಂದ ಮನೆ ಎರಡುವರೆ ಕಿ.ಮೀ., 9.05 ಕ್ಕೆ ಶುರು ಮಾಡ್ಕೊಂಡ ವಾಕಿಂಗ್ 9.24 ಮನೆ ಸೇರ್ಕೊಂಡೆ (ಟೈಮು 19 ನಿಮಿಷ).

ಬೆಳಿಗ್ಗೆ 8.15 ಕ್ಕೆ ಶುರು ಆದ ನನ್ನ ಪ್ರಯಾಣ ರಾತ್ರಿ 9.24 ಕ್ಕೆ ಮುಕ್ತಾಯ ಆಯ್ತು.... :)

ಹೆಚ್ಚಿನ ಮಾಹಿತಿ (Trip information)...

Bengaluru to Melkote
Direct bus Srinagar to MelKote - National Travels  (via Nelamangala, Kunigal, Yadiyur, Bellur cross, Nagamangala, Melukote)
start time morning     8.30 - 8.40
end time afternoon  12.45 - 1.00

Melkote to Bengaluru (Melkote to Mandya and Mandya to Bengaluru)
Melkote to Mandya - Mandya city bus
start time 4.10 - 4.20 PM
end time   5.30 - 5.40 PM

Mandya to Bengaluru - KSRTC
start time 5.40 - 5.45 PM
end time  8.00 - 9.00 - 10.00 PM (depending on traffic after reaching Bengaluru).

Saturday, September 1, 2012

ಐದು ವರ್ಷಗಳ ಹಿಂದೆ....


ಆ ದಿನ 10 ಘಂಟೆಗೆ ನಾನು ಇಂಟರ್ವ್ಯೂ ಇದ್ದ ಜಾಗಕ್ಕೆ ಹೋಗಬೇಕಿತ್ತು, ಸರಿಯಾದ ಟೈಮ್ ಗೆ ಮನಯಿಂದ ಹೊರಟ್ರು ಕೂಡ ಆಗ್ಲಿಲ್ಲ. ಹಿಂದಿನ ದಿನ, careernet ಇಂದ ಕಾಲ್ ಬಂದಿತ್ತು, ಇಂಟರ್ವ್ಯೂ ಕೂಡ ಫಿಕ್ಸ್ ಆಗಿತ್ತು, ಕಾಲ್ ಮಾಡಿದ ಹುಡುಗ ತುಂಬ ಚೆನ್ನಾಗಿ ಮಾತಾಡ್ತಾ ಇದ್ದ, ಅದನ್ನು ಕೇಳಿ ಖುಷಿ ಆಗ್ತಿತ್ತು. ಆ ಮಾತುಗಳನ್ನ ಕೇಳ್ತಿದ್ರೆ ಎಲ್ಲೋ ಅಂದು ಕಡೆ ಆಶಾವಾದ, ಕೊನೆಗೆ ಈ ಕಂಪನಿ ಅಲ್ಲಿ ಆದರು ನಾನು ಸೆಲೆಕ್ಟ್ ಆಗ್ತೀನಿ ಅಂತ. ನನ್ನ ಕೆಲವು ರೂಲ್ಸ್/ಅದು ಇದು... ನಂಗೆ ಸರಿ ಅನ್ಸಿದ್ರೂ ಬೇರೆ ಅವ್ರಿಗೆ ಸರಿ ಅನ್ನಿಸದ ನಿಯಮಗಳು... ಇದ್ರಿಂದ ನನ್ನ ಕ್ಲಾಸ್ ಅಲ್ಲಿ ಇದ್ದ ಎಂತ-ಎಂತ ಪುಣ್ಯಾತ್ಮರು ಕೂಡ ಯಾವ್ದೋ ಒಂದು ಕಂಪನಿ ಅಲ್ಲಿ ಕೆಲ್ಸ ಗಿಟ್ಟಿಸಿಕೊಂಡಿದ್ರು. ನಂಗೆ ಆ talent ಇರ್ಲಿಲ್ವೋ, ಇದ್ರೂ ಕೂಡ ಅದನ್ನ ಕಂಡು ಹಿಡಿಯೋ ಯೋಗ್ಯತೆ ಯಾರ್ಗೂ ಇರ್ಲಿಲ್ವೋ ಆ ದೇವರಿಗೆ ಗೊತ್ತು.

ಕಾಲೇಜ್ ಅಲ್ಲಿ ಕೆಲಸದ ವಿಷ್ಯ ಬಂದಾಗ, ಕಾಪಿ ಮಾಡಬಾರದು ಅನ್ಕೊಂಡಿದ್ದೆ, ಆದ್ರೆ ಕಾಪಿ ಮಾಡಿದ್ಮೇಲೆ ಒಂದು written test ಕ್ಲಿಯರ್ ಆಯ್ತು. ಫ್ರೆಂಡ್ಸ್ ಎಲ್ಲ ಹೇಳ್ತಿದ್ರು, ನೆಟ್ಟಗೆ ಡ್ರೆಸ್ ಮಾಡ್ಕೊಂಡು ಹೋಗು, first impression is best impression ಏನೇನೋ ಹೇಳ್ತಿದ್ರು. ಇದ್ದ ಕ್ಷಣದಲ್ಲೇ ಎಲ್ಲ ರೆಡಿ ಆಗಬೇಕು ಅಂದ್ರೆ ಹೇಗೆ ಸಾಧ್ಯ, ಆಗ್ಲಿಲ್ಲ. ಹೇಗಿದ್ನೋ ಹಾಗೆ ಹೋದೆ. ಅಲ್ಲಿಯವರೆಗೂ ಒಂದು written test ಆಗಿರ್ಲಿಲ್ಲ, ಹಾಗಾಗಿ ಒಂದು ಕಡೆ ಭಯ, ಮತ್ತೊಂದು ಕಡೆ ಖುಷಿ. ಒಳಗೆ ಹೋದೆ. ನನ್ನ ಇಂಟರ್ವ್ಯೂ ಮಾಡೋಕೆ ಇಬ್ರು ಕೂತಿದ್ರು, ಒಳ್ಳೇ personality, well dressed, ನಾನು ಇಲಿ ಮರಿ ತರ ಇದ್ದೆ. ಕಂಪನಿ ಯಾವ್ದು ಅಂತ ಕೇಳ್ತೀರಾ??? ಬೇಡ ಬಿಡಿ. ಒಂದು ದೊಡ್ಡ ಫೈನಾನ್ಸ್ ಮ್ಯಾನೇಜ್ಮೆಂಟ್ ಕಂಪನಿ ಅಂತ ಮಾತ್ರ ಹೇಳಬಲ್ಲೆ. ಅವ್ರು ಏನ್ ಕೇಳಿದ್ರು, ನಾ ಏನ್ ಹೇಳ್ದೆ ಯಾವುದು ಜ್ಞಾಪಕ ಇಲ್ಲಾ. ಆದ್ರೆ ಇಂಟರ್ವ್ಯೂ ಮುಗಿದ್ಮೇಲೆ ಇಬ್ರಲ್ಲಿ ಒಬ್ಬರು ಬಂದು, ನನ್ನ ಭುಜದ ಮೇಲೆ ಕೈ ಹಾಕಿ "you are a funny guy, i liked you, you are selected for next round, wait outside" ಅಂತ ಹೇಳಿದಾಗ. ಆಹ್!!!! ಎಂತ ಖುಷಿ. ಕಾಯ್ತಾ ಕೂತಿದ್ದೆ, ನನ್ನದು first round ಮಾತ್ರ ಆಗಿತ್ತು, ನನ್ನ ಬೇರೆ ಕೆಲವು ಫ್ರೆಂಡ್ಸ್ ದು 2nd and 3rd round ಕೂಡ ಆಗಿತ್ತು. ಎಲ್ಲ ಕಾಯ್ತಾ ಇದ್ವಿ, ಯಾರೊಬ್ರು ಕೂಡ ಸೆಲೆಕ್ಟ್ ಆಗ್ಲಿಲ್ಲ. ಕೊನೆಗೆ ನನ್ನ ಭುಜದ ಮೇಲೆ ಕೈ ಹಾಕಿ, ಆ ಮಾತು ಹೇಳಿದ ಆ ವ್ಯಕ್ತಿ ನನ್ನ ಹತ್ರ ಬಂದು, "sorry buddy, due to some resons interviews stopped, i can't help" ಅಂತ ಹೇಳಿ ಹೋಗ್ಬಿಟ್ರು. ಆಕಾಶ ತಲೆಮೇಲೆ ಬಿದ್ದಂಗೆ ಆಯ್ತು, ಆದ್ರೆ ಬೇರೆ ದಾರಿ ಇಲ್ಲಾ, ಥ್ಯಾಂಕ್ಸ್ ಹೇಳ್ದೆ ಅಷ್ಟೇ. ನಂಗೆ "all the best" ಹೇಳಿ ಅವ್ರು ಹೊರ್ತ್ಬಿಟ್ರು. ಇದು ಆದ್ಮೇಲೆ ಇನ್ನು ಒಂದೆರಡು ಮೂರು ನಾಲ್ಕು ಇಂಟರ್ವ್ಯೂ ಆಯ್ತು, ಯಾವ್ದರಲ್ಲಿ ಕೂಡ ಸೆಲೆಕ್ಟ್ ಆಗ್ಲಿಲ್ಲ. ಒಂದಂತೂ ತುಂಬ ಕೆಟ್ಟ ಅನುಭವ, ಇದ್ದ ಇಬ್ಬರಲ್ಲಿ ಒಬ್ಬನಿಗೆ ಹೊಡೆದು ಬರ್ಬೇಕಿತ್ತು, ಕಂಟ್ರೋಲ್ ಮಾಡ್ಕೊಂಡು ಎದ್ದು ಬಂದೆ.

ಇದೆಲ್ಲ ಹಳೆ ಕಥೆ, ಇಷ್ಟೆಲ್ಲಾ ಕಥೆ ಇದ್ದಿದ್ದರಿಂದ ಆ ಒಂದು ಕರೆ ನಂಗೆ ತುಂಬ ಖುಷಿ ಕೊಡ್ತು, ಇನ್ನು ಎಲ್ಲೋ ಒಂದು ಕಡೆ ಚಾನ್ಸ್ ಇದೇ ಅಂತ ಹೇಳಿದಂಗೆ ಅನ್ನಿಸ್ತು. ಐದು ವರ್ಷಗಳ ಹಿಂದೆ ಇದೇ ದಿನ, ಸೆಪ್ಟೆಂಬರ್ ೦೧ ೨೦೦೭, ಶನಿವಾರ ಬೆಳ್ಗೆ ಎದ್ದು, ರೆಡಿ ಆಗಿ ಹೊರಟೇಬಿಟ್ಟೆ. ಮನೆ ಇಂದ ಮಜೆಸ್ಟಿಕ್, ಮಜೆಸ್ಟಿಕ್ ಇಂದ ನಾಗನಾಥಪುರ ಹೋಗೋದು ಅಂತ ಪ್ಲಾನ್ ಮಾಡಿ, ನಮ್ಮ  BMTC ಯ dialy pass  ತಗೊಂಡು ಹೊರಟೆ. ಮೊದ್ಲೇ ಹೇಳಿದಂತೆ, 10 ಘಂಟೆಗೆ reach ಆಗೋಕೆ ಆಗ್ಲಿಲ್ಲ. ಹೊಸರೋಡ್ ಅಲ್ಲಿ ಇಳ್ಕೊಂಡಾಗ ೧೦.೧೫ ಆಗಿತ್ತು, ಆಟೋ ಹತ್ತೋಕೆ ಹಿಂದು-ಮುಂದು ನೋಡೋ ನಾನು, ಇಲ್ಲದ ಮನಸ್ಸಿನಿಂದ ಅಲ್ಲೇ ಹೋಗ್ತಿದ್ದ ಒಂದು ಆಟೋಗೆ ಕೈ ತೋರಿಸ್ದೆ, minimum ಅಂತ ಹೇಳಿದ ಆಟೋ ಡ್ರೈವರ್ ಜೊತೆ ಚೌಕಾಸಿ ಮಾಡಿ ೧೦ ರೂಪಾಯಿಗೆ ಒಪ್ಪಿಸಿದ್ದು ಆಯ್ತು. ಅದೇನೋ ಗೊತ್ತಿಲ್ಲ್ಲ ಅವನ ಮುಖದಲ್ಲಿ ಒಂದು ವಿಶೇಷ ನಗು ಕಾಣಿಸ್ತು.

ಏನ್ ಸಾರ್, ಇಂಟರ್ವ್ಯೂ?

ಹೌದು...

ಬೆಳ್ಗೆ ಇಂದ ಬೇಜಾನ್ ಹೋಗ್ತಿದಾರೆ ಸಾರ್...

ಒಹ್ ಹೌದ.. ತುಂಬ ಇದಾರ????

ಏನಿದ್ರೆ ಏನು ವಿಶೇಷ ಇಲ್ಲ ಸರ್, ಆಗೋದಿದ್ರೆ ಎಲ್ಲ ಒಳ್ಳೆದಾಗುತ್ತೆ ಹೋಗಿ ಸಾರ್....

ಹ. ಅದು ನಿಜ ಅನ್ನಿ...

ಒಳ್ಳೇದಾಗ್ಲಿ ಸಾರ್, ಇಂಟರ್ವ್ಯೂ ಚೆನ್ನಾಗಿ ಮಾಡಿ....

ಥ್ಯಾಂಕ್ಸ್ ಸರ್....

ಆಟೋ ಇಳ್ಕೊಂಡು ಸ್ವಲ್ಪ ಮುಂದೆ ಹೋಗಿ ನೋಡಿದ್ರೆ, ಇದೇನಾ ಆಫೀಸ್ ಅಂತ ಅನಿಸ್ತು. ಅಲ್ಲೇ ಗೇಟ್ ಹತ್ರ ನಿಂತಿದ್ದ ಸೆಕ್ಯೂರಿಟಿ, ಕಾಲ್ ಲೆಟರ್ ಚೆಕ್ ಮಾಡಿದ್ರು, ಮತ್ತೆ ಅಲ್ಲಿ ಕೂಡ ಒಂದು ನಗೆ. ಇವರನ್ನೆಲ್ಲ ಮರೆಯೋ ಹಾಗಿಲ್ಲ. ಅದ್ಕೆ ಎಲ್ಲರ ಬಗ್ಗೆ ಸ್ವಲ್ಪ ಸ್ವಲ್ಪ ಹೇಳ್ತಾ ಇದ್ದೇನಿ. ಈ ಎಲ್ಲರಿಗೂ ಧನ್ಯವಾದಗಳು.

ಒಳಗೆ ಹೋಗ್ತಿದ್ದಂಗೆ, ಕೈ-ಕಾಲು ನಡುಕ ಶುರು ಆಯ್ತು, ಎಷ್ಟೊಂದು ಜನ, ಇಷ್ಟು ಜನರಲ್ಲಿ ನಾನು ಒಬ್ಬ. ನಂಗೆ ಇಲ್ಲಿ ಖಂಡಿತ ಕೆಲ್ಸ ಸಿಗುತ್ತಾ? ಅಲ್ಲಿ ಬಂದಿದ್ದ ಎಲ್ಲರ ಜೊತೆಗೂ ಮತ್ತೊಬ್ರು ಇದ್ರು. ಅಲ್ಲಿಗೆ ಬರೋವಾಗ್ಲೆ ಒಟ್ಟಿಗೆ ಬಂದಿದ್ರಾ, ಅಲ್ಲಿ ಬಂದು ಮೀಟ್ ಆಗಿದ್ದ ನಂಗೆ ಗೊತ್ತಿಲ್ಲ. ನಾನು ಒಬ್ನೇ, ಮಾತು ಕಡಿಮೆ, ಹಾಗಾಗಿ ಒಂದು ಕಡೆ ಸುಮ್ನೆ ಕೂತಿದ್ದೆ. ಒಳಗೆ ಹೋಗಿ, entry ಮಾಡ್ಸಿ, ಹೀಗಿ ಕೂತಿರ್ಬೇಕಿದ್ರೆ, ನನ್ನ ಕ್ಲಾಸ್ ನ ಮತ್ತೊಬ್ಬ ಅಲ್ಲಿ ಕಾಣಿಸ್ದ. ಅವನ ಲೆವೆಲ್ ಬೇರೆ, ನನ್ನ ಲೆವೆಲ್ ಬೇರೆ. ಹಾಗಾಗಿ hi-bye ಅಲ್ಲಿ ನಮ್ಮ ಭೇಟಿ ಮುಗಿತು, ಮತ್ತೆ ಒಬ್ಬನೇ. ಅಲ್ಲಿ ಬಂದಿದ್ದ ಸುಮಾರು ಹುಡುಗರೆಲ್ಲ ನೀಟಾಗಿ ಡ್ರೆಸ್ ಮಾಡ್ಕೊಂಡು, ಟೈ ಹಾಕ್ಕೊಂಡು ಬಂದಿದ್ರು. ಆದ್ರೆ ನಾನು, ಸುಮಾರಾಗಿದ್ದ ಒಂದು ಶರ್ಟ್, ಪ್ಯಾಂಟ್ ಮ್ಯಾಚ್ ಅಗ್ತಿತ್ತೋ ಇಲ್ವೋ ಗೊತ್ತಿಲ್ಲ, ಶರ್ಟ್ ಮೇಲೆ ಸ್ವೆಟರ್, ಹಳೆಯ ಸ್ಪೋರ್ಟ್ ಶೂ, ತಲೆ ಬಾಚೋಕೆ ಕೂದಲು ಇರ್ಲಿಲ್ಲ, ಆಗ ಸ್ವಲ್ಪ ದಿನದ ಹಿಂದೆ ಯಾವ್ದೋ ದೇವರಿಗೆ ಹೋಗಿ ತಲೆ (ಮುಡಿ) ಕೊಟ್ಟು ಬಂದಿದ್ದೆ. ಇಷ್ಟೆಲ್ಲಾ ಸುಂದರ ಲಕ್ಷಣಗಳು ನನ್ನಲ್ಲಿ ಇರ್ಬೇಕಿದ್ರೆ, "first impression is the best impression" ಆಗೋಕೆ ಚಾನ್ಸ್ ಇರಲೇ ಇಲ್ಲ. ಅಷ್ಟೆಲ್ಲ ಜನರನ್ನ ನೋಡಿದ್ಮೇಲೆ ನಂಗೆ ನಂಬಿಕೆ ಹೋಯ್ತು, ಹೆಂಗಿದ್ರು ಬಂದಿದ್ದೀನಿ ಅಲ್ವಾ, ಇಂಟರ್ವ್ಯೂ attend ಮಾಡಿ ಹೋಗೋಣ ಅಂತ ಯೋಚನೆ ಮಾಡಿ, ಅಲ್ಲೇ ಉಳ್ಕೊಂಡೆ. ಸುಮಾರು ೨ ಘಂಟೆ ಹೊತ್ಗೆ, ನನ್ನ ಇಂಟರ್ವ್ಯೂ ಗೆ ಕಾಲ್ ಮಾಡಿದ್ರು. ಹೋಗಿ ಒಳಗೆ ಕೂತ್ಕೊಂಡ್ರೆ, ಮನಸಿನ ಎಲ್ಲೋ ಒಂದು ಮೂಲೇಲಿ ಇವತ್ತು ಎಲ್ಲ ಒಳ್ಳೆದಾಗುತ್ತೆ ಅಂತ ಹೇಳಿದಂತೆ ಆಗ್ತಿತ್ತು. ಮೊದಲೇ ಹೇಳಿದ ಒಂದು ಸುಂದರ ಇಂಟರ್ವ್ಯೂ ಅನುಭವದಂತೆ, ನನ್ನ ಎದುರಿನ ವ್ಯಕ್ತಿ ನೋಡಿದಾಗ ಏನೋ ಒಂತರ ಖುಷಿ. ಇಂಟರ್ವ್ಯೂ ಮುಗಿತು ಮತ್ತದೇ ಗೊಂದಲ. ಇಷ್ಟೊಂದು ಜನ, ಅದರಲ್ಲಿ ನಾನು ಒಬ್ಬ... ಸರಿ ರಿಸಲ್ಟ್ ಗೆ ಕಾಯ್ತಾ ಇದ್ದೆ. ಅಲ್ಲಿ ಇಂಟರ್ವ್ಯೂ ನೋಡ್ಕೊತಿದ್ದ, careernet ನ ಒಬ್ಬ ವ್ಯಕ್ತಿ ಬಂದು ಸ್ವಲ್ಪ ಧೈರ್ಯ ಹೇಳ್ದ, "ಯೋಚನೆ ಮಾಡಬೇಡ ಒಳ್ಳೆದಾಗುತ್ತೆ". ಅದೇ ಸಮಯಕ್ಕೆ ಇನ್ನೊಬ್ಳು ಹುಡುಗಿ, ಅವ್ಳು ಯಾರು ಏನು ಗೊತ್ತಿರ್ಲಿಲ್ಲ. ಸ್ವಲ್ಪ ಮಾತು ಕಥೆ ಆಯ್ತು, ಯಾವ ಕಾಲೇಜ್ ಏನು ಎತ್ತ ಎಲ್ಲ ವಿಚಾರ ವಿನಿಮಯ ಅದ್ಮೇಲೆ ಹೇಳ್ದೆ,

ನಂಗೆ ಇಲ್ಲಿ ಯಾಕೋ ನಂಬಿಕೆ ಇಲ್ಲ, ಎಷ್ಟೊಂದು ಜನ ಇದ್ದಾರೆ. BEL  ಅಲ್ಲಿ ಇನ್ನೊಂದು ಇಂಟರ್ವ್ಯೂ ಇದೆ ಹೋಗ್ಬಿಡ್ತೀನಿ.
(ನಾಗನಾಥಪುರ - BEL , ಸುಮಾರು ೫೦ ಕಿ.ಮೀ.)

ಇಲ್ಲಿಂದ ಅಲ್ಲಿಗೆ ಹೋಗೋದು ಕಷ್ಟ. ಇಲ್ಲೇ ಏನಾಗುತ್ತೋ ನೋಡು. ಆಮೇಲೆ ಇಲ್ಲಿ  ಇಲ್ಲ, ಅಲ್ಲಿ ಇಲ್ಲ ಅನ್ನೋ ಹಾಗೆ ಆಗುತ್ತೆ. ಇಲ್ಲಿ ಹೇಗೂ ಬಂದಿದ್ದು ಆಗಿದೆ, ಇಂಟರ್ವ್ಯೂ ಕೂಡ ಆಯ್ತು. ಸ್ವಲ್ಪ ಕಾದು ನೋಡು. ಎಲ್ಲ ಒಳ್ಳೆದಾಗುತ್ತೆ.

ಕಾದೆ, ಸ್ವಲ್ಪ ಹೊತ್ತು ಕಾದೆ. careernet ನ ಅದೇ ವ್ಯಕ್ತಿ ಮತ್ತೆ ಬಂದು, ಅಲ್ಲಿ ಇನ್ನೊಂದು ರೂಂ ಇದೆ, ಅಲ್ಲಿ ಹೋಗಿ ಮತ್ತೊಂದು ರೌಂಡ್ ಇಂಟರ್ವ್ಯೂ. ಖುಷಿ. ಹೋದೆ, ಅದು HR ಇಂಟರ್ವ್ಯೂ ಆಗಿತ್ತು, ಮತ್ತೆ ಭಯ. ಮೊದಲ್ನೇ ಸಲ HR ಇಂಟರ್ವ್ಯೂ ಗೆ ಹೋಗಿದ್ದು, ಅವ್ರು ಏನೋ ಪ್ರಶ್ನೆಗಳು ಕೇಳಿದ್ರು. ಹೇಳ್ದೆ ಬಂದೆ. ಮತ್ತೆ careernetನ ಅದೇ ವ್ಯಕ್ತಿ,

ನೀವು ಮನೆಗೆ ಹೋಗಬಹುದು, ರಿಸಲ್ಟ್ ಕಾಲ್ ಮಾಡಿ ಹೇಳ್ತೀವಿ.

ಅಂತ ಹೇಳಿದ್ರು. ಹೊರಟೆ ಅಲ್ಲಿಂದ. ಮತ್ತದೇ ಒಂಟಿ ಪಯಣ. ಈ ಸಲ ಆಟೋ ಹತ್ಲಿಲ್ಲ. ಸುಮಾರು ೧-೧.೫ ಕಿ.ಮೀ. ನಡೆದು ಬಂದು, ಬಸ್ ಹತ್ತಿ ಮನೆಗೆ ಹೊರಟೆ. ಅಮ್ಮನ  ಮುಖದಲ್ಲಿ ಏನೋ ಒಂದು ಖುಷಿ, ಏನೋ ಒಂದು ಅಸಮಾಧಾನ ("ಅಯ್ಯೋ!!! ಪಾಪ ಇವತ್ತು ಆಗ್ಲಿಲ್ವಾ, ಯಾಕೆ ಇವನಿಗೆ ಹಿಂಗೆ ಆಗ್ತಿದೆ"). ಅಂದಿನ ಈ ದಿನ ಮುಗಿತು.

ಸೆಪ್ಟೆಂಬರ್ ೨ ೨೦೦೭, ಅಷ್ಟು ಏನು ವಿಶೇಷ ಇರ್ಲಿಲ್ಲ. ಎಲ್ಲಾ ಭಾನುವಾರಗಳ ತರಹ ಅದು ಒಂದು ಸಾಧಾರಣ ಭಾನುವಾರ.

ಸೆಪ್ಟೆಂಬರ್ ೩ ೨೦೦೭, ಪ್ರತಿದಿನ ಹೇಗೆ ಸಾಗ್ತಿತ್ತೋ ಅದೇ ರೀತಿ. ಏನು ವಿಶೇಷ ಇಲ್ಲ. ಸಂಜೆ ಗಾಂಧೀಬಜಾರ್ ಗೆ ಹೋಗಿದ್ದೆ, ಏನೋ ಕೆಲಸದ ಮೇಲೆ. ಒಂದು ಕರೆ ಬಂತು,

"you have been selected. I will send you the offer letter and details.
Please follow the details/instruction. Your joining date is september 5th."

ಇದು ಆ ಕರೆಯ ಸಾರಾಂಶ. ಕಣ್ಣಲ್ಲಿ ನೀರು ತಾನಾಗಿ ಬರ್ತಿತ್ತು. ಏನು ಮಾಡಬೇಕು ಗೊತಾಗ್ತಿಲ್ಲ. ಖುಷಿ ಹೇಳೋಕೆ ಜೊತೆಗೆ ಯಾರಿಲ್ಲ. ಮನೆಗೆ ಹೋಗೋಕೆ ಇನ್ನು ೫-೧೦ ನಿಮಿಷ ಆಗುತ್ತೆ. ಅಮ್ಮನಿಗೆ ಆ ವಿಷ್ಯ ಹೇಳೋಕೆ ನನ್ನಿಂದ ಆಗೋಲ್ಲ. ನನ್ನ ಫ್ರೆಂಡ್ ಒಬ್ಳಿಗೆ ಕಾಲ್ ಮಾಡಿ, ಮಾತಾಡ್ತಾ ಮಾತಾಡ್ತಾ ಮನೆಗೆ ಹೋದೆ, ಅಮ್ಮ ಗೆ ಫೋನ್ ಕೊಟ್ಟು ಸುಮ್ನಾದೆ. ಅವಳು ಅಮ್ಮನಿಗೆ ಆ ವಿಷ್ಯ ಹೇಳ್ತಿದ್ದಂಗೆ ಅಮ್ಮನ ಮುಖದಲ್ಲಿ...................................................................................................

ಎಲ್ಲ ಮರೆಯಲಾಗದ ನೆನಪುಗಳು.....

ಬಸ್ conductor
ಆಟೋ ಡ್ರೈವರ್
ಸೆಕ್ಯೂರಿಟಿ gaurd
careernetನ ಆ ವ್ಯಕ್ತಿ
ನನ್ನ ಇಂಟರ್ವ್ಯೂ ಮಾಡಿದವರು
ಅಲ್ಲಿ ಪರಿಚಯವಾದ ಹೊಸ ಗೆಳತಿ

ಎಲ್ಲರಿಗೂ ಧನ್ಯವಾದಗಳು.....

ಕಾಲೇಜ್ ಅಲ್ಲಿ ಸೆಲೆಕ್ಟ್ ಆಗಿದ್ದ ಜಾಸ್ತಿ ಜನರು, ಕಂಪನಿ ಸೇರೋಕೆ ಮೊದಲೇ ನಾನು ಸೇರ್ಕೊಂಡೆ. ಹೆಚ್ಚು ಕಾಯಲಿಲ್ಲ, ಎಲ್ಲ procedures ೪-೫ ದಿನಗಳಲ್ಲಿ ಆಗೋಯ್ತು. ಸೆಪ್ಟೆಂಬರ್ ೫ ೨೦೦೭, ವಿಶೇಷ ಏನಂದ್ರೆ ಹೊಸ ಪರಿಚಯದ ಗೆಳತಿ ಕೂಡ ಅಲ್ಲೇ ಇದ್ಲು. ಅಲ್ಲಿಂದ ಶುರು ಆದ ಪಯಣ ಇನ್ನು ನಡಿತಾ ಇದೆ....

Friday, August 17, 2012

ಪ್ರಾಣಿಗಳಿಗೆ ಬುದ್ಧಿ ಇಲ್ವಾ????


ಸಾಮಾನ್ಯವಾಗಿ ಯಾರದ್ರು ಮನುಷ್ಯ ಏನಾದ್ರು ತಪ್ಪು ಮಾಡಿದ್ರೆ (ತಿಳಿದೋ ಅಥವಾ ತಿಳಿಯದೆಯೋ ಅದು ಅನವಶ್ಯಕ ನಮ್ಮ ಜನಕ್ಕೆ.), ಆಡುವ ಮಾತಿನಲ್ಲಿ ವ್ಯತ್ಯಾಸ ಆದ್ರೆ ಇನ್ನು ಕೆಲವು ಸಂದರ್ಭಗಳಲ್ಲಿ, ಸುತ್ತ ಇರೋ ಜನ ಏನ್ ಅಂತಾರೆ????

ಯಾಕೆ ಹಿಂಗೆ ಆಡ್ತಿದ್ದೀಯಾ?
ಯಾಕೆ ಹಿಂಗೆ ಮಾಡ್ತಿದ್ದೀಯಾ?
ಯಾಕೆ ಹಿಂಗೆ ತಲೆಲಿ ಬುದ್ಧಿ ಇಲ್ಲದವನ ರೀತಿ ಆಡ್ತೀಯ?
ನಿಂಗು ಆ ಪ್ರಾಣಿಗೂ (ನಾಯಿ, ಕೋತಿ, ದನ, ಹಂದಿ ಇತ್ಯಾದಿ ಯಾವ್ದಾದ್ರು ಆಗಿರಬಹುದು) ಏನು ವ್ಯತ್ಯಾಸ ಇಲ್ಲ. ಎರಡು ಒಂದೇ.....

ಈ ರೀತಿ ಕೇಳಿರೋದು ಸಾಮಾನ್ಯ ಅಲ್ವಾ????
ಆದರೆ ಮನುಷ್ಯನ್ನ ಒಂದು ಪ್ರಾಣಿಗೆ ಹೋಲಿಸೋದು ಎಷ್ಟು ಸರಿ????
ಯಾಕಂದ್ರೆ, ಸೃಷ್ಟಿಕರ್ತ ಎಲ್ಲಾ ಜೀವಗಳಿಗೂ ಒಂದೇ ಮಟ್ಟದ ಜ್ಞಾನ ಕೊಟ್ಟಿದ್ದಾನೆ ಅನ್ನೋದು ನನ್ನ ಅಭಿಪ್ರಾಯ...

ಕೆಲವು ಉದಾಹರಣೆಗಳು...
ಸಣ್ಣ ಪ್ರಾಣಿ/ಕೀಟ ಜಾತಿಗೆ ಸೇರಿದ್ದು, ಇರುವೆ. ಇರುವೆಯನ್ನ ಉದಾಹರಣೆಯಾಗಿ ಹೇಳೋದಾದ್ರೆ...

ಅದಕ್ಕೆ ಯಾರು ಹೋಗಿ ಹೇಳ್ತಾರೆ, ತನ್ನ ಗೂಡು (ಹುತ್ತ)ವನ್ನ ಹೀಗೆ ಕಟ್ಬೇಕು ಅಂತ?
ಯಾವ ರೀತಿಯ ಆಹಾರ/ಕಾಳು ಶೇಖರಣೆ ಮಾಡ್ಕೊಬೇಕು ಅಂತ???

ನೀವು ಗಮನಿಸಿರ್ತೀರ ಅನ್ಸುತ್ತೆ, ಮನೆಯ ಕಿಟಕಿ-ಬಾಗಿಲುಗಳ ಅಂಚಿನಲ್ಲಿ, ಗೋಡೆಯ ಮೂಲೆಯಲ್ಲಿ, ಎಷ್ಟು ಆಗುತ್ತೋ ಅಷ್ಟು ನೆಲಕ್ಕೆ ಸಮೀಪ, ಆದರೆ ಕಣ್ಣಿಗೆ ಕಾಣದಷ್ಟು ಒಳಗೆ, ತಮ್ಮ ಗೂಡು ಮಾಡಿರ್ತಾವೆ. ಸಾಮಾನ್ಯವಾಗಿ ಯೋಚನೆ ಮಾಡಿದ್ರೆ.. ಎಲ್ಲೋ ಜಾಗ ಇತ್ತು.. ಗೂಡು ಮಾಡ್ಕೊಂದಿದಾವೆ ಅನ್ಸುತ್ತೆ, ಆ ಗೂಡಿನ ಕಡೆ ಸ್ವಲ್ಪ ಜಾಸ್ತಿ ಗಮನ ಕೊಟ್ರೆ ನಿಮಗೆ ಗೊತ್ತಾಗುತ್ತೆ, ಆ ಜಾಗಕ್ಕೆ, ಬಿಸಿಲು-ಮಳೆ-ಗಾಳಿ ಯಾವುದೇ ತೊಂದ್ರೆ ಆಗೋದಿಲ್ಲ ಅಂತ.

ಇರುವೆಗಳ ಊಟ/ತಿಂಡಿ/ಆಹಾರದ ವಿಷ್ಯ ಅಂತ ಹೇಳೋದಾದ್ರೆ, ನೀವು ಅನ್ನ ಇಟ್ಟಿರಿ, ಮುದ್ದೆ ಇಟ್ಟಿರಿ, ಹೋಳಿಗೆ ಇಟ್ಟಿರಿ, ಈ ತಿಂಡಿಗಳು ಇರೋ ಜಾಗದಲ್ಲೇ ಖಾಲಿ ಆಗುತ್ತೆಯೇ ಹೊರತು, ಇವು ಯಾವು ಇರುವೆಗಳ ಗೂಡು ಸೇರೋಲ್ಲ. ಇರುವೆಗಳು ಗೂಡಿಗೆ ಹೊತ್ಕೊಂಡು ಹೋಗೋದು ಏನಿದ್ರು, ಸಕ್ಕರೆ, ಕಾಳುಗಳು, ಇತ್ಯಾದಿ ಗಟ್ಟಿ/ಘನ ಪದಾರ್ಥಗಳನ್ನ ಮಾತ್ರ...

ಇರುವೆಯ ಬಗ್ಗೆ, ಚಿಕ್ಕದಾಗಿ ಇಷ್ಟು ಹೇಳಬಹುದು ಅಂದ್ರೆ.. ಆನೆ ಬಗ್ಗೆ ಏನೆಲ್ಲಾ ಹೇಳಬಹುದು???

ಒಂದು ತಾಯಿ ಆನೆ, ತನ್ನ ಮರಿ ಆನೆಯನ್ನ ಎಷ್ಟು ಹುಷಾರಾಗಿ ನೋಡ್ಕೊಳುತ್ತೆ ಅಂದ್ರೆ, ಒಬ್ಬ ತಾಯಿ ತನ್ನ ಮಗುವನ್ನ ಆರೈಕೆ ಮಾಡೋ ರೀತಿ..

ಎಲ್ಲೋ ಕೇಳಿದ ಒಂದು ನೆನಪು - ಬಂಡೀಪುರದ ಹತ್ರ ಒಂದು ಮರಿ ಆನೆ ರಸ್ತೆ ದಾಟುತ್ತಿದ್ದಾಗ ಒಂದು ಕೆಂಪು ಬಣ್ಣದ ಕಾರು, ಜೋರಾಗಿ ಶಬ್ದ (ಹಾರ್ನ್ ) ಮಾಡಿದೆ, ಅದರಿಂದ ಗಾಬರಿಗೊಂಡ ಮರಿ ಆನೆ ತನ್ನ ತಾಯಿ ಆನೆಯ ಬಳಿ ಓಡಿದೆ. ಇದನ್ನು ಗಮನಿಸಿದ ತಾಯಿ ಆನೆ, ಆ ರಸ್ತೆಯಲ್ಲಿ ಯಾವುದೇ ಕೆಂಪು ಬಣ್ಣದ ಕಾರು ಕಂಡರೂ ಅದಕ್ಕೆ ತೊಂದ್ರೆ ಕೊಡೋಕೆ ಹೋಗ್ತಿತ್ತಂತೆ.

ಕೆಂಪು ಬಣ್ಣದ ಕಾರಿಗೆ ಯಾಕೆ ತೊಂದ್ರೆ ಮಾಡೋಕೆ ಹೋಗ್ತಿತ್ತು?
ಬೇರೆ ಬಣ್ಣದ ಕಾರುಗಳಿಗೆ ಯಾಕೆ ತೊಂದ್ರೆ ಮಾಡ್ತಿರ್ಲಿಲ್ಲ??
ತನ್ನ ಮಗುವಿನ ಬಗ್ಗೆ ಅದಕ್ಕೆ ಅಷ್ಟು ಪ್ರೀತಿ/ಕಾಳಜಿ ಇದೆಯಾ?
ಹೀಗೆ ಮುಂದೆ ಹೋಗ್ತಾ ಇರುತ್ತೆ, ಪ್ರಶ್ನೆಗಳ ಸಾಲು...

ಒಂದು ರೀತಿಯಲ್ಲಿ ನೋಡೋದಾದ್ರೆ ಹೆಚ್ಚು-ಕಡ್ಮೆ ಎಲ್ಲ ಪ್ರಾಣಿಗಳು ತಮ್ಮ ಮರಿಗಳ ಬಗ್ಗೆ ಇದೆ ರೀತಿಯ ಕಾಳಜಿ/ಪ್ರೀತಿ ತೋರಿಸ್ತಾವೆ, ರಕ್ಷಣೆ ಕೊಡ್ತಾವೆ.

ಕೋತಿ ನೋಡಿದ್ರೆ ತನ್ನ ಮರಿಯನ್ನ ಹೊಟ್ಟೆಗೆ ಅಂಟಿಸಿಕೊಂಡಿರುತ್ತೆ....

ಇನ್ನು ನಾಯಿಗಳ ವಿಷ್ಯ ಮಾತಾಡೋಣ ಅಂದ್ರೆ...
ನಮ್ಮ-ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆ, ನಾಯಿ ತುಂಬಾ ನಿಯ್ಯತ್ತಿನ ಪ್ರಾಣಿ. ತನ್ನ ಯಜಮಾನ ಹೇಳಿದಂತೆ ಕೇಳುತ್ತೆ... ಅದು ಇದು.. ಇತ್ಯಾದಿ ಇತ್ಯಾದಿ...

ನೀವು ಅದನ್ನ ಟ್ರೈನ್ ಮಾಡಬಹುದು, ಅದು ಒಂದು ಬಗೆ ಆದ್ರೆ.. ಅದು ತಾನಾಗೆ ತಿಳ್ಕೊಂಡಿರೋದು????

ನಾನು ಕಂಡಿರುವ ಕೆಲವು ಸನ್ನಿವೇಷಗಳು,,,,
ನಮ್ಮ ಮನೆಯಲ್ಲಿ ಒಂದು ನಾಯಿ ಇದೆ, ಹೆಸರು "ರಾಣಿ"... ಮನೆ ಸುತ್ತ-ಮುತ್ತ ಎಲ್ಲಾದರು ಅದು ಇತ್ತು ಅಂದ್ರೆ, "ರಾಣಿ" ಅಂತ ಕೂಗಿದ್ರೆ ಓಡಿ ಬರುತ್ತೆ...

ಯಾರಾದ್ರೂ ಅದಕ್ಕೆ ನಾಮಕರಣ ಮಾಡಿ, ನೇಮ್ ಪ್ಲೇಟ್ (ನಾಮಫಲಕ) ಹಾಕಿದ್ದಾರ? ಇಲ್ಲ.
ಹೀಗಿದ್ರೂ "ರಾಣಿ" ಅಂತ ಕರೆದಾಗ ಅದು ಏಕೆ ಓಡಿ ಬರುತ್ತೆ????

ಯಾರು ಅದನ್ನ ಟ್ರೈನ್ ಮಾಡಿಲ್ಲ, ಆದ್ರೂ ಅಪರಿಚಿತರು ಮನೆ ಗೇಟ್ ಹತ್ರ ಬಂದಾಗ ಯಾಕೆ ಬೊಗಳುತ್ತೆ????

ಇದೆಲ್ಲಾ ಏನೋ ಬಿಟ್ಟಾಕಿ, ನಾರ್ಮಲ್, ಇದೆಲ್ಲಾ ಅದರ ಹುಟ್ಟುಗುಣ, ಹಾಗೆ ನಡೆಯುತ್ತೆ ಅಂತ ಅನ್ಕೊಳೋಣ ಸದ್ಯಕ್ಕೆ..

ಪ್ರತಿದಿನ ರಾತ್ರಿ ನಾನು ಆಫೀಸ್ ಇಂದ ಮನೆಗೆ ಹೋಗಿ ಗೇಟ್ ತೆಗಿತಿದ್ದಂಗೆ ಎಲ್ಲಿಂದಲೋ ಪ್ರತ್ಯಕ್ಷ...
ಪ್ರತಿದಿನ ರಾತ್ರಿ ನಾನು ಅದೇ ಟೈಮ್ ಗೆ ಮನೆಗೆ ಹೋಗ್ತೀನಿ ಅಂತ ನಾನು ಯಾವತ್ತು ಅದಕ್ಕೆ ಹೇಳಿಲ್ಲ. ಅದಕ್ಕಿಂತ ಹೆಚ್ಚಿಗೆ ಅದು ಗಡಿಯಾರ ಹಾಕಿರೋಲ್ಲ (ಇದನ್ನ ನಾನು ಬಿಡಿಸಿ ಹೇಳಬೇಕಿಲ್ಲ). ಹೀಗಿದ್ರೂ ಅದೇ ಸಮಯಕ್ಕೆ ಎಲ್ಲೇ ಇದ್ರು ಹೇಗೆ ಬಂದು ಗೇಟ್ ಹತ್ರ ನಿಲ್ಲುತ್ತೆ...???
ಅಪ್ಪಿ ತಪ್ಪಿ ನಾನು ಹೋಗೋದು ಎರಡು ನಿಮ್ಷ ಲೇಟ್ ಆದ್ರೆ, ಅಲ್ಲೇ ಬೀಟ್ ಹೊಡಿತ ಇರುತ್ತೆ, ನಾ ಹೋದ ಕೂಡಲೇ ನನ್ನ ಹಿಂದೆ ಬರುತ್ತೆ.. ಒಂದು ವೇಳೆ ಉಲ್ಟಾ ಆಗಿ ನಾನು ಬೇಗ ಹೋದ್ರೆ, ಮನೆಗೆ ಹೋಗಿ ಶೂ ತೆಗೆದು ಹೊರಗೆ ಬಾರೋ ಹೊತ್ತಿಗೆ ಗೇಟ್ ಹತ್ರ ಕಾಯ್ತಾ ಇರುತ್ತೆ...

ಕಾರಣ ಇಷ್ಟೇ, ನಾನು ಮನೆಗೆ ಹೋದ್ಮೇಲೆ ಗೇಟ್ ಬೀಗ ಹಾಕ್ತೀನಿ. ಗೇಟ್ ಬೀಗ ಹಾಕೋದಕ್ಕೆ ಮುಂಚೆ ಅದು ಮನೆ ಸೇರ್ಕೊಳುತ್ತೆ.

ಅದು ಮಲಗೋ ಜಾಗ ಕೂಡ ಅಷ್ಟೇ, ಅದಕ್ಕೆ ಅಂತ ಗೂಡು ಇಲ್ಲ, ಹೊದಿಕೆ ಇಲ್ಲ. ಆದರೂ ಅದು ಬೆಚ್ಚಗೆ ಮಲಗಿರುತ್ತೆ, ಅದು ಮಲಗಿರೋ ಜಾಗದಲ್ಲಿ ನಿಂತರೆ ಗೊತ್ತಾಗುತ್ತೆ ಅದು ಎಂತ ಜಾಗ ಅಂತ.

ಇನ್ನು ಒಂದು ಸನ್ನಿವೇಷ ಅಂದ್ರೆ,
ಒಂದು ಬೀದಿಯ ನಾಯಿ ಮತ್ತೊಂದು ಬೀದಿಗೆ ಹೋದ್ರೆ, ಜಾಸ್ತಿ ನಕ್ರ ಮಾಡೋಕೆ ಹೋಗೊಲ್ಲ... :)
(ಮನುಷ್ಯರಲ್ಲಿ[ಕೆಲವು] ಇದು ಸಂಪೂರ್ಣ ಉಲ್ಟಾ), ಸಾಮಾನ್ಯವಾಗಿ ರಾತ್ರಿ ನಾನು ಮನೆಗೆ ಹೋಗಬೇಕಿದ್ರೆ, ಬೀದೀಲಿ ಒಂದಷ್ಟು ನಾಯಿಗಳು ಇರ್ತಾವೆ. ಈ ದಿನ ಗಾಡಿ ಇಂದ ಇಳಿದು ಬರ್ತಿರ್ಬೇಕಿದ್ರೆ, ಒಂದು ಬೇರೆ ನಾಯಿ. ಅದನ್ನು ನೋಡಿದ ತಕ್ಷಣ ನಂಗೆ ಅನಿಸ್ತು ಇದು ನಮ್ಮ ಬೀದಿ ನಾಯಿ ಅಲ್ಲ, ಎಲ್ಲಿಂದಲೋ ಬಂದಿದೆ. ಅದು ಅದರ ಪಾಡಿಗೆ ಅದು ಹೋಗ್ತಾ ಇತ್ತು, ನಾನು ಅದನ್ನ ಗಮನಿಸ್ತಾ ಮನೆ ಕಡೆ ನಡಿತಾ ಇದ್ದೆ. ನಮ್ಮ ಬೀದಿಯ ನಾಯಿಗಳ ಗುಂಪು ಅಲ್ಲಿ ಮುಂದೆ ಕಾಯ್ತಾ ಇತ್ತು. ಹೊಸ ನಾಯಿ ಹೋಗ್ತಾ ಇದ್ದಂಗೆ, ಎಲ್ಲ ನಾಯಿಗಳು ಬೊಗಳೋಕೆ ಶುರು ಮಾಡ್ಕೊಂದ್ವು. ನಾ ನೋಡ್ತಾ ನಿಂತೆ, ಆ ಹೊಸ ನಾಯಿ ಏನ್ ಮಾಡುತ್ತೆ ಅಂತ. ಒಂದು ಚೂರು ಪ್ರತಿರೋಧ ಇಲ್ಲ, ಹಿಂದೆ ತಿರುಗಿ ಕೂಡ ನೋಡ್ಲಿಲ್ಲ, ತಲೆ ಬಗ್ಗಿಸಿ ಹೆಂಗೆ ನಡೀತಾ ಇತ್ತೋ ಅದೇ ಗತಿಯಲ್ಲಿ ಮುಂದೆ ಹೋಯ್ತು, ಯಾವುದು ತನ್ನ ಕಿವಿಗೆ ಬಿದ್ದಿಲ್ಲ ಅನ್ನೋ ರೀತಿ. ನಂಗೆ ಆಶ್ಚರ್ಯ...

ಈ ಸನ್ನಿವೇಷ ನೋಡಿದ್ಮೇಲೆ ನನ್ ತಲೇಲಿ ಸ್ವಲ್ಪ ಹಂಗೆ ಹುಳ ಓಡಾಡೋಕೆ ಶುರು ಆಯ್ತು.. ಹಾಗಾಗಿ ಈ ಲೇಖನ...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ....

Sunday, August 12, 2012

ಏನ ಹೇಳಲಿ ನಾ ಅಗಲಿಕೆಯ ಆಳ...???? - 2


ಕಾಲನ ಆಟ ಇನ್ನು ಮುಗಿದಿರಲಿಲ್ಲ ನಮ್ಮ ಪಾಲಿಗೆ,,,,

ಈ ಘಟನೆ ಮುಗಿದ ಕೆಲವೇ ದಿನಗಳು, ಇನ್ನು ನಿಖರವಾಗಿ ಹೇಳ್ಬೇಕು ಅಂದ್ರೆ ಅದೇ ಆಗಸ್ಟ್ ತಿಂಗಳು, ನೋವಿನ ಛಾಯೆ ಇನ್ನು ಮಾಸಿರಲಿಲ್ಲ, ಗೆಳೆಯರೆಲ್ಲ ಅದೇ ಗುಂಗಲ್ಲಿ ಇದ್ವಿ, ಮತ್ತೊಂದು ವಾರ್ತೆ. ಗೆಳೆಯನ ಸಹೋದರನಿಗೆ ಹುಷಾರಿಲ್ಲ, ಅದರಲ್ಲಿ ಏನು ವಿಶೇಷ ಇದೆ? ವಿಶೇಷ ಇದೆ, ವಯಸ್ಸು ೩೦ರ ಆಸುಪಾಸು, ಅನಾರೋಗ್ಯ, ಆಸ್ಪತ್ರೆಗೆ ದಾಖಲು. ಏನೋ ಸಣ್ಣ ಜ್ವರ ಇರ್ಬೇಕು ಅಂತ ನಾನು ಜಾಸ್ತಿ ಯೋಚನೆ ಮಾಡ್ಲಿಲ್ಲ, ಆಗಾಗ ಅಪ್ಡೇಟ್ ಬರ್ತಾ ಇತ್ತು, ಹುಷಾರಾಗ್ತಾ ಇದಾರೆ, ಸ್ವಲ್ಪ ಜ್ವರ ಜಾಸ್ತಿ, ಇತ್ಯಾದಿ. ಮತ್ತದೇ ಮತ್ತೆ ಅದೇ.... ಊಟ ಮಾಡ್ತಿದೀನಿ, ಗೆಳತಿಯ ಕರೆ, ಮಾತಾಡ್ತಾ ಇಲ್ಲ, ಅಳ್ತಾ ಇದ್ದಾಳೆ. ಸ್ವಲ್ಪ ಹೊತ್ತದ್ಮೇಲೆ, "ಅವನ ಅಣ್ಣ ತೀರ್ಕೊಂದ್ಬಿಟ್ರಂತೆ, ಅವನು ಅಳ್ತಿದ್ದಾನೆ...........". ಮತ್ತೆ ಆಕಾಶ ತಲೆಮೇಲೆ ಬಿದ್ದಂಗೆ, ನನ್ನ ಕಿವಿ ನಾನೇ ನಂಬೋಕೆ ಆಗ್ತಿರ್ಲಿಲ್ಲ. ಅವನ ಊರಲ್ಲೇ ಇದ್ದ ಮತ್ತೊಬ್ಬ ಗೆಳೆಯನಿಗೆ ಕರೆ ಮಾಡಿ ವಿಚಾರಿಸಿದ್ರೆ, ನಾ ಕೇಳಿದ ವಿಷ್ಯ ನಿಜ ಅಂದ್ಬಿಟ್ಟ... :( "ಸರಿ, ನಾನು ಬರ್ತೀನಿ..." ಎಲ್ಲ್ಲಿಗೆ, ಹೇಗೆ ಬರಬೇಕು ತಿಳ್ಕೊಂಡು, ಹೋಗಿ ಬರ್ತೀನಿ ಅಂತ ಅಮ್ಮನಿಗೆ ಹೇಳಿ ಹೊರಟೇಬಿಟ್ಟೆ. ಬೆಳಿಗ್ಗೆ ಅಲ್ಲಿ ಹೋದಾಗ, ಮತ್ತದೇ ನೋವು, ದುಃಖ, ಅಳಲು, ಆಕ್ರಂದನ. ಹಿಂದೆ ಮುಗಿದ ಗೆಳೆಯನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ನನ್ನ ಮತ್ತೊಬ್ಬ ಗೆಳೆಯನ ಅಣ್ಣ. ಆ ನೋವು ಹೇಳಲಾಗದು, ಗೆಳೆಯನ ಮುಖ ನೋಡಿದರೆ ಏನು ಹೇಳ್ಬೇಕು ತೋಚ್ತಾ ಇಲ್ಲ, ಏನು ಅರಿಯದ ಮುದ್ದು ಮಗು ಮತ್ತೊಂದು ಕಡೆ.

..............
..............
..............

ಶಾಸ್ತ್ರಗಳೆಲ್ಲ ಮುಗಿದಮೇಲೆ, ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ. ಅದು ಕೂಡ ನನ್ನ ಗೆಳೆಯನ ಕೈ ಇಂದ.... ನೋಡಲಾಗದಿದ್ದರೂ ಎಲ್ಲರೂ ಅಲ್ಲಿ ಮೂಕ ಪ್ರೇಕ್ಷಕರು, ಪಾತ್ರದಾರಿಗಳು ಅಷ್ಟೇ. ಕಾಲನ ಕೈಗೊಂಬೆಗಳು. ತನ್ನ ಒಡಹುಟ್ಟಿದ ಅಣ್ಣನಿಗೆ ತಲೆಗೊಳ್ಳಿ ಇಡಬೇಕಾದ ಸ್ಥಿತಿ ನೋಡುತ್ತಿದ್ರೆ, ಕಣ್ಣಲ್ಲಿ ನೀರು ತಾನಾಗಿ ಬರ್ತಾ ಇತ್ತು... ಕಡೆಗೆ ಯಾವಾಗ ಮುಖ ನೋಡ್ದೆ, ಏನು ಹೇಳ್ದೆ ಏನು ಅರಿವಿಗೆ ಬರ್ತಿಲ್ಲ. ಅಲ್ಲಿಂದ ಹೊರಟೆ... ಮತ್ತೆ ಬರ್ತೀನಿ ಅಂತ ಹೇಳೋ ಸು-ಸಮಯ ಅದಾಗಿರಲಿಲ್ಲ.... :( :( :(

ಏನ ಹೇಳಲಿ ನಾ ಅಗಲಿಕೆಯ ಆಳ...????


ಯಾರು ಊಹಿಸಿರಲಿಲ್ಲ, ಯಾರ ಅಪೇಕ್ಷೆಯೂ ಅದಾಗಿರಲಿಲ್ಲ, ಯಾರೊಬ್ಬರು ನಿರೀಕ್ಷಿಸಿರಲಿಲ್ಲ, ಎಲ್ಲವೂ ಅನಿರೀಕ್ಷಿತ, ಅನಪೇಕ್ಷಿತ, ಊಹೆಗೆ ಮೀರಿದ್ದು, ಕಲ್ಪನೆಗೆ ನಿಲುಕದ್ದು, ಆ ಅಗಲಿಕೆ ಮನಸಿನ ಆಳದಲ್ಲಿ ಬೇರೂರಿದ್ದು... ಒಂದು ವರ್ಷವೇ ಆದರೂ ಇನ್ನು ಈಗ ಕಣ್ಣು ಮುಂದೆ ನಡೆಯುತ್ತಿರುವಂತಿದೆ, ಕೆಲ ಕ್ಷಣ ಕಣ್ಣಂಚಲ್ಲಿ ಸಾಗಿ ಹೋಗುವ ಆ ಘಟನೆಯ ಅವಶೇಷ, ಕಣ್ಣಂಚಲ್ಲಿ ಹಾಗೆ ಹನಿ ಹನಿ ಕಂಬನಿ ಸುರಿಯುವಂತೆ ಮಾಡುತ್ತದೆ...

ಅಂದು ಗೆಳೆಯರ ದಿನ, ೨೦೧೧ ನೆ ವರ್ಷದ ಗೆಳೆಯರ ದಿನ (friendship day), ನಾವು ಗೆಳೆಯರೆಲ್ಲ ಭೇಟಿಯಾಗಬೇಕಿತ್ತು, ಅದು ಆಗಸ್ಟ್ ತಿಂಗಳು, ಲಾಲ್-ಭಾಗ್ ಅಲ್ಲಿ ಫಲ-ಪುಷ್ಪ ಪ್ರದರ್ಶನ, ಎಲ್ಲರು ಲಾಲ್-ಭಾಗ್ ಅಲ್ಲಿ ಭೇಟಿಯಾಗೋಣ ಅಂತ ಮೊದಲೇ ಪ್ಲಾನ್ ಆಗಿತ್ತು. ಆದರೆ ವಿಧಿಯ ಬರಹ ಬೇರೇನೆ ಇತ್ತು, ಆ ಕಾಲದ ಕೈಗೊಂಬೆಗಳು ನಾವೆಲ್ಲಾ, ಆ ದೇವರ ಆಟದಲ್ಲಿ ನಾವೆಲ್ಲರೂ ಅತಿ ಸಣ್ಣ ಆಟಿಕೆಗಳು ಅಷ್ಟೇ. ನಾನು ಮತ್ತೆ ಮತ್ತೊಬ್ಬ ಗೆಳೆಯ, ನಾಮಕರಣ ಸಮಾರಂಭದಲ್ಲಿ ಇದ್ವಿ, ಸರಿ ಸುಮಾರು ಮಧ್ಯಾಹ್ನದ ಊಟದ ಹೊತ್ತಿಗೆ, ಸೂತ್ರದಾರನ ಆಜ್ಞೆಯ ಒಬ್ಬ ಪರಿಪಾಲಕ ಮಳೆರಾಯ ತನ್ನ ಆಟ ಶುರು ಮಾಡ್ಕೊಂಡ. ಆಟಿಕೆಗಳು ನಾವು ಏನು ಮಾಡೋಕೆ ಸಾಧ್ಯ,  ಭವಿಷ್ಯದ ಎಲ್ಲ ಹುನ್ನರಾಗಳನ್ನು ತನ್ನಲ್ಲಿ ಅಡಗಿಸಿಕೊಂಡಿದ್ದ ಆ ಮಳೆಯ ಆಟದಲ್ಲಿ ನಾವು ಏನು ಮಾಡಲಾಗದ ನಿರ್ಜೀವ ಆಟಿಕೆಗಳು. ಭವಿಷ್ಯದ ಹುನ್ನಾರಿನ ರಹಸ್ಯ ತಿಳಿಯದ ನಾವು, ಅಂದಿನ ಭೇಟಿಯನ್ನು ಮುಂದೂಡಿದ್ವಿ, ಮಳೆಯ ಕಾರಣದಿಂದ ಅಂದಿನ ಭೇಟಿ ಕ್ಯಾನ್ಸಲ್ ಮಾಡಿದ್ವಿ.

ಅದೇ ದಿನ ರಾತ್ರಿ, ಒಂದು ಕರೆ, "ಲೋ, ಅವನಿಗೆ ಆಕ್ಸಿಡೆಂಟ್ ಆಗಿದೆ, ಸುಮಾರು ೫ ಘಂಟೆ ಹೊತ್ತಿಗೆ, ಅಲ್ಲೇ ಪಕ್ಕದಲ್ಲಿದ್ದ ಹಾಸ್ಪಿಟಲ್ ಗೆ ಯಾರೋ ಸೇರ್ಸಿದಾರೆ, ಪ್ಲೀಸ್ ಬರ್ತೀರಾ?". ರಾತ್ರಿಯ ಊಟ ಮಾಡ್ತಿದ್ದೆ ನಾನು, ಗಂಟಲಲ್ಲಿ ನಿಂತೊಯ್ತು, ಹಾಗು-ಹೀಗೂ ಮಾಡಿ, ನೀರು ಕುಡಿದು, ಬೇಗ ಊಟ ಮುಗಿಸಿ ಹಾಸ್ಪಿಟಲ್ ಹತ್ರ ಹೋಗೋ ಹೊತ್ತಿಗೆ, ಕೆಲವು ಗೆಳೆಯರು ಆಗ್ಲೇ ಬಂದಿದ್ರು.
ಹೇಗಾಯ್ತು, ಏನಾಯ್ತು, ಯಾವಾಗ ಹೀಗಾಯ್ತು, ಯಾರದು ತಪ್ಪು, ಎಲ್ಲಿ ಆಯ್ತು... ಪ್ರಶ್ನೆಗಳ ಸುರಿಮಳೆ... ಯಾವ್ದಕ್ಕೂ ಸಮರ್ಪಕ ಉತ್ತರ ಸಿಗ್ಲಿಲ್ಲ, ತಮಗೆ ಗೊತ್ತಿರೋದನ್ನ ಹೇಳ್ತಾ ಇದ್ರೂ. ಅವನ್ನ ನೋಡೋಕೆ ನಮ್ಮನ್ನ ಒಳಗೆ ಬಿಡ್ಲಿಲ್ಲ, ಇರೋ ವರ್ಗು ಇದ್ದು ಮತ್ತೆ ವಾಪಾಸ್ ಬಂದಿದ್ದಾಯ್ತು. ಒಂದು ವಾರದವರೆಗೆ ಅದು ಇದು ಕಾರಣ ಕೊಟ್ಟು, ತಳ್ಕೊಂಡು ಬಂದ್ರು ಆ ಆಸ್ಪತ್ರೆಯ ಡಾಕ್ಟರ್ ಗಳು. ಅದನ್ನೇ ನಂಬಬೇಕಾದ ಪರಿಸ್ಥಿತಿ ನಮ್ಮೆಲ್ಲರದ್ದು, ಹಾಗಾಗಿ ಅದನ್ನೇ ನಂಬಿಕೊಂಡು, ನಮ್ಮ ಗೆಳೆಯ ಹುಷಾರಗ್ತಾನೆ ಅಂತ ಆಶಾವಾದದೊಂದಿಗೆ ಒಂದು ವಾರ ಕಳೆದ್ವಿ, ಈ ಮಧ್ಯೆ ಮತ್ತೊಬ್ಬ ಗೆಳೆಯರು, ನಮ್ಮ ಗೆಳೆಯ ಬೇಗ ಹುಷಾರಾಗಿ ವಾಪಾಸ್ ಬರಲಿ ಅಂತ ಮೃತ್ಯಂಜಯ ಹೋಮ, ಪೂಜೆ ಪುನಸ್ಕಾರ ಎಲ್ಲ ಮಾಡಿಸಿದ್ರು. ಆದರೆ, ಆದರೆ, ಎಷ್ಟೇ ಅದ್ರು ನಾವು ಆಟಿಕೆಗಳು ಅಲ್ವೇ, ಹಾಗಾಗಿ ನಮ್ಮ ಪಾತ್ರ ಅಷ್ಟೇ, ಆಟದಲ್ಲಿ ಭಾಗಿಯಾಗೋದು. ಆಟದ ನಿಯಮ ಬದಲಾಯಿಸೋದಾಗ್ಲಿ, ಅದರ ವಿರುದ್ಧ ಆಟ ನಡೆಸೋದಾಗ್ಲಿ ನಮ್ಮಿಂದ ಸಾಧ್ಯವಿಲ್ಲದ ಕೆಲಸ. ಕೊನೆಗೂ ಆ ಘಳಿಗೆ ಬಂದೇಬಿಡ್ತು, ವರಮಹಾಲಕ್ಷ್ಮಿ ಹಬ್ಬದ ಮಾರನೆ ದಿನ, ನಮ್ಮನೆಯಲ್ಲಿ ಲಕ್ಷ್ಮಿ ಅಲಂಕಾರದ ಹೂವನ್ನು ಸರಿ ಮಾಡ್ಬೇಕಿದ್ರೆ, ಹೂಡಿದ್ದ ಕಲಶ ಉರುಳಿಬಿತ್ತು. ಮನಸಲ್ಲಿ ಏನೋ ಒಂದ್ತರ ತಳಮಳ, ಮತ್ತೊಂದು ಕಡೆ ಮೃತ್ಯಂಜಯ ಹೋಮ ಫಲ ಕೊಡುತ್ತೆ ಅನ್ನೋ ನಂಬಿಕೆ. ಅದು ಆಗಿ, ೧೫ ನಿಮಿಷ ಅಂತರದಲ್ಲಿ, ಗೆಳೆಯನಿಂದ ಕರೆ,
" ಲೋ, ಅವ್ನು ಉಳ್ಯೋದು ಕಷ್ಟ ಅಂತ ಹೇಳ್ತಿದ್ದಾರೆ ಡಾಕ್ಟರ್, ಎಲ್ಲರ್ಗೂ ಹಾಸ್ಪಿಟಲ್ ಹತ್ರ ಬರೋಕೆ ಹೇಳು, ಯಾರ್ಗೆ ವಿಷ್ಯ ಹೇಳ್ಬೇಕು, ಹೆಂಗೆ ಹೇಳ್ಬೇಕು, ನೋಡ್ಕೊಂಡು ಹೇಳು, ಆದಷ್ಟು ಬೇಗ ಬಾ, mortuary ಗೆ ತಗೊಂಡು ಹೋಗ್ತಾರಂತೆ". ಒಂದು ಕ್ಷಣ ಆಕಾಶ ತಲೆ ಮೇಲೆ ಬಿದ್ದಂಗಾಯ್ತು, ಬೇರೆ ಯೋಚನೆ ಇಲ್ಲ,
"ಅಮ್ಮ, ಹೀಗಾಯ್ತಂತೆ, ನಾನು ಹಾಸ್ಪಿಟಲ್ಗೆ ಹೋಗ್ತೀನಿ", ಹೇಳಿ ಹೊರಟೆ. ಇನ್ನೊಬ್ಬ ಗೆಳತಿಯ ಜೊತೆಗೂಡಿ, ಹೊರಟ್ವಿ, ಹೋಗ್ತಾ ದಾರೀಲಿ ಮತ್ತೆ ಕರೆ, "ಲೋ, ಬರ್ತಾ ಇದ್ದೀಯಾ? ಯಾರ್ಯಾರ್ಗೆ ಹೇಳ್ದೆ?"
"ಹು ಕಣೋ, ಬರ್ತಾ ಇದ್ದೀವಿ, ಮತ್ತೆ ಏನು ಕಥೆ"
"ಆಗ್ಲೇ ಹೋಗ್ಬಿಟ್ಟಿದಾನೆ, ಅದ್ಕೆ ಬೇಗ ಬಾ ಅಂತ ಹೇಳಿದ್ದು"
"ಟೌನ್ಹಾಲ್ ಹತ್ರ ಇದೀವಿ, ಇನ್ನೊಂದು ಹತ್ತು ನಿಮಿಷ"
ಕೆಲವು, ಗೆಳೆಯ ಗೆಳತಿಯರಿಗೆ ಕಾರಣಾಂತರಗಳಿಂದ ವಿಷಯ ತಿಳಿಸೋಹಾಗಿರ್ಲಿಲ್ಲ, ತಿಳಿಸ್ದೆ ಬೇರೆ ವಿಧಿ ಇಲ್ಲ. ಒಂದು ಟೈಮ್ ಅಗೋ ಹೊತ್ಗೆ, ನೋಡು ನೋಡುತ್ತಿದ್ದಂತೆ, ಎಲ್ಲರು ಬಂದೇಬಿಟ್ರು. ಯಾರ ಮುಖ ಯಾರು ನೋಡೋ ಹಾಗಿಲ್ಲ, ಯಾರ ಕಣ್ಣಲ್ಲಿ, ಏನೇನು ಭಾವನೆಗಳೋ, ಏನೇನು ವೇದನೆಗಳೋ, ಅವನ್ಗೆ ತಿಳಿಬೇಕು.

ಮುಂದೆ (ಹಾಸ್ಪಿಟಲ್ ಇಂದ ಹೊರ ತಂದಾಗಿನಿಂದ, ಅವನ ಊರಿನ ಕಡೆ ಅವನ್ನ ತಗೊಂಡು ಹೋಗೋವರ್ಗೂ) ಏನಾಯ್ತು ಅಂತ ಹೇಳೋಕೆ ನನ್ನಿಂದ ಖಂಡಿತ ಸಾಧ್ಯವಿಲ್ಲ... 

ನಾವೆಲ್ಲಾ ಒಂದೇ ಆಫೀಸಿನಲ್ಲಿ ಕೆಲ್ಸ ಮಾಡ್ತಿದ್ದರಿಂದ, ಆಫೀಸಿನ ಕೆಲವು ದೊಡ್ಡ ಹುದ್ದೆಯ ವ್ಯಕ್ತಿಗಳು ಕೂಡ ಬಂದಿದ್ರು ನೋಡೋಕೆ. ಅಲ್ಲಿದ್ದ ಪರಿಸ್ಥಿತಿ ನೋಡಿ ನಾವು ಕೂಡ ಅವನ ಊರಿಗೆ ಹೋಗೋಣ ಅಂತ ನಿರ್ಧಾರ ಮಾಡಿದ್ವಿ, ಅದಕ್ಕೆ ದೊಡ್ಡ ಹುದ್ದೆಯ ವ್ಯಕ್ತಿಗಳು ತುಂಬಾ ಸಹಕರಿಸಿದರು, ಅವರ ಸಹಕಾರ ಜ್ನಾಪಿಸ್ಕೋಳೋದು ಇಲ್ಲಿ ಅವಶ್ಯಕ. ಉಟ್ಟ ಬಟ್ಟೆಯಲ್ಲೇ, ನಾವು ಮೂರು ಜನ ಗೆಳೆಯರು, ಸ್ವಲ್ಪ ತಿನ್ಕೊಂಡು, ಅವನ ಊರಿಗೆ ಹೊರಟು ನಿಂತ್ವಿ. ಸಂಜೆ ಸುಮಾರು ೬-೭ ಘಂಟೆಯ ಅಂತರದಲ್ಲಿ ಶುರು ಆದ ನಮ್ಮ ಪ್ರಯಾಣ, ಬೆಳಗಿನ ಜಾವ ಅವನ ಊರು ಸೇರ್ಕೊಂತು. ಅವರು ಬರುವ ಸಮಯಕ್ಕಾಗಿ ಕಾದಿದ್ದ ನಾವು, ಸ್ವಲ್ಪ ನಿದ್ದೆಯಲ್ಲಿದ್ವಿ, ಕರೆ ಬಂದ ತಕ್ಷಣ ಅವನ ಮನೆ ಕಡೆ ಪ್ರಯಾಣ. ಅವನ ಮನೆಯಲ್ಲಿ ಹೇಳಳಸಾಧ್ಯವಾದ ರೋಧನ, ನಮ್ಮಿಂದ ನೋಡೋಕೆ ಆಗ್ತಾ ಇರ್ಲಿಲ್ಲ, ಆದರೆ ಬೇರೆ ದಾರಿ ಇಲ್ಲ, ಅಲ್ಲಿನ ಜನರನ್ನ ಹೇಗಾದ್ರು ಮಾಡಿ ನಿಯಂತ್ರಿಸಬೇಕಿತ್ತು. ಕೈಲಾದ ಮಟ್ಟಿಗೆ ನಮ್ಮಿಂದ ಪ್ರಯತ್ನ.. ಕೊನೆಗೆ ಆ ಸಮಯ ಬಂದೇ ಬಿಡ್ತು, ಅವನಿದ್ದ ಗಾಡಿ ಬರ್ತಿದ್ದಂಗೆ, ಮನೆಯಲ್ಲಿ ಅಳು, ನೋವು, ವೇದನೆ, ಆಕ್ರಂದನ... ಆಕಾಶ ಮುಟ್ಟಿತ್ತು.

ಆ ನೋವಿನ ವರ್ಣನೆ ನನ್ನಿಂದ ಅಸಾಧ್ಯ, ಕ್ಷಮೆ ಇರಲಿ.

ಸಣ್ಣ ಹಳ್ಳಿ ಅದ್ದರಿಂದ, ಇಡೀ ಊರಿನ ಜನ ಅಲ್ಲಿ ಇದ್ರು. ಅದು ಇದು ಸಂಪ್ರದಾಯ,ಪೂಜೆ ಎಲ್ಲ ಅದ್ಮೇಲೆ, ಅವನ್ನ ಎತ್ಕೊಂಡು ಹೋಗ್ಬೇಕು... ಜೀವನದ ಹಾದಿಯಲಿ ಪಯಣಿಸಿದ ನಮ್ಮ ಗೆಳೆಯನ ಕೊನೆಯ ಪ್ರಯಾಣ... ಅವನ ಹೊತ್ತು ಹೋಗುತ್ತಿದ್ದ ನಾವು ಒಂದು ಕ್ಷಣ ಹಿಂದೆ ತಿರುಗಿ ನೋಡಿದ್ರೆ, ಜನರ ಗುಂಪು, ಮತ್ತೇನು ಕಾಣ್ತಾ ಇಲ್ಲ, ನೋವಿನ ಭಾವ. ಆ ಜಾಗ ಸೇರ್ತಿದ್ದಂಗೆ, ತಲೆಗೆ ಏನು ತೋಚ್ತಾ ಇಲ್ಲ, ಏನಾಗ್ತಿದೆ ಅಂತ ತಿಳಿತಾ ಇಲ್ಲ, ನಾವು ಇಲ್ಲಿ ಯಾಕಿದ್ದೀವಿ ಗೊತಾಗ್ತಾ ಇಲ್ಲ, ಎಲ್ಲ ಖಾಲಿ ಖಾಲಿ, ನಮ್ಮ ಕಣ್ಣು ಮುಂದೆ ಏನಾಗ್ತಿದೆ ಅಂತ ನಮಗೆ ಗೊತ್ತಾಗೋ ಹೊತ್ತಿಗೆ, ಅವನು ಮಣ್ಣೊಳಗೆ ಹೋಗ್ಬಿಟ್ಟಿದ್ದ, ಯಾವುದೊ ಅಪರಿಚಿತ ಲೋಕದಲ್ಲಿದ್ದಂಗೆ, ಏನು ಗೊತ್ತಾಗ್ದೆ, ಕೈಯಲ್ಲಿ ಹಿಡಿದ ಮಣ್ಣು ಹಾಗೆ ಕೆಳಗೆ ಬಿದ್ದಿತ್ತು...
ಗೆಳೆಯನ ಅಂತ್ಯಕ್ರಿಯೆ................................................. :(

ಮತ್ತೊಂದು ವಿಷಾದ.... ಕೆಳಗಿನ ಕೊಂಡಿಯಲ್ಲಿ...
http://gundachandru.blogspot.in/2012/08/2.html

Saturday, August 11, 2012

ಯಾಕೆ ಕೆಲ್ಸ ಬೇಗ ಆಗೋಲ್ಲ... (ಒಂದು ಅನುಭವ) - 2 (complete conversation ;) ;))


ಸಾರ್, ಬಿಲ್ ಕರ್ರೆಕ್ಶನ್ ಇದೆ, ಹನುಮಂತನಗರ ಏರಿಯಾ, ಯಾರ್ಹತ್ರ ಹೋಗ್ಬೇಕು??

ಅಲ್ಲಿ ರೈಟ್ ಸೈಡ್ ಆಫೀಸ್ ಒಳಗೆ ಹೋಗಿ ಕೇಳಿ ಸರ್...
ಬಲಗಡೆ ಇದ್ದ ಆಫೀಸ್ ಒಳಗೆ ಹೋದೆ,

ಮೇಡಂ, ಬಿಲ್ ಕರ್ರೆಕ್ಶನ್ ಇದೆ, ಹನುಮಂತನಗರ ಏರಿಯಾ, ಯಾರು ಇನ್ಚಾರ್ಜು???
ರೀ, ಕಮಲ ಏನ್ರೀ ನಿಮ್ ಮಗನ್ಗೆ ಹುಡುಗಿ ಸೆಟ್ ಆಯ್ತು ಅಂದ್ರಿ, ಯಾವ ಊರು ಕಡೆದು, ನಿಮ್ ಕ್ಯಾಸ್ಟ್ಆ???

ಹು ಕಣ್ರೀ ರಮಾ, ಸೆಟ್ ಆಯ್ತು, ಹುಡುಗಿ ಇಲ್ಲೇ JP Nagar, ನಮ್ ಕ್ಯಾಸ್ಟ್ ಅಲ್ಲ ಕಣ್ರೀ, ನಮ್ ಮಗ ಕೆಲ್ಸ ಮಾಡೋ ಆಫೀಸ್ ಅಲ್ಲೇ ಅವ್ಳು ಕೂಡ ಮಾಡ್ತಾಳೆ, ಇಬ್ರು ಇಷ್ಟ ಪಟ್ಟಿದ್ರು, ವಯಸ್ಸಿಗೆ ಬಂದ ಮಗ, ಏನು ಹೇಳೋದು ಹೇಳಿ. ಸುಮ್ನೆ ಯಾಕೆ ಮನಸ್ಸು ಹಾಳು ಮಾಡ್ಕೊಳೋದು, ಅದಕ್ಕೆ ನಾವೆಲ್ಲ ಒಪ್ಕೊಂಡು ಮಾತು-ಕತೆ ಮುಗ್ಸಿದ್ವಿ ಕಣ್ರೀ.

ಅಲ್ರೀ ಕಮಲ, ಇಷ್ಟ ಪಟ್ರು ಅಂತ ಒಕ್ಪೊಂಡು ಮಾತು-ಕತೆ ಮುಗ್ಸಿದ್ರ? ಅದು ಇಂಟರ್ ಕ್ಯಾಸ್ಟ್?? ಏನೋ ಬಿಡಿ, ಕಾಲ ಚೇಂಜ್ ಆಗಿದೆ. ಅದಿರ್ಲಿ, ವರದಕ್ಷಿಣಿ, ವರೋಪಚಾರ ಏನು ಮಾಡ್ತಾರೆ, ಮದ್ವೆ ಎಲ್ಲಿ ಮಾಡ್ಕೊಡ್ತಾರಂತೆ, ಹುಡುಗಿ ಹೆಂಗಿದಾಳೆ ನೋಡೋಕೆ?

ಹುಡುಗಿ ಚೆನ್ನಾಗಿದಾಳೆ ರೀ ರಮಾ, ಲಕ್ಷಣವಾಗಿ ಇದ್ದಾಳೆ, ಅದ್ಕೆ ನನ್ ಮಗನು ಒಪ್ಪಿರೋದು. ಲವ್ ಮ್ಯಾರೇಜ್ ಅಲ್ವೇನ್ರಿ, ವರದಕ್ಷಿಣೆ ವರೋಪಚಾರ ಏನು ಇಲ್ಲ, ಮದ್ವೆ ಇಲ್ಲೇ ಗ್ರ್ಯಾಂಡ್ ಆಗಿ ಮಾಡ್ಕೊಡ್ತಾರಂತೆ...

....
....
....

ಅಲ್ಲಿ ರಾಧ ಅಂತ ಕೂತಿದಾರೆ ನೋಡಪ್ಪ, ಅಲ್ಲಿ ಹೋಗಿ ಮಾತಾಡು.

ಥ್ಯಾಂಕ್ಸ್ ಮೇಡಂ. :)

ನಮಸ್ಕಾರ ಮೇಡಂ, ಕಳೆದ ತಿಂಗ್ಳು ಫುಲ್ ಇಂಟರ್ನೆಟ್ ಇರ್ಲಿಲ್ಲ, ಅದಕ್ಕೆ ಬಿಲ್ ಅಲ್ಲಿ ಚೇಂಜ್ ಮಾಡಿಸ್ಬೇಕು ಅಮೌಂಟ್ ನ... 

AE ಬರ್ಕೋಟ್ಟಿದಾರ, ನಮ್ದೆ ಪ್ರಾಬ್ಲಮ್ ಅಂತ?

ಹೌದು ಮೇಡಂ, ಇಲ್ಲಿದೆ ನೋಡಿ ಅವ್ರು ಕೊಟ್ಟಿರೋ ಲೆಟರ್. 

ರೀ ವಿಶಾಲಾಕ್ಷಿ, ನೋಡ್ರೀ ಈ AE ಇದರಲ್ಲ ಹೋದ ತಿಂಗ್ಳು ಪ್ರಾಬ್ಲಮ್ ಆಗಿದ್ರಿ, ಏಪ್ರಿಲ್-ಮೇ ಅಲ್ಲಿ ವರ್ಕ್ ಆಗ್ತಿರ್ಲಿಲ್ಲ ಅಂತ ಬರೆದು ಕೊಟ್ಟಿದ್ದಾರೆ.

ಅಯ್ಯೋ, ಹಂಗೆ ಬಿಡಿ ರಾಧ, ಮೊನ್ನೆ ಏನಾಯ್ತು ಗೊತ್ತ? ಡಿಸೆಂಬರ್ ೨೦೧೨ ವರ್ಕ್ ಆಗ್ತಿರ್ಲಿಲ್ಲ ಅಂತ ಕೊಟ್ಟಿದ್ರು ರೀ. ಇನ್ನು ಜುಲೈ ತಿಂಗಳೇ ಮುಗ್ದಿಲ್ಲ ಡಿಸೆಂಬರ್ ಗೆ ಹೆಂಗೆ ಬಿಲ್ ಹಾಕಲಿ ಹೇಳಿ ರಾಧ... ಹ್ಹ ಹ ಹ ಹಾ.... ಅದಿರ್ಲಿ ಇವತ್ತು ಏನ್ ತಿಂಡಿ ಮಾಡಿದ್ರಿ ರಾಧ, ನಮ್ ಮನೇಲಿ ಚಿತ್ರಾನ್ನ ಮಾಡಿದ್ದೆ, ಚೆನ್ನಾಗಿದೆ ಅಂತ.. ಎಲ್ಲ ಖಾಲಿ ಮಾಡ್ಬಿಟ್ರು ಕಣ್ರೀ, ಕೊನೆಗೆ ನಂಗೆ ಇರ್ಲಿಲ್ಲ.

ನಮ್ ಮನೇಲಿ ಪಲಾವ್ ಮಾಡಿದ್ದೆ ಕಣ್ರೀ, ಹೆಸರಿಗೆ ತರಕಾರಿ ಪಲಾವು, ಆದ್ರೆ ತರಕಾರೀ ಅಲ್ಲೊಂದು ಇಲ್ಲೊಂದು... :) :)
ಎಷ್ಟು ರೇಟ್ ಆಗ್ಬಿಟ್ಟಿದೆ ಕಣ್ರೀ ವಿಶಾಲಾಕ್ಷಿ..!!!!

...........

...........

...........

ಸರಿ, ನಿಮಗೆ ಇಂಟರ್ನೆಟ್ ಪ್ರಾಬ್ಲಮ್ ಆಗಿತ್ತು, ನೀವು ಯುಸ್ ಮಾಡಿಲ್ಲ ಅಂತ ವೆರಿಫೈ ಆಗಬೇಕು, ಅಲ್ಲಿ ಹಿಂದೆ ವೆರಿಫಿಕೇಶನ್ ಮಾಡ್ತಾರೆ ಹೋಗಿ ಮಾಡಿಸ್ಕೊಂಡು ಬನ್ನಿ, ಆಮೇಲೆ ಬಿಲ್ ಕರೆಕ್ಟ್ ಮಾಡಿ ಕೊಡ್ತೀನಿ.

ಥ್ಯಾಂಕ್ಸ್ ಮೇಡಂ,
ಹಿಂದೆ ಇದ್ದ ಆಫೀಸ್ ಕಡೆ ಹೊರಟೆ....

ಮೇಡಂ, ಹೋದ ತಿಂಗ್ಳು ಇಂಟರ್ನೆಟ್ ಬರ್ತಾ ಇರ್ಲಿಲ್ಲ, ಅದಕ್ಕೆ ಬ್ರಾಡ್ಬ್ಯಾಂಡ್ ಯೂಸೇಜ್ ಆಗಿಲ್ಲ ಅಂತ ವೆರಿಫೈ ಮಾಡಿ ಕೊಡ್ಬೇಕು. ರಾಧ ಮೇಡಂ ವೆರಿಫೈ ಮಾಡಿಸ್ಕೊಂಡು ಬಾ ಅಂತ ಹೇಳಿದ್ರು, ಆಮೇಲೆ ಅವ್ರು ಬಿಲ್ ಚೇಂಜ್ ಮಾಡ್ತಾರಂತೆ.

ಹೌದಾ, ಕೊಡಪ್ಪ ಇಲ್ಲಿ, 
loggin into their server for usage verification.

ಉಮಾವ್ರೆ ನಮ್ಮನೇಲಿ ಇವತ್ತು ಉಪ್ಪಿಟ್ಟು ಮಾಡಿದ್ದೆ ರೀ, ಯಾವತ್ತು ಇಲ್ಲ, ಅಂತದ್ದು ಇವತ್ತು ನಮ್ ಮನೆವ್ರು ತುಪ್ಪ ಹಾಕ್ಕೊಂಡು ಹಾಕ್ಕೊಂಡು ತಿಂತಿದ್ರು ರೀ... ಇವತ್ತು ತುಂಬಾ ಚೆನ್ನಾಗಿ ಕೂಡಿ ಬಂದಿತ್ತು ರೀ, ಉಪ್ಪು ಖಾರ ಎಲ್ಲ.. ಮಕ್ಳು ಅಷ್ಟೇ ಏನು ಮಾತಾಡಲೇ ಇಲ್ಲ.. ಯಾವಾಗ್ಲೂ ಒಂದಲ್ಲ ಒಂದು ಕೊಂಕು ತೆಗಿತಿದ್ರು ರೀ, ಇವತ್ತು ಒಂದು ಪದ ಆಡೋದು ಬೇಡ್ವೆ? :) :)

ಹೌದೇನ್ರಿ ಸುಮಾ, ಹಂಗಿದ್ರೆ ತುಪ್ಪ ಹಾಕ್ಕೊಂಡು ನಮಗೂ ಸ್ವಲ್ಪ ತರೋದಲ್ವೇನ್ರಿ. ನೀವು ಬಿಡಿಪಾ ಯಾವಾಗ್ಲು, family, ಗಂಡ, ಮಕ್ಳು ಇಷ್ಟೇ ಹೇಳ್ತಾ  ಇರ್ತೀರ....

ಅಲ್ಲ ರೀ ಉಮಾ, ಹೇಳ್ದೆ ಅಲ್ವ.. ಚೆನ್ನಾಗಿದೆ ಅಂತ ಎಲ್ಲ ತಿನ್ದ್ಬಿಟ್ರು ರೀ, ನಂಗೆ ಸ್ವಲ್ಪ ಇತ್ತು.. ಇನ್ನು ಆಫೀಸ್ ಗೆ ಹೇಗೆ ತರ್ಲಿ ಹೇಳಿ...???

ನೋಡಿ ಮಂಗಳ, ಈ ಸುಮ ಮಾಡಿದ ಉಪ್ಪಿಟ್ಟು ಮನೇಲಿ ಎಲ್ಲ ಖಾಲಿ ಮಾಡ್ಬಿಟ್ರಂತೆ ...

ಏನೋ ಬಿಡ್ರಿ ಉಮಾ, ಅವ್ರು ನಮಗೆಲ್ಲಾ ಯಾಕೆ ತರ್ತಾರೆ ಹೇಳಿ....

...........

...........

...........

logged into their server, verified whether any broadband usage was there or not. 
ನೋಡಪ್ಪ, ಇಲ್ಲಿ ಜೂನ್ ೧೨ ರಿಂದ ಜೂನ್ ೩೦ ವರ್ಗು ಯುಸ್ ಮಾಡಿಲ್ಲ.. ಅದನ್ನು ಮಾತ್ರ  ಬರೆದು ಕೊಡ್ತೀನಿ, ಈ ತಿಂಗಳದ್ದು ಆಗೋಲ್ಲ, ಇನ್ನು ಬಿಲ್ ಜೆನೆರೆಟ್ ಆಗಿಲ್ಲ.

ಸರಿ ಮೇಡಂ, ಅಷ್ಟೇ ಕೊಡಿ.

ರೀ ಸುಮಾ, ಇದು ಯಾವ್ದೋ ರಿಪೋರ್ಟ್ ಅಂತ ಹೇಳಿದ್ದಾರೆ ಹೆಂಗೆ ತೆಗ್ಯೋದ್ರಿ?

ಏನ್ರೀ ಮಂಗಳ ನೆನ್ನೆ ಎಲ್ಲ ಹೇಳಿದ್ದೆ ಅಲ್ವೇನ್ರಿ, ಅಲ್ಲೇ Export ಅಂತ ಬಟನ್ ಇರುತ್ತೆ ನೋಡಿ, ಅದನ್ನ ಒತ್ತಿ,
ಆಮೇಲೆ ಡೆಸ್ಕ್ಟಾಪ್ ಅಲ್ಲಿ ಸೇವ್ ಮಾಡಿ.

ರೀ, ಇದನ್ನ ಕಳ್ಸೋದು ಹೆಂಗೆ ಹೇಳ್ರಿ?

ಜಿಮೇಲ್- ಗೆ ಲಾಗಿನ್ ಆಗಿ, ಅಲ್ಲಿದೆ ನೋಡಿ.. ಅದನ್ನ ಒತ್ತಿ, ಆಮೇಲೆ attachments  ಅಂತ ಇರುತ್ತೆ ಅದು ಕ್ಲಿಕ್ ಮಾಡಿ, ಈ ಡೆಸ್ಕ್ಟಾಪ್ ಅಲ್ಲಿ fileನ ಸೆಲೆಕ್ಟ್ ಮಾಡ್ಕೊಳ್ಳಿ.. ಆಮೇಲೆ "ಓಕೆ" ಒತ್ರಿ....

...........

...........

...........

ರೀ ಉಮಾ, ಇದು ಒಂದು ಎಂಟ್ರಿ ಮಾಡ್ಕೊಳ್ಳಿ, ಅಲ್ಲಿ ಒಂದು ಎಂಟ್ರಿ ಮಾಡ್ಸಿ ಹೋಗಪ್ಪ.

ಥ್ಯಾಂಕ್ಸ್ ಮೇಡಂ,

...........
...........
...........

ಉಮಾ ಮೇಡಂ ಎಂಟ್ರಿ ಮಾಡಿದ್ರು ಮತ್ತೆ ರಾಧ ಮೇಡಂ ಕಡೆಗೆ.

ಬಿಲ್ ಚೇಂಜ್ ಮಾಡ್ಸೋಕೆ ಬಂದಾಗ ರಾಧ ಮೇಡಂ ಸೀಟ್ ಅಲ್ಲಿ ಇರ್ಲಿಲ್ಲ, ಸುಮಾರು ಒಂದು ಘಂಟೆಯ ಕಾಲ ಅಲ್ಲೇ ವೈಟಿಂಗ್.... :) 

ಮಹಾಲಕ್ಷ್ಮಿ, ಏನ್ರೀ ನೀವು ಇವತ್ತು ಲೇಟ್ ಆಗಿ ಬಂದ್ರಿ, ಯಾಕೆ ಏನಾಯ್ತು?

ಏನಿಲ್ಲ ವೀಣಾ, ಮನೆ ಕೆಲ್ಸ ಇರುತ್ತೆ ಅಲ್ವ.. ಒಂದ್ಚೂರು ಲೇಟ್ ಆಯ್ತು. ಮಕ್ಳು ಆಫೀಸ್ ಗೆ ಹೋಗ್ಬೇಕು, ನಮ್ ಮನೆವ್ರು ಆಫೀಸ್ ಗೆ ಹೋಗ್ಬೇಕು, ಎಲ್ಲರ್ಗೂ ತಿಂಡಿ, ಊಟ ರೆಡಿ ಮಾಡಿ ಬರಬೇಕು ಅಲ್ವ..

ಅಲ್ಲ ರೀ, ನಿಮ್ ಮನೇಲಿ ಕೆಲಸದವಳು ಇಲ್ವಾ???

ಇಲ್ಲ ವೀಣಾ, ನಮ್ ಮನೇಲಿ ಎಲ್ಲ ಕೆಲ್ಸ ಹಂಚ್ಕೊಂಡು ಮಾಡ್ತೀವಿ, ಅದಕ್ಕೆ ಏನು ಅಷ್ಟು ಗೊತ್ತಾಗೋದಿಲ್ಲ.
ಒಂದು ಕರೆ ಬರುತ್ತೆ..
ಏನು ಪುಟ್ಟ??? ತಿಂಡಿ ತಿನ್ದ್ಯೇನೋ? ಏನೋ ಇವತ್ತು ಇಷ್ಟು ಬೇಗ ಮನೆಗೆ ಬರ್ತೀಯಾ???
...........
ಸಹನಾ ಪುಟ್ಟ, ಮನೆಗೆ ಬಂದಮೇಲೆ.. ಹುಷಾರಾಗಿ ಬಾಗಿಲು ಹಾಕ್ಕೊಂಡು ನಿದ್ದೆ ಮಾಡು. ಕೆಲ್ಸ ಏನು ಮಾಡೋಕೆ ಹೋಗಬೇಡ. ಬೋರ್ ಆದ್ರೆ ಟಿವಿ ನೋಡು ಪುಟ್ಟ.
...........
...........
...........
ಸರಿ ಇಡ್ಲಾ????
ವೀಣಾ, ತಗೊಳ್ರಿ ನೆನ್ನೆ ಚಕ್ಕುಲಿ ಮಾಡಿದ್ದೆ, ಹೆಂಗಿದೆ ಹೇಳಿ...

ಒಂದು ಘಂಟೆ ಅವಧಿಯಲ್ಲಿ ಇಂತ ಮಾತು-ಕತೆಗಳು ಬೇಜಾನ್ ಇದ್ವು... ೩೦ ನಿಮಿಷ ಆಗ್ತಾ ಇದ್ದಂಗೆ ಮಹಾಲಕ್ಷ್ಮಿ ಮೇಡಂ, ರಾಧ ಮೇಡಂ ನ ಕರ್ಯೋಕೆ ಶುರು ಮಾಡಿದ್ರು..

ರೀ ರಾಧ, ಬನ್ರಿ subscriber ಆಗ್ಲಿಂದ ಕಾಯ್ತಾ ಇದ್ದಾರೆ..

ಹ, ಬಂದೆ ರೀ, ಲಕ್ಷ್ಮಿ....

ಇನ್ನು ಸ್ವಲ್ಲ್ಪ ಹೊತ್ತು ಅಗೋ ಹೊತ್ಗೆ, ರಾಧ ಮೇಡಂ ಗಾಗಿ ಕಾಯ್ತಿದ್ದ ಇನ್ನೊಬ್ಬ subscriber ರೆಗಾಡೋಕೆ ಶುರು ಮಾಡಿದ.. ಮಹಾಲಕ್ಷ್ಮಿ ಆಂಟಿ ಎದ್ದು ಹೋಗಿ, ರೀ ರಾಧ, ಅಲ್ಲಿ ಒಬ್ರು subscriber ಜೋರ್-ಜೋರು ಮಾತಾಡ್ತಾ ಇದ್ದಾರೆ ಬನ್ರಿ.. ಎಷ್ಟು ಹೊತ್ತಿಂದ ಕಾಯ್ತಾ ಇದ್ದಾರೆ... ಅಂತ ಹೇಳಿದ್ರು...
ಬಂದಮೇಲೆ ಮೊದಲಿದ್ದ ವ್ಯಕ್ತಿಯ ಜೊತೆ ಸ್ವಲ್ಪ ಬಾಕ್ಸಿಂಗ್ ಆಡಿ, ಕಳ್ಸಿದ್ರು...

ಮೇಡಂ, ವೆರಿಫೈ ಮಾಡ್ಸಿದ್ದು ಆಯ್ತು, ಚೇಂಜ್ ಮಾಡಿಕೊಡಿ, ಈಗ್ಲೇ ದುಡ್ಡು ಕಟ್ಟಿ ಹೋಗ್ತೀನಿ.

ಇದು ಒಂದು xerox ಕಾಪಿ ಬೇಕಲ್ಲಪ್ಪ.. ಹೋಗಿ ಒಂದು ಕಾಪಿ ಮಾಡಿಸ್ಕೊಂಡು ಬರ್ತೀಯಾ???

ಮೇಡಂ, ಮೊದ್ಲು ನೀವು ಎಲ್ಲ ಲೆಕ್ಕ ಮಾಡಿ ಹಾಕಿ ಕೊಡಿ, ಆಮೇಲೆ ಕಾಪಿ ಮಾಡಿಸ್ಕೊಂಡು ತಂದು ಕೊಡ್ತೀನಿ, ಬಿಲ್ಲು ಕಟ್ಬೇಕು...

ಒಹ್, ೧೨ ರಿಂದ ೩೦ ವರೆಗೂ ಇರ್ಲಿಲ್ಲ್ವ, ಸರಿ.
after some calcualation, bill amount changed/corrected.

ಮರಿಬೇಡ, ತಂದು ಕೊಡಪ್ಪ.. xerox ಮಾಡ್ಸಿ ಅದು ಕೊಡು ಸಾಕು, ಇದು ಒರಿಜಿನಲ್ ನೀನೆ ಇಟ್ಕೋ...
ಥ್ಯಾಂಕ್ಸ್ ಹೇಳಿ, ಬಿಲ್ ಕಟ್ಟೋಕೆ ಹೋದೆ, Qನಲ್ಲಿ ಇದ್ದದ್ದು ೫ ಜನ, ನಾನು ಆರನೆಯವನು.

ಮೊದಲ್ನೇ ವ್ಯಕ್ತಿ ದು ಆಯ್ತು, ಎರಡನೆಯವರು ಒಬ್ಬ ಮಧ್ಯವಯಸ್ಕ ಅಂಕಲ್... ಮಗುನ ಭುಜದ ಮೇಲೆ ಮಲಗಿಸಿಕೊಂಡು ನಿಂತಿದ್ದಾರೆ, ಅವರ ಸರದಿ.

ಸಾರ್, ಬಿಲ್ ಅಮೌಂಟ್ ಚೇಂಜ್ ಆಗಿ swipe ಆಗಿದೆ, ಸ್ವಲ್ಪ ಸೈಡ್ ಅಲ್ಲಿ ವೈಟ್ ಮಾಡಿ, ನೋಡ್ತೀನಿ...

ಹತ್ತು ನಿಮಿಷ ಅದು ಇದು ಹಂಗೆ ವೇಸ್ಟ್, ...

ಸರ್, ಒಂದು ಕೆಲ್ಸ ಮಾಡಿ, ಮುಂದಿನ ಬಿಲ್ ಅಲ್ಲಿ ಈ extra ಅಮೌಂಟ್ ಪೇ ಆಗಿರೋದು ಕ್ರೆಡಿಟ್ ಆಗುತ್ತೆ.. ಏನು ಪ್ರಾಬ್ಲಮ್ ಇಲ್ಲ...

...........

...........

...........

ನನ್ನ ಸರದಿ ಬಂತು,
ಮೇಡಂ, ಬಿಲ್ ಅಮೌಂಟ್ ಚೇಂಜ್ ಆಗಿದೆ, ನೋಡಿ ಅಷ್ಟು ಮಾತ್ರ pay ಮಾಡ್ತೀನಿ, receipt ಆ ಅಮೌಂಟ್ ಗೆ ಹಾಕಿ.

...........
...........

ಸರಿ.

ಯಾಕೆ ಕೆಲ್ಸ ಬೇಗ ಆಗೋಲ್ಲ... (ಒಂದು ಅನುಭವ) - 1


ಶ್ರಾವಣ ಶುರುವಾಗಿತ್ತು, ಅದರ ಜೊತೆ ಹಬ್ಬಗಳ ಸರಮಾಲೆ. ನಮ್ಮಲ್ಲಿ ಕೇಳ್ಬೇಕೆ ಹಬ್ಬಗಳು ಅಂದ್ರೆ ಪೂಜೆ, ಪುನಸ್ಕಾರ, ವ್ರತ, ಅದು-ಇದು.. ಅದರ ಜೊತೆ ತಿಂಡಿ-ತಿನಿಸುಗಳು ಇದ್ದೇ ಇರ್ತಾವೆ. ಶ್ರಾವಣ ಶುರು ಆಗೋದಕ್ಕೂ, ತಿಂಡಿಗಳಿಗೂ, ಈ ಲೇಖನದ ಶೀರ್ಷಿಕೆಗೂ ಏನು ಸಂಬಂಧ?? ಜಾಸ್ತಿ ತಲೆ ಕೆಡಿಸ್ಕೋಬೇಡಿ, ಅರ್ಧ ದಿನದ ಅನುಭವ ಹೇಳ್ತೀನಿ, ಎಷ್ಟು ಬೇಗ ಓದಿ ಮುಗಿಸ್ತೀರೋ ಅಷ್ಟು ಸಮಯದಲ್ಲಿ ಅರ್ಥ ಮಾಡ್ಕೊಳ್ಳಿ...

ಜುಲೈ ೨೧ ಶನಿವಾರ, ಆಗ್ಲೇ ಒಂದು ತಿಂಗ್ಳಿಂದ ಮನೇಲಿ ಇಂಟರ್ನೆಟ್ ಕೆಲ್ಸ ಮಾಡ್ತಾ ಇರ್ಲಿಲ್ಲ, ಅದರ ವಿಷ್ಯವಾಗಿ, ಬಿಲ್ ಅಮೌಂಟ್ ಸರಿ ಮಾಡಿಸ್ಬೇಕಿತ್ತು ಹಾಗಾಗಿ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಛೇರಿಗೆ ಹೋಗಿದ್ದೆ. ಬೆಳಿಗ್ಗೆ ೧೦ ಘಂಟೆಗೆ BSNL ಆಫೀಸ್ ಗೆ ಹೋದವ್ನು ಮನೆಗೆ ವಾಪಾಸ್ ಬಂದಾಗ ಮಧ್ಯಾಹ್ನ  ೧.೪೫ ಅಷ್ಟೇ.

ಸಾರ್, ಬಿಲ್ ಕರ್ರೆಕ್ಶನ್ ಇದೆ, ಹನುಮಂತನಗರ ಏರಿಯಾ, ಯಾರ್ಹತ್ರ ಹೋಗ್ಬೇಕು??

ಅಲ್ಲಿ ರೈಟ್ ಸೈಡ್ ಆಫೀಸ್ ಒಳಗೆ ಹೋಗಿ ಕೇಳಿ ಸರ್...
ಬಲಗಡೆ ಇದ್ದ ಆಫೀಸ್ ಒಳಗೆ ಹೋದೆ,

ಮೇಡಂ, ಬಿಲ್ ಕರ್ರೆಕ್ಶನ್ ಇದೆ, ಹನುಮಂತನಗರ ಏರಿಯಾ, ಯಾರು ಇನ್ಚಾರ್ಜು???

ಅಲ್ಲಿ ರಾಧ ಅಂತ ಕೂತಿದಾರೆ ನೋಡಪ್ಪ, ಅಲ್ಲಿ ಹೋಗಿ ಮಾತಾಡು.

ಥ್ಯಾಂಕ್ಸ್ ಮೇಡಂ. :)

ನಮಸ್ಕಾರ ಮೇಡಂ, ಕಳೆದ ತಿಂಗ್ಳು ಫುಲ್ ಇಂಟರ್ನೆಟ್ ಇರ್ಲಿಲ್ಲ, ಅದಕ್ಕೆ ಬಿಲ್ ಅಲ್ಲಿ ಚೇಂಜ್ ಮಾಡಿಸ್ಬೇಕು ಅಮೌಂಟ್ ನ,

AE ಬರ್ಕೋಟ್ಟಿದಾರ, ನಮ್ದೆ ಪ್ರಾಬ್ಲಮ್ ಅಂತ?

ಹೌದು ಮೇಡಂ, ಇಲ್ಲಿದೆ ನೋಡಿ ಅವ್ರು ಕೊಟ್ಟಿರೋ ಲೆಟರ್.

ಸರಿ, ನಿಮಗೆ ಇಂಟರ್ನೆಟ್ ಪ್ರಾಬ್ಲಮ್ ಆಗಿತ್ತು, ನೀವು ಯುಸ್ ಮಾಡಿಲ್ಲ ಅಂತ ವೆರಿಫೈ ಆಗಬೇಕು, ಅಲ್ಲಿ ಹಿಂದೆ ವೆರಿಫಿಕೇಶನ್ ಮಾಡ್ತಾರೆ ಹೋಗಿ ಮಾಡಿಸ್ಕೊಂಡು ಬನ್ನಿ, ಆಮೇಲೆ ಬಿಲ್ ಕರೆಕ್ಟ್ ಮಾಡಿ ಕೊಡ್ತೀನಿ.

ಥ್ಯಾಂಕ್ಸ್ ಮೇಡಂ,
ಹಿಂದೆ ಇದ್ದ ಆಫೀಸ್ ಕಡೆ ಹೊರಟೆ....

ಮೇಡಂ, ಹೋದ ತಿಂಗ್ಳು ಇಂಟರ್ನೆಟ್ ಬರ್ತಾ ಇರ್ಲಿಲ್ಲ, ಅದಕ್ಕೆ ಬ್ರಾಡ್ಬ್ಯಾಂಡ್ ಯೂಸೇಜ್ ಆಗಿಲ್ಲ ಅಂತ ವೆರಿಫೈ ಮಾಡಿ ಕೊಡ್ಬೇಕು. ರಾಧ ಮೇಡಂ ವೆರಿಫೈ ಮಾಡಿಸ್ಕೊಂಡು ಬಾ ಅಂತ ಹೇಳಿದ್ರು, ಆಮೇಲೆ ಅವ್ರು ಬಿಲ್ ಚೇಂಜ್ ಮಾಡ್ತಾರಂತೆ.

ಹೌದಾ, ಕೊಡಪ್ಪ ಇಲ್ಲಿ,
logged into their server, verified whether any broadband usage was there or not.
ನೋಡಪ್ಪ, ಇಲ್ಲಿ ಜೂನ್ ೧೨ ರಿಂದ ಜೂನ್ ೩೦ ವರ್ಗು ಯುಸ್ ಮಾಡಿಲ್ಲ.. ಅದನ್ನು ಮಾತ್ರ  ಬರೆದು ಕೊಡ್ತೀನಿ, ಈ ತಿಂಗಳದ್ದು ಆಗೋಲ್ಲ, ಇನ್ನು ಬಿಲ್ ಜೆನೆರೆಟ್ ಆಗಿಲ್ಲ.

ಸರಿ ಮೇಡಂ, ಅಷ್ಟೇ ಕೊಡಿ.

ರೀ ಉಮಾ, ಇದು ಒಂದು ಎಂಟ್ರಿ ಮಾಡ್ಕೊಳ್ಳಿ, ಅಲ್ಲಿ ಒಂದು ಎಂಟ್ರಿ ಮಾಡ್ಸಿ ಹೋಗಪ್ಪ.

ಥ್ಯಾಂಕ್ಸ್ ಮೇಡಂ,
ಉಮಾ ಮೇಡಂ ಎಂಟ್ರಿ ಮಾಡಿದ್ರು ಮತ್ತೆ ರಾಧ ಮೇಡಂ ಕಡೆಗೆ.

ಮೇಡಂ, ವೆರಿಫೈ ಮಾಡ್ಸಿದ್ದು ಆಯ್ತು, ಚೇಂಜ್ ಮಾಡಿಕೊಡಿ, ಈಗ್ಲೇ ದುಡ್ಡು ಕಟ್ಟಿ ಹೋಗ್ತೀನಿ.

ಒಹ್, ೧೨ ರಿಂದ ೩೦ ವರೆಗೂ ಇರ್ಲಿಲ್ಲ್ವ, ಸರಿ.
after some calcualation, bill amount changed/corrected.
ಥ್ಯಾಂಕ್ಸ್ ಹೇಳಿ, ಬಿಲ್ ಕಟ್ಟೋಕೆ ಹೋದೆ, Qನಲ್ಲಿ ಇದ್ದದ್ದು ೫ ಜನ, ನಾನು ಆರನೆಯವನು.

ನನ್ನ ಸರದಿ ಬಂತು,
ಮೇಡಂ, ಬಿಲ್ ಅಮೌಂಟ್ ಚೇಂಜ್ ಆಗಿದೆ, ನೋಡಿ ಅಷ್ಟು ಮಾತ್ರ pay ಮಾಡ್ತೀನಿ, receipt ಆ ಅಮೌಂಟ್ ಗೆ ಹಾಕಿ.

ಸರಿ.

Complete process ಮುಗಿತು....
ಇದ್ರಲ್ಲಿ ಏನಿದೆ ವಿಶೇಷ, normal.. ನೀನು ಅಲ್ಲಿಗೆ ಹೋದೆ, ಬಿಲ್ ಸರಿ ಮಾಡಿಸಿ, ದುಡ್ಡು ಕಟ್ಟಿ ಬಂದೆ. ಮುಗಿತು ಅಲ್ವ????

ಆದ್ರೆ ಇಲ್ಲಿ ಯೋಚನೆ ಮಾಡ್ಬೇಕಾದ ವಿಷ್ಯ ಏನು ಅಂದ್ರೆ, ಇಷ್ಟಕ್ಕೆಲ್ಲ ಎಷ್ಟು ಟೈಮ್ ಆಗುತ್ತೆ ಅಂತ.
Verification - max 10 mins
Calculation/correction - max 7 mins
Bill pay - 15mins ( I was the 6th person in Q - 2mins for each person).
ಇದೆಲ್ಲಾ ಸೇರ್ಸಿ ಒಟ್ಟಾಗಿ ಹೇಳೋದಾದ್ರೆ, ಗರಿಷ್ಠ ಒಂದು ಘಂಟೆ ಆಗಬಹುದು ಅಲ್ವೇ?
ಹೀಗಿರ್ಬೇಕಿದ್ರೆ ೧೦ ರಿಂದ ೧.೪೫, ಮೂರು ಮುಕ್ಕಾಲು ಘಂಟೆ ಹೆಂಗಾಯ್ತು????  ಮುಂದಿನ ಆರ್ಟಿಕಲ್ ಓದಿ.... :) :D :P

http://gundachandru.blogspot.in/2012/08/2-complete-conversation.html

Tuesday, January 10, 2012

28 hours....


ಏನು ಎತ್ತ ಅಂತ ಗೊತ್ತಿಲ್ಲ, ಕಳೆದ ವರ್ಷ ಯಾಕೋ ಒಂದು ಆಸೆ ಮನಸಲ್ಲಿ ಬಂದ್ಬಿಡ್ತು ಕಣ್ರೀ.. ಏನಾದ್ರೂ ಆಗ್ಲಿ ಜೋಗ ಜಲಪಾತಕ್ಕೆ ಹೋಗ್ಲೇಬೇಕು ಅಂತ.... ಒಂದ್ಸಲ ಅದನ್ನ ಕಣ್ತುಂಬ ನೋಡ್ಲೇಬೇಕು ಅಂತ...

ಅಸೆ ಇದ್ರೂ ಏನ್ ಪ್ರಯೋಜನ, ಅದು ಕೈಗೂಡ್ಬೇಕು ಆಲ್ವಾ? ಹೋದ ವರ್ಷ ಜೂನ್ ಇಂದ ಕಾದು ಕಾದು, ಈಗ ಅದಕ್ಕೆ ಟೈಮ್ ಬಂತು. ಹೋದ ವರ್ಷ ಜೂನ್ ಇಂದ, ಒಂದಲ್ಲ ಒಂದು ಕಾರಣ, ಅಡ್ಡ ಬರ್ತಿತ್ತು, ಎಲ್ಲ ಸರಿ ಇದೆ ಅಂತ ಅನ್ಕೊಂಡ್ರೆ ಜೋಗದಲ್ಲಿ ನೀರಿಲ್ಲ ಅನ್ನೋ ಕೆಟ್ಟ ವಿಷ್ಯ ಬೇರೆ ಕಿವಿಗೆ ಬೀಳೋದು. ಹೀಗೆ ವರ್ಷ ಕಳೆದ್ಮೇಲೆ, ನಂಗು ತಲೆ ಒಂದು ಲೆವೆಲ್ಗೆ ಫುಲ್ ಕೆಟ್ಟಿತ್ತು, ಹಾಗಾಗಿ ಡಿಸೈಡ್ ಮಾಡ್ಕೊಂಡೆ, ಏನಾದ್ರೂ ಆಗಲಿ ಈ ಸಲ ಹೋಗ್ಲೇಬೇಕು, ಫೋಟೋ ತೆಗಿಲೇಬೇಕು ಅಂತ. ಸದ್ಯಕ್ಕೆ ನಾನು ಒಬ್ನೇ ಹೋಗಿ ಬರೋದು ಅಂತ ಅನ್ಕೊಂಡಿದ್ದೆ, ಯಾಕಂದ್ರೆ, ಜನರನ್ನ (friends) ರೆಡಿ ಮಾಡ್ಸಿ, ಅವ್ರಿಗೆ ಕಾಯ್ಕೊಂಡು, ಅವ್ರೆಲ್ಲಾ ಓಕೆ ಅಂದು ಆಮೇಲೆ ಹೋಗೋದು, ಉಸ್ಸ್ಸ್ಸ್!!!! ಬಾರಿ ರಿಸ್ಕ್ ಕೆಲ್ಸ, ಯಾರಿಗೂ ಹೇಳೋದು ಬೇಡ ಅಂತ ಅನ್ಕೊಂಡಿದ್ದೆ. ಆದ್ರೆ, ಮೇಲಿನವ್ನು ಇದಾನೆ ಅಲ್ವ.. ಬಾರಿ ಛತ್ರಿ, "ತಾನೊಂದು ಬಗೆದರೆ, ದೈವವೊಂದು ಬಗೆವುದು" ಅನ್ನೋ ಹಾಗೆ ಆಯ್ತು. ಕೊನೆಗೆ ಹೇಗೋ, ಯಾವ್ದೋ ವಿಷ್ಯಕ್ಕೆ, ಏನೋ ಮಾತಾಡ್ಬೇಕಿದ್ರೆ ಬಾಯ್ತಪ್ಪಿ ಹೇಳ್ಬಿಟ್ಟೆ ;) . ಮುಗಿತು ಕಥೆ, ಹೇಳಿದ ತಕ್ಷಣ ಒಂದು ವಿಕೆಟ್ ರೆಡಿ (ಸಂತು), ಇನ್ನು ಸ್ವಲ್ಪ ಹೊತ್ತಲ್ಲೇ ಇನ್ನೆರಡು (ಸ್ವಾಮಿ, ಚೇತನ್). So, ಒಂದು ಇದ್ದದ್ದು ನಾಲ್ಕಾಯ್ತು. ಮುಂದೆ???  ಸರಿ ಹೋಗೋಣ, 16th sept 2011 ಶುಕ್ರವಾರ  ರಾತ್ರಿ ಹೊರಟು, ಶನಿವಾರ ರಾತ್ರಿ ವಾಪಾಸ್ ಬರೋಣ ಅಂತ ಮಾತು ಕಥೆ ಮಾಡ್ಕೊಂದ್ವಿ. ಆದ್ರೆ ಕಾರಣಾಂತರಗಳಿಂದ, ಆ ದಿನ ಹೋಗೋದು ಬೇಡ ಅಂತ ಮತ್ತೆ ಪ್ಲಾನ್ ಚೇಂಜ್.  ಮುಂದಿನ ವಾರ ಹೋಗೋಣ (ಆಗಲು ನಾಲ್ಕೇ ಜನ ಅಂತ ಪ್ಲಾನ್ ಇದ್ದಿದ್ದು.). ಈ ಒಂದು ವಾರ ಗ್ಯಾಪ್ ಅಲ್ಲಿ... ;) ಮತ್ತೊಂದು ಟ್ವಿಸ್ಟ್. ಹ್ಹ ಹ ಹ. ನನ್ನ ಬಾಯಿ ಹಾಗೆ ಸುಮ್ನೆ ಇರೋದಿಲ್ಲ, ಇನ್ನೊಬ್ಬ ಫ್ರೆಂಡ್ ಹತ್ರ ಬಾಯ್ಬಿಟ್ಟೆ, Done, +2. ಎಷ್ಟಾಯ್ತು?? ಆರು. ಹ ಹ ಹ...

ಒಂದರಿಂದ ಆರು, ಅಲ್ಲಿಗೆ ನಿಲ್ತು ಅನ್ಕೊಂಡ್ರ??? ಇಲ್ಲಾ... ಇಲ್ವೆ ಇಲ್ಲಾ. :)  ಸುವರ್ಣ ಕರ್ನಾಟಕ ಸಾರಿಗೆ ಬಸ್ಸಲ್ಲಿ ಒಬ್ನೇ ಹೋಗೋದು ಅಂತ ಆಗಿದ್ದ ಪ್ಲಾನ್, ರಾಜಹಂಸ ಬಸ್ಸಲ್ಲಿ ನಾಲ್ಕು ಜನ ಹೋಗೋದು ಅಂತ ಆಯ್ತು, ಆಮೇಲೆ  ಆರು ಜನ ಟಾಟಾ ಸುಮೋ ಮಾಡ್ಕೊಂಡು ಹೋಗೋಣ ಪ್ಲಾನ್ ಚೇಂಜ್ ಮಾಡಿದ್ವಿ. ಕೊನೆಗೆ ಹೋಗಿದ್ದು TTಅಲ್ಲಿ, ಒಟ್ಟು ಹನ್ನೆರಡು!!!!

ಇಷ್ಟೆಲ್ಲಾ ಆಗಿ, ಫೈನಲ್ಲಿ ಶನಿವಾರ 24th sept 2011 ರಾತ್ರಿ ಒಂಬತ್ತಕ್ಕೆ ಹೊರಡೋದು ಅಂತ ಮಾತಾಡ್ಕೊಂಡು ಅದೇ ರೀತಿ, ಶನಿವಾರ ರಾತ್ರಿ ಒಂಬತ್ತು ಘಂಟೆಗೆ ಶುರು ಮಾಡಿದ್ವಿ ನಮ್ಮ ಪಯಣ, ಜೋಗ ಜಲಪಾತದ ಕಡೆಗೆ.  ನಾನು ಮನೆ ಇಂದ ಹೊರಟಾಗ 8.45PM, ಅಲ್ಲಿಂದ ಸೀತಾ ಸರ್ಕಲ್ ಗೆ ಹೋಗೋದು 9.00PM ಆಗಿತ್ತು. ಕದ್ರೆನಹಳ್ಳಿ ಪೆಟ್ರೋಲ್ ಬಂಕ್ ಮೊದಲ ಪಿಕ್-ಅಪ್ ಪಾಯಿಂಟ್, ಅಲ್ಲಿಂದ ಶುರು ಆಗಿ, ಎಲ್ಲರನು ಪಿಕ್ ಮಾಡಿ ಯಶವಂತಪುರ ರೀಚ್ ಆಗೋದು 10-10.15 ಆಯ್ತು. Dry ಜಾಮೂನ್ ತಿನ್ತಾ , ಮಾತು, ಕಾಲೆಳೆದಾಟ , ಕೀಟಲೆ, ಸ್ವಲ್ಪ ನಿದ್ದೆ ಇದು ನಮ್ಮ journey ಯ main ಕೀ ಪಾಯಿಂಟ್ಸ್... :) . ಯಶವಂತಪುರದಿಂದ ಸೀದಾ ಹೊರಟ ನಾವು, funny ದೆವ್ವದ ಮೂವಿ ನೋಡ್ಕೊಂಡು ಅಲ್ಲಿ ಇಲ್ಲಿ ಒಂದೆರಡು break ತಗೊಂಡು ಮುಂದೆ ಹೋಗ್ತಾ ಇದ್ವಿ. ಫಿಲಮ್ಮು ಸಕ್ಕತ್ತಾಗಿತ್ತು, ಅದನ್ನ ನೋಡಿ ನಮ್ಮ ಗೆಳಯರಲ್ಲಿ ಕೆಲವರು ಒಂದ್ಚೂರು ಹೆದರ್ಕೊಂಡಿದ್ದು ಆಯ್ತು,  ಇದೆಲ್ಲದರ ಮಧ್ಯೆ, break ಅಲ್ಲಿ ಗೊತ್ತಾದ ಒಂದು ಮುಖ್ಯವಾದ ವಿಷ್ಯ ಏನು ಅಂದ್ರೆ, ಗಂಡಸರ ಬೆಲೆಯನ್ನು normalize/generalize ಮಾಡಿ, ಒಂದು ಬೆಲೆ ಕಟ್ಟಿರೋದು. ನಿಮಗೆ ಆ ರೇಟ್ ಏನಾದ್ರು ಗೊತ್ತಾ???? ಗೊತ್ತಿಲ್ಲ ಅಂದ್ರೆ ಈ ಪಿಕ್ಚರ್ ನೋಡಿ :) ;) .ನಾನು ಮತ್ತೆ ನಮ್ಮ ಗೆಳೆಯರು ತಿಂಡಿ ಪ್ರಿಯರು ಅಂತ ಏನಲ್ಲ, ಏನೋ ಹೊಟ್ಟೆ ಹಸಿದಾಗ.. ಸ್ವಲ್ಪ ಸ್ವಲ್ಪ ತಿಂತೀವಿ ಅಷ್ಟೇ. ಹಿಂಗೆ ಸೆಕೆಂಡ್ ಬ್ರೇಕ್ ಅಲ್ಲಿ ಲೈಟ್ ಆಗಿ ಒಂದೆರಡ್-ಮೂರು ಇಡ್ಲಿ ತಿಂದು ಚಾ. ಕುಡಿದು... ಮತ್ತೆ ಗಾಡಿ ಏರ್ಕೊಂಡು ಜೈ ಅಂತ ಮುಂದೆ ಹೋದ್ವಿ. ಅಲ್ಲಿಂದ ಹೊರಟು ಜೋಗಜಲಪಾತ ರೀಚ್ ಅದಾಗ ಬೆಳಗ್ಗೆ 5.30 ಆಗಿತ್ತು. ವಾಹ್.... ವಾಹ್...... ಮುಂಜಾವಿನ ಮುಸುಕಿನಲಿ ಮಂಜಿನ ಮಾಲೆಯಲಿ ಕಂಡಳು ಶರಾವತಿ.. ಆ ನಿಶ್ಯಬ್ಧ ಜಾಗದಲ್ಲಿ, ರೋರರ್ ನ ಸದ್ದು ಬಿಟ್ಟು ಬೇರೆ ಏನು ಕೇಳ್ತಾ ಇರ್ಲಿಲ್ಲ. ನೋಡೋದು ಕಣ್ಣಿಗೆ ತಂಪು, ಕೇಳೋದು ಕಿವಿಗೆ ಇಂಪು... ಆಹಾ.... ಅದಕ್ಕೆ ಕವಿ ಹೇಳಿರೋದು, "ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ಗುಂಡಿ" ಅಂತ.

ಅಂದ್ಕೊಂಡಿದ್ದಂಗೆ ಗೆಸ್ಟ್ಹೌಸ್ ಬುಕ್ ಆಗ್ಲಿಲ್ಲ, ಯಾವ್ದೋ ಕಿರಿಕ್ ಪಾರ್ಟಿ ಎಂಟ್ರಿ ಇಂದ, ಏನು ಮಾಡೋಕೆ ಆಗೋಲ್ಲ.. ಇದು ನಮ್ಮ ದೇಶ. ಅದರಿಂದ ನಾವು ಫ್ರೆಶ್ ಆಗೋಕೆ ಬೇರೆ alternate ವ್ಯವಸ್ಥೆ ನೋಡ್ಕೊಬೇಕಾಯ್ತು. ನಂದನ್ ಅವರು ಅವರ ಪರಿಚಯದ ದೇವಸ್ಥಾನದಲ್ಲಿ ವ್ಯವಸ್ಥೆ ಮಾಡಿದ್ರು, ಅದರ ಜೊತೆ ಒಳ್ಳೆ ಭರ್ಜರಿ ತಿಂಡಿ ಕೂಡ ಇತ್ತು.. ;)  .  ಆ ದೇವಸ್ಥಾನ ಇರೋದು, ವಡಮ್ಬೈಲು (vadanbail) ಊರಲ್ಲಿ, ಆ ಊರಿಗೆ ಹೋಗ್ಬೇಕು ಅಂದ್ರೆ restricted area ಮೂಲಕ ಹೋಗ್ಬೇಕು, photography strictly prohibited, ಏನ್ ಮಾಡೋದು.....?? permission ತಗೊಂಡು ಒಳಗೆ ಹೋಗ್ತಾ ಇದ್ವಿ. ಬಿತ್ತು ನೋಡಿ ನಮ್ ಕಣ್ಣಿಗೆ ಒಂದು ಸುಂದರ view point. ಕೈ ಸುಮ್ನೆ ಇರುತ್ಯೇ?? ತಲೆಲಿ ಫೋಟೋ ತೆಗಿಬೇಕು ಅಂತ ಯೋಚನೆ ಬರೋದಿಲ್ವೇ? ಬಂತು, ಬಂದೇಬಿಡ್ತು... ಎಲ್ಲ ಚಕಾ-ಚಕ್ ಅಂತ ಇಳಿದು ಪೋಸ್ ಕೊಡೋಕೆ ರೆಡಿ ಆಗ್ಬಿಟ್ರು. ನಮ್ ಕ್ಯಾಮೆರಾಗಳ ಕಚಕ್-ಕಚಕ್ ಸೌಂಡ್ ಜಾಸ್ತಿ ಆಯ್ತು. ಅದು ಬಹುಶಃ ಕೇಳಿಸ್ತು ಅನ್ಸುತ್ತೆ, ದೊಡ್ಡ ಬಸ್ಸಲ್ಲಿ ಬಂದ್ರು ನಮ್ ಮಾವಂದಿರು. ಪೂಜೆ ಶುರು ಆಯ್ತು, ಕ್ಯಾಮೆರಾ ಕಿತ್ಕೊಳೋದು ಬಾಕಿ, ಆದ್ರೆ ಹೇಗೋ ಬಚಾವ್. ಮುಂದೆ ಚೆಕ್ ಪಾಯಿಂಟ್ ಅಲ್ಲಿ, ಕಾಯ್ತಾ ಕೂತಿದ್ರು. ನಾವು ಅಲ್ಲಿ ರೆಅಚ್ ಆಗ್ತಿದ್ದಂಗೆ ಕ್ಯಾಚ್ ಹಾಕ್ಕೊಂಡು, ತೆಗೆದಿದ್ದ ಫೋಟೋಸ್ ಡಿಲೀಟ್ ಮಾಡ್ಸಿದ್ರು. ನಮ್ಮ ಪುಣ್ಯ ಇಷ್ಟೇ ಅಂತ ಮುಂದೆ ಹೋಗಬೇಕಾಯ್ತು!!! ದೇವಸ್ಥಾನಕ್ಕೆ ಹೋದ್ಮೇಲೆ, ಸ್ನಾನ ಆಯ್ತು, ಸ್ವಲ್ಪ ರೌಂಡ್ ಮತ್ತೆ ಫೋಟೋ ಸೆಷನ್ ಮುಗಿದ್ಮೇಲೆ, heavy batting breakfast. ತಿಂಡಿ ತೀರ್ಥ ಆದ್ಮೇಲೆ ಮತ್ತೆ ಜೋಗದ ಕಡೆಗೆ ಪಯಣ. ಜೋಗ ತಲುಪಿದಮೇಲೆ ಗೊತ್ತಾಯ್ತು, ಹೆಂಗೆ ಬಿಸಿಲು ಅಂದ್ರೆ ಅಂತ, ಎಲ್ಲರು ಹೇಳ್ತಿದ್ರು,,, ಹುಷಾರು ಮಳೆ ಇದೆ, ಮಳೆ-ಮಾರು ಜೋಪಾನ...ಆಹಾ!!! ಅದಕ್ಕೆ ಮಳೆ ಅಂದ್ರೆ.. ಪರಮಾತ್ಮ ತೃಪ್ತನಾಗ್ತಾನೆ. :) .  ಅಲ್ಲಿ ಒಂದಷ್ಟು ಫೋಟೋ ತೆಗೆದ್ಮೇಲೆ, ಆನ್ ಸ್ಪಾಟ್ ಡೆಲಿವರಿ ಫೋಟೋ ಕೂಡ ಕ್ಲಿಕ್ ಮಾಡ್ಸಿ, ಫೋಟೋದು ಕಾಪಿ ತಗೊಂಡು, ಕೆಳಗೆ  ಇಲ್ಯೋಣ ಅಂದ್ಕೊಂಡು ಮುಂದೆ ಇಳಿಯೋಕೆ ಶುರು  ಮಾಡ್ಕೊಂದ್ವಿ. ಅರ್ಧ ಇಳಿಯೋ ಹೊತ್ಗೆ ಸುಸ್ತಾದಂಗೆ ಅನಿಸ್ತು (ನನಗಲ್ಲ ;) :ದ ), ಮತ್ತೆ ಅದು ನಮ್ಮ ಪ್ಲಾನ್ ಅಲ್ಲಿ ಇಲ್ಲದೆ ಇದ್ದಿದ್ರಿಂದ ಮತ್ತೆ ವಾಪಾಸ್ ಮೇಲೆ ಬಂದ್ಬಿಡೋಣ ಅಂತ ಅಲ್ಲಿಂದ ಕಾಲು ಕಿತ್ವಿ. ಮೇಲಿನ ಬಿಸಿಲು, ನೀರಿನ ಹವೆ, ಸುತ್ತ ಮುತ್ತಲಿನ ಗಿಡಗಳು, ಎಲ್ಲ ಮಿಕ್ಸ್ ಆಗಿ, ಬೆವರು, ಸುಸ್ತು, ಆಯಾಸ, ಆರಾಮ, ಮನೋಲ್ಲಾಸ, ಖುಷಿ ಒಟ್ಟೊಟ್ಟಿಗೆ ಆಗ್ತಿತ್ತು. ವಾಪಾಸ್ ಬರ್ತಾ, ನಮ್ಮೋರು ತುಂಬ ನಿಷ್ಟಾವಂತರು, ಬೆಳ್ಗೆ ಆಗಿದ್ದ ತಿಂಡಿ ಬಿಟ್ಟು ಮಧ್ಯಾಹ್ನ ಊಟ ಮಾತ್ರ ಮಾಡೋರು. ಈ ಮಧ್ಯೆ ಊಟ/ತಿಂಡಿ ತಿನ್ನೋದು ಬಹಳ ಕಡಿಮೆ, ಅದರಿಂದಲೇ ಒಂದು 5-6 ಸೌತೆಕಾಯಿ, 3-4 bottle  ಜೀರಿಗೆ ಸೋಡಾ,  ಪಲ್ಪಿ ಆರೆಂಜ್. etc. etc.  ಅಷ್ಟೇ ತಿಂತಾ /ಕುಡಿತಾ ಮೇಲೆ ಬಂದು, ಆಮೇಲೆ ನಮ್ಮ ಪಯಣ  ಮುಂಗಾರುಮಳೆ ಸ್ಪಾಟ್ ಕಡೆಗೆ.  ವಾವ್!! ವಾವ್!! ಅದ್ಭುತ... ಮೇಲಿಂದ ಬೀಳ್ತಿರೋ ಆ ಜೋಗದ ನೀರು ನೋಡೋಕೆ, ಏನೋ ಖುಷಿ.... ಅಲ್ಲಿನ ಪ್ರಪಾತದ ಆಳ, ಆ ನೀರಿನ ವೇಗ, ಹಾಲಿನಂತ ಬಣ್ಣ, ಕೆಳಗೆ ಬಿದ್ದಾಗ ಕಾಣುವ ಹಾಲಿನ ನೊರೆಯ ರೀತಿ, ಆ ನೀರಿನ ಹವೆಯಲ್ಲಿ ಸೂರ್ಯಕಿರಣ ನುಗ್ಗಿ ಅದರಿಂದಾದ ಕಾಮನಬಿಲ್ಲು.ಆಹಾ....! ಕಣ್ಣಿಗೆ ತಂಪು, ಮನಸಿಗೆ ಸಂತೋಷ. ನೋಡಿದ್ದಾಯ್ತು, ಆಮೇಲೆ ಏನು???  ನೀರಿಗೆ ಜಾರಿದ್ದೆ. ;)  ಬಿಸಿಲಲ್ಲಿ ಫುಲ್ ಬೆಂದು ಬೆವತಿತ್ತು ಜೀವ, ನೀರು ಕಾಣಿಸ್ತು, ಬೀಳೋಕೆ ಕೂಡ ಚೆನ್ನಾಗಿ ಅನಿಸ್ತು, ಬಿದ್ವಿ,  ಮಜಾ ಮಾಡಿದ್ವಿ :) ಆಮೇಲೆ ಎದ್ದು ಬಂದ್ವಿ. ಅಲ್ಲಿಂದ ಮತ್ತೆ ನಮ್ ಗಾಡಿ ಇರೋ ಜಾಗಕ್ಕೆ ಬರಬೇಕು ಅಂದ್ರೆ ನಡ್ಕೊಂಡು ಬರಬೇಕು ಅಲ್ವಾ?? ಅದೇ ಬಿಸಿಲು ಅಲ್ವಾ, ಮತ್ತೆ ಆಯಾಸ??? ;)  ಗಾಡಿ ಹತ್ರ ಬಂದ ತಕ್ಷಣ, ಏನಾದ್ರು ತಣ್ಣಗೆ ಕುಡಿಬೇಕು ಅನಿಸ್ತು ಎಲ್ಲರ್ಗೂ,  ಹಾಗಾಗಿ ಲೈಟ್ ಆಗಿ ಮಜ್ಜಿಗೆ ಕುಡಿದ್ವಿ. ಇದ್ದ ಹನ್ನೆರಡು ಜನರಲ್ಲಿ, ಒಂದಿಬ್ರು ಕುಡಿಲಿಲ್ಲ ಅನ್ಸುತ್ತೆ, ನಂಗೆ ಜ್ಞಾಪಕ ಇಲ್ಲಾ, ಒಟ್ಟು ಲೋಟಗಳ ಸಂಖ್ಯೆ ಮೂವತ್ತು (ನಾನು ಕೇವಲ ಮೂರುವರೆ- ನಾಲ್ಕುವರೆ ಲೋಟ ಕುಡಿದಿದ್ದೆ)  ದಾಟಿತ್ತು ಅಷ್ಟೇ. ಇಷ್ಟಾಯ್ತು ಮುಂದೆ???? ಮುಂದೆ ಇಕ್ಕೆರಿ ಕಡೆಗೆ... :)

ಸಾಗರಕ್ಕೆ ಹೋಗಿ, ಊಟ ಮಾಡಿ ಇಕ್ಕೆರಿಗೆ ಹೋದ್ವಿ. ಅಲ್ಲಿನ ಇತಿಹಾಸ ಪ್ರಸಿದ್ದ ದೇವಸ್ಥಾನ, ಅಲ್ಲಿ ದೇವರ ದರ್ಶನ ಮಾಡಿ ಮನೆ ಕಡೆ ಮುಖ ಮಾಡಿದ್ವಿ.
ಬರ್ತಾ ದಾರೀಲಿ ಮತ್ತೆ ಒಂದ್ಸಲ ಕಾಫಿ/ಟೀ ಆಯ್ತು, ಊಟ K.B. Cross ಅಲ್ಲಿ ಮುಗ್ಸಿ ಬೆಂಗಳೂರಿನೆಡೆಗೆ ಬಂದ್ವಿ. ನಾನು ಮನೆ ರೀಚ್ ಅದಾಗ 12.45 AM(26th Sept 2011) ಆಗಿತ್ತು.















for more pics... : click here